ಕೊಟ್ಟಾಯಂ: ಏಳು ವರ್ಷದ ಮಗನನ್ನು ಹೆಗಲಲ್ಲಿ ಹೊತ್ತು ಸಾಗುತ್ತಿದ್ದ ಅಯ್ಯಪ್ಪ ಭಕ್ತನನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ. ಮಂಗಳವಾರ ರಾತ್ರಿ 1 ಗಂಟೆಗೆ ಎರುಮೇಲಿಯಿಂದ ಪಂಪಾಗೆ ಹೋಗುವ ಕಾಡು ದಾರಿಯಲ್ಲಿ ಈ ಘಟನೆ ನಡೆದಿದೆ. ಸೇಲಂ ಮೂಲದ ಪರಮಶಿವಂ ಅವರು ಇತರ 13 ಭಕ್ತರ ಜತೆ ಸಾಗುತ್ತಿದ್ದಾಗ ಆನೆ ದಾಳಿ ನಡೆಸಿದೆ. ಉಳಿದವರೆಲ್ಲರೂ ಓಡಿ ತಪ್ಪಿಸಿಕೊಂಡರೆ, ಮಗನನ್ನು ಹೆಗಲಲ್ಲಿ ಹೊತ್ತಿದ್ದ ಪರಮಶಿವಂ ಅವರಿಗೆ ಹೆಚ್ಚು ದೂರ ಓಡಲೂ ಆಗಲಿಲ್ಲ. ಈ ನಡುವೆ ಮಗ ಹೇಗೋ ಆನೆಯಿಂದ ತಪ್ಪಿಸಿಕೊಂಡಿದ್ದಾನೆ.
ಕಾಡಾನೆ ದಾಳಿಗೆ ಶಬರಿಮಲೆಗೆ ಹೋಗುತ್ತಿದ್ದ ಯಾತ್ರಿಕ ಸಾವು
ಸೇಲಂ ಮೂಲದ ಪರಮಶಿವಂ ಅವರು ಇತರ 13 ಭಕ್ತರ ಜತೆ ಸಾಗುತ್ತಿದ್ದಾಗ ಆನೆ ದಾಳಿ ನಡೆಸಿದೆ. ಉಳಿದವರೆಲ್ಲರೂ ಓಡಿ ತಪ್ಪಿಸಿಕೊಂಡರೆ, ಮಗನನ್ನು ಹೆಗಲಲ್ಲಿ ಹೊತ್ತಿದ್ದ ಪರಮಶಿವಂ ಅವರಿಗೆ ಹೆಚ್ಚು ದೂರ ಓಡಲೂ ಆಗಲಿಲ್ಲ. ಈ ನಡುವೆ ಮಗ ಹೇಗೋ ಆನೆಯಿಂದ ತಪ್ಪಿಸಿಕೊಂಡಿದ್ದಾನೆ.
Vijaya Karnataka 10 Jan 2019, 5:00 am