ಆ್ಯಪ್ನಗರ

ನೌಕರನ ಅಪಹರಣ, ಕೊಲೆ: ಶರವಣ ಭವನ ಮಾಲೀಕನಿಗೆ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಶಾಂತಕುಮಾರ್‌ ಅವರ ಪತ್ನಿ ಹಾಗೂ ಹೋಟೆಲ್ ಶವರಣ ಭವನದ ನೌಕರ ರಾಮಸ್ವಾಮಿ ಅವರ ಪುತ್ರಿ ಜೀವಜ್ಯೋತಿ ಅವರನ್ನು ಮದುವೆಯಾಗಲು ಪಿ. ರಾಜಗೋಪಾಲ್ ಬಯಸಿದ್ದರು. ಆದರೆ, ಜೀವಜ್ಯೋತಿಗೆ ರಾಜಗೋಪಾಲ್ ಮದುವೆಯಾಗಲು ಇಷ್ಟವಿರಲಿಲ್ಲ. ಹೀಗಾಗಿ ಆತ ಎಂಟು ಮಂದಿ ಗೂಂಡಾಗಳನ್ನು ನೇಮಿಸಿ ಶಾಂತಕುಮಾರ್ ಅವರನ್ನು ಅಪಹರಿಸಿ ಚೆನ್ನೈನ ವೆಲ್ಲಚೇರಿಯ ತನ್ನ ನಿವಾಸಕ್ಕೆ ಕರೆತಂದ. ಬಳಿಕ ಆತನ ಕೊಲೆ ನಡೆದಿತ್ತು. ಇದು 2001ರ ಅಕ್ಟೋಬರ್‌ನಲ್ಲಿ ನಡೆದ ಘಟನೆಯಾಗಿತ್ತು.

Vijaya Karnataka Web 29 Mar 2019, 3:42 pm
ಹೊಸದಿಲ್ಲಿ: ನೌಕರನ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪ್ರಸಿದ್ಧ ರೆಸ್ಟೋರೆಂಟ್‌ ಸಮೂಹ 'ಶರವಣ ಭವನ'ದ ಮಾಲೀಕ ಪಿ. ರಾಜಗೋಪಾಲ್‌ಗೆ ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
Vijaya Karnataka Web Supreme Court


ಪ್ರಿನ್ಸ್‌ ಶಾಂತಕುಮಾರ್‌ ಎಂಬವರ ಅಪಹರಣ ಮತ್ತು ಕೊಲೆ ಘಟನೆಗೆ ಸಂಬಂಧಿಸಿ ಜುಲೈ 7ರೊಳಗೆ ಶರಣಾಗುವಂತೆ ಶರವಣ ಭವನ ಮಾಲೀಕರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. 2009ರಲ್ಲಿ ವೈದ್ಯಕೀಯ ನೆಲೆಯಲ್ಲಿ ರಾಜಗೋಪಾಲ್‌ಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು.

ಪ್ರಿನ್ಸ್‌ ಶಾಂತಕುಮಾರ್ ಹತ್ಯೆ ಪ್ರಕರಣದಲ್ಲಿ ರಾಜಗೋಪಾಲ್ ಜತೆಗೆ ಇನ್ನೂ ಐವರಿಗೆ ಶಿಕ್ಷೆ ವಿಧಿಸಲಾಗಿದೆ.

ಶಾಂತಕುಮಾರ್‌ ಅವರ ಪತ್ನಿ ಹಾಗೂ ಶವರಣ ಭವನದ ನೌಕರ ರಾಮಸ್ವಾಮಿ ಅವರ ಪುತ್ರಿ ಜೀವಜ್ಯೋತಿ ಅವರನ್ನು ಮದುವೆಯಾಗಲು ಪಿ. ರಾಜಗೋಪಾಲ್ ಬಯಸಿದ್ದರು. ಆದರೆ, ಜೀವಜ್ಯೋತಿಗೆ ರಾಜಗೋಪಾಲ್ ಮದುವೆಯಾಗಲು ಇಷ್ಟವಿರಲಿಲ್ಲ. ಹೀಗಾಗಿ ಆತ ಎಂಟು ಮಂದಿ ಗೂಂಡಾಗಳನ್ನು ನೇಮಿಸಿ ಶಾಂತಕುಮಾರ್ ಅವರನ್ನು ಅಪಹರಿಸಿ ಚೆನ್ನೈನ ವೆಲ್ಲಚೇರಿಯ ತನ್ನ ನಿವಾಸಕ್ಕೆ ಕರೆತಂದ. ಬಳಿಕ ಆತನ ಕೊಲೆ ನಡೆದಿತ್ತು. ಇದು 2001ರ ಅಕ್ಟೋಬರ್‌ನಲ್ಲಿ ನಡೆದ ಘಟನೆಯಾಗಿತ್ತು.

ಶಾಂತಕುಮಾರ್ ಶವ ಕೊಡೈಕನಾಲ್ ಬೆಟ್ಟದಲ್ಲಿ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ತನಿಖಾಧಿಕಾರಿಗಳು ರಾಜಗೋಪಾಲ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), ಸೆಕ್ಷನ್ 364 (ಅಪಹರಣ) ಮತ್ತು ಸೆಕ್ಷನ್ 2019 (ಸಾಕ್ಷ್ಯಗಳ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಮೊದಲು ಸೆಷನ್ಸ್‌ ನ್ಯಾಯಾಲಯ ರಾಜಗೋಪಾಲ್ ದೋಷಿ ಎಂದು ತೀರ್ಪು ನೀಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅನಂತರ ಮದ್ರಾಸ್ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಯಾಗಿ ವಿಸ್ತರಿಸಿತು. ಅದನ್ನು ಪ್ರಶ್ನಿಸಿ ರಾಜಗೋಪಾಲ್ ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ