ಆ್ಯಪ್ನಗರ

ಮಾಯಾ ಕಾಲದ ಸ್ಮಾರಕ ಹಗರಣಕ್ಕೆ ಮರುಜೀವ

ಗಣಿಗಾರಿಕೆ ಹಗರಣದಲ್ಲಿ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್‌ ಯಾದವ್‌ ಅವರ ಹೆಸರು ಕೇಳಿಬಂದ ಬಳಿಕ, ಈಗ ಮಾಯಾ ಅವರ ಸ್ಮಾರಕ ಹಗರಣ ಬಿಚ್ಚಿಕೊಂಡಂತಾಗಿದೆ.

Vijaya Karnataka 1 Feb 2019, 5:00 am
111 ಕೋಟಿ ಅವ್ಯವಹಾರ ಆರೋಪ | ಇ.ಡಿ.ಯಿಂದ ಹಲವೆಡೆ ದಾಳಿ
Vijaya Karnataka Web mayawati


ಲಖನೌ: ಬಿಎಸ್‌ಪಿ ವರಿಷ್ಠ ನಾಯಕಿ ಮಾಯಾವತಿ ಅವರ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ 'ಸ್ಮಾರಕ ಹಗರಣ' ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮರುಜೀವ ಪಡೆದಿದೆ. ಯೋಜನೆಯಲ್ಲಿ 111 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆಪಾದನೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಉತ್ತರ ಪ್ರದೇಶದ ಹಲವೆಡೆ ಗುರುವಾರ ದಾಳಿ ನಡೆಸಿದೆ.

ಗಣಿಗಾರಿಕೆ ಹಗರಣದಲ್ಲಿ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್‌ ಯಾದವ್‌ ಅವರ ಹೆಸರು ಕೇಳಿಬಂದ ಬಳಿಕ, ಈಗ ಮಾಯಾ ಅವರ ಸ್ಮಾರಕ ಹಗರಣ ಬಿಚ್ಚಿಕೊಂಡಂತಾಗಿದೆ.

2014ರಲ್ಲಿ ರಾಜ್ಯ ಜಾಗೃತ ದಳ ನೀಡಿದ ದೂರನ್ನು ಆಧಾರವಾಗಿಟ್ಟುಕೊಂಡ ಜಾರಿ ನಿರ್ದೇಶನಾಲಯ, ಹಣ ಲೇವಾದೇವಿ ತಡೆ ಕಾಯಿದೆ(ಪಿಎಂಎಲ್‌ಎ)ಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದೆ. ಗುರುವಾರ ಏಳು ಸ್ಥಳಗಳಿಗೆ ದಾಳಿ ನಡೆಸಲಾಗಿದ್ದು, ಇವರಲ್ಲಿ ಕೆಲವು ಅಧಿಕಾರಿಗಳು ಮತ್ತು ಕೆಲವು ಖಾಸಗಿ ವ್ಯಕ್ತಿಗಳಿದ್ದಾರೆ.

2007-2012ರ ಅವಧಿಯಲ್ಲಿ ಮಾಯಾವತಿ ಅವರು 2600 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಹಲವೆಡೆ ಬಿಎಸ್‌ಪಿ ನಾಯಕ ಕಾನ್ಶಿರಾಮ್‌ ಮತ್ತು ಪಕ್ಷದ ಚಿಹ್ನೆಯಾಗಿರುವ 'ಆನೆ'ಯ ಬೃಹತ್‌ ಪ್ರತಿಮೆಗಳನ್ನು ನಿಲ್ಲಿಸಿದ್ದರು. ಇದರಲ್ಲಿ ನಡೆದ ಭ್ರಷ್ಟಾಚಾರದಿಂದ ಖಜಾನೆಗೆ 111 ಕೋಟಿ ನಷ್ಟವಾಗಿದೆ ಮತ್ತು ಕೆಲವು ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಲೋಕಾಯುಕ್ತರು ಈಗಾಗಲೇ ಮಾಯಾವತಿ ಸಂಪುಟದ ಇಬ್ಬರು ಸಚಿವರಾದ ನಸೀಮುದ್ದೀನ್‌ ಸಿದ್ದಿಕಿ, ಬಾಬು ಸಿಂಗ್‌ ಕುಶ್ವಾಹಾ, 12 ಬಿಎಸ್‌ಪಿ ಶಾಸಕರು ಕೆಲವು ಅಧಿಕಾರಿಗಳನ್ನು ಸಾಮಗ್ರಿ ಖರೀದಿ ವಿಷಯದಲ್ಲಿ ಅಕ್ರಮ ಎಸಗಿದ್ದಕ್ಕಾಗಿ ತಪ್ಪಿತಸ್ಥರೆಂದು ಗುರುತಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ