ಆ್ಯಪ್ನಗರ

ಮಾವುತನ ಹತ್ಯೆಗೈದ ಆನೆ

ತಮಿಳುನಾಡಿನ ತಿರುಚ್ಚಿಯಲ್ಲಿ ಆನೆಯೊಂದು ರೊಚ್ಚಿಗೆದ್ದು ಮಾವುತನನ್ನೇ ಹತ್ಯೆಗೈದಿದೆ.

Vijaya Karnataka Web 25 May 2018, 6:15 pm
ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಆನೆಯೊಂದು ರೊಚ್ಚಿಗೆದ್ದು ಮಾವುತನನ್ನೇ ಹತ್ಯೆಗೈದಿದೆ. ಸಮಯಪುರಂ ದೇಗುಲದ ಆವರಣದಲ್ಲಿದ್ದ 9 ವರ್ಷದ ದೇಗುಲದ ಆನೆ ಮಾಸಿನಿ ಶುಕ್ರವಾರ ಬೆಳಗ್ಗೆ ಏಕಾಏಕಿ ದಾಂಧಲೆ ನಡೆಸಿದೆ. ಈ ಸಂದರ್ಭದಲ್ಲಿ ಆನೆಯ ಮಾವುತ ಗಜೇಂದ್ರನ್ (50) ಮಾಸಿನಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಆದರೆ ಆನೆ ಮಾವುತನನ್ನೇ ಎತ್ತಿ ನೆಲಕ್ಕೆ ಬೀಸಿ ಒಗೆದಿದೆ.
Vijaya Karnataka Web elephant killed.


ಆನೆಯ ದಾಳಿಗೆ ಸಿಲುಕಿದ ಮಾವುತ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಭಕ್ತರು ದೇಗುಲದಿಂದ ಓಡುವ ವೇಳೆ ಗಾಯಗೊಂಡಿದ್ದಾರೆ. ದೇಗುಲದ ದ್ವಾರವನ್ನು ಮುಚ್ಚಲಾಗಿದ್ದು, ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ