ಹೊಸದಿಲ್ಲಿ: ಏರ್ಸೆಲ್-ಮ್ಯಾಕ್ಸಿಸ್ ಹಣ ದುರ್ಬಳಕೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮಂಗಳವಾರ ಮತ್ತೆ ಸುದೀರ್ಘ ವಿಚಾರಣೆಗೆ ಒಳಪಡಿಸಿದರು.
ಜೂನ್ 5 ರಂದು ವಿಚಾರಣೆ ಎದುರಿಸಿದ್ದ ಚಿದು ಮತ್ತೆ 6 ಗಂಟೆ ವಿಚಾರಣೆ ಎದುರಿಸಿದರು. ಬೆಳಗ್ಗೆ 11 ಗಂಟೆಗೆ ಇ.ಡಿ ಕಚೇರಿಗೆ ಆಗಮಿಸಿದ ಅವರು ಸಂಜೆ 5 ಗಂಟೆವರೆಗೂ ಅಲ್ಲಿದ್ದರು. ಅಧಿಕಾರಿಗಳು ಹೊಸ ಪ್ರಶ್ನೆಗಳನ್ನು ಮುಂದಿಟ್ಟು ಚಿದು ಅವರಿಂದ ಹೇಳಿಕೆಗಳನ್ನು ಪಡೆದುಕೊಂಡರು ಮೂಲಗಳು ಹೇಳಿವೆ.
ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿದಂಬರಂ ಇ.ಡಿಯಿಂದ ಮತ್ತೊಂದು ಸುತ್ತಿನ ವಿಚಾರಣೆ ಎದುರಿಸಿದ್ದು, ಎಂದಿನಂತೆ ಯಾವುದೇ ತಪ್ಪುಗಳನ್ನು ಮಾಡಿಲ್ಲವೆಂಬ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಸುಮಾರು 3,500 ಕೋಟಿ ರೂ. ಅಕ್ರಮದ ಈ ಪ್ರಕರಣದಲ್ಲಿ ಚಿದು ವಿಚಾರಣೆಗೆ ಹಾಜರಾಗಿದ್ದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಇದೇ ಕೇಸ್ನಲ್ಲಿ ಅವರ ಪುತ್ರ ಕಾರ್ತಿಯನ್ನೂ ವಿಚಾರಣೆಗೆ ಒಳಪಡಿಸಿತ್ತು.
ಏನಿದು ಪ್ರಕರಣ?: ಏರ್ಸೆಲ್ ಸಂಸ್ಥೆ 2006ರಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರೂಪಾಯಿ ಎಫ್ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ 'ಸಿಸಿಇಎಗೆ' ಆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು. ಈಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆಗ ಚಿದಂಬರಂ ಹಣಕಾಸು ಸಚಿವರಾಗಿದ್ದರು. ವಾಸ್ತವದಲ್ಲಿ 3,500 ಕೋಟಿ ರೂಪಾಯಿ ನೇರ ಹೂಡಿಕೆಯಾಗಿದೆ ಎನ್ನುವುದು ತನಿಖಾ ಸಂಸ್ಥೆ ಆರೋಪವಾಗಿದೆ.
ಜೂನ್ 5 ರಂದು ವಿಚಾರಣೆ ಎದುರಿಸಿದ್ದ ಚಿದು ಮತ್ತೆ 6 ಗಂಟೆ ವಿಚಾರಣೆ ಎದುರಿಸಿದರು. ಬೆಳಗ್ಗೆ 11 ಗಂಟೆಗೆ ಇ.ಡಿ ಕಚೇರಿಗೆ ಆಗಮಿಸಿದ ಅವರು ಸಂಜೆ 5 ಗಂಟೆವರೆಗೂ ಅಲ್ಲಿದ್ದರು. ಅಧಿಕಾರಿಗಳು ಹೊಸ ಪ್ರಶ್ನೆಗಳನ್ನು ಮುಂದಿಟ್ಟು ಚಿದು ಅವರಿಂದ ಹೇಳಿಕೆಗಳನ್ನು ಪಡೆದುಕೊಂಡರು ಮೂಲಗಳು ಹೇಳಿವೆ.
ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿದಂಬರಂ ಇ.ಡಿಯಿಂದ ಮತ್ತೊಂದು ಸುತ್ತಿನ ವಿಚಾರಣೆ ಎದುರಿಸಿದ್ದು, ಎಂದಿನಂತೆ ಯಾವುದೇ ತಪ್ಪುಗಳನ್ನು ಮಾಡಿಲ್ಲವೆಂಬ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಸುಮಾರು 3,500 ಕೋಟಿ ರೂ. ಅಕ್ರಮದ ಈ ಪ್ರಕರಣದಲ್ಲಿ ಚಿದು ವಿಚಾರಣೆಗೆ ಹಾಜರಾಗಿದ್ದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಇದೇ ಕೇಸ್ನಲ್ಲಿ ಅವರ ಪುತ್ರ ಕಾರ್ತಿಯನ್ನೂ ವಿಚಾರಣೆಗೆ ಒಳಪಡಿಸಿತ್ತು.
ಏನಿದು ಪ್ರಕರಣ?: ಏರ್ಸೆಲ್ ಸಂಸ್ಥೆ 2006ರಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರೂಪಾಯಿ ಎಫ್ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ 'ಸಿಸಿಇಎಗೆ' ಆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು. ಈಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆಗ ಚಿದಂಬರಂ ಹಣಕಾಸು ಸಚಿವರಾಗಿದ್ದರು. ವಾಸ್ತವದಲ್ಲಿ 3,500 ಕೋಟಿ ರೂಪಾಯಿ ನೇರ ಹೂಡಿಕೆಯಾಗಿದೆ ಎನ್ನುವುದು ತನಿಖಾ ಸಂಸ್ಥೆ ಆರೋಪವಾಗಿದೆ.