ಆ್ಯಪ್ನಗರ

ಬಿಹಾರದಲ್ಲಿ ಮೆದುಳುಜ್ವರಕ್ಕೆ 50 ಮಕ್ಕಳು ಬಲಿ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಮಂಗಳವಾರ ಬಿಹಾರದ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದು, ಪೋಷಕಾಂಶಯುಕ್ತ ಮತ್ತು ಗ್ಲುಕೋಸ್‌ ಅಂಶ ಹೆಚ್ಚಿರುವ ಆಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಸೂಚಿಸಿದ್ದಾರೆ.

Agencies 14 Jun 2019, 5:00 am
ಪಟನಾ: ಬಿಹಾರದ ಗ್ರಾಮೀಣ ಜಿಲ್ಲೆಗಳಾದ ಮುಝಫ್ಪರ್‌ಪುರ, ಶಿಯೋಹಾರ್‌, ವೈಶಾಲಿ, ಪೂರ್ವ ಮತ್ತು ಪಶ್ಚಿಮ ಚಂಪಾರಣ್‌ ಮತ್ತು ಸೀತಾಮಡಿ ಜಿಲ್ಲೆಗಳಲ್ಲಿ ತೀವ್ರತರ ಮೆದುಳಿನ ಉರಿಯೂತ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಇದುವರೆಗೆ 50ರಷ್ಟು ಮಕ್ಕಳನ್ನು ಬಲಿ ಪಡೆದಿದೆ.
Vijaya Karnataka Web encephalitis in bihars muzaffarpur death count rises to 47
ಬಿಹಾರದಲ್ಲಿ ಮೆದುಳುಜ್ವರಕ್ಕೆ 50 ಮಕ್ಕಳು ಬಲಿ


ಮುಜಫ್ಫರ್‌ ಪುರ ಜಿಲ್ಲೆಯಲ್ಲಿ ಸಮಸ್ಯೆ ಅತ್ಯಂತ ಆತಂಕಕಾರಿಯಾಗಿದ್ದು, ಕಳೆದ 13 ದಿನಗಳಲ್ಲಿ 121 ಪ್ರಕರಣಗಳು ವರದಿಯಾಗಿವೆ. ರಾಜ್ಯದ ರೋಗ ನಿಯಂತ್ರಣ ಇಲಾಖೆಯ ನಿರ್ದೇಶಕ ಆರ್‌.ಡಿ. ರಂಜನ್‌ ಅವರ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಿದೆ. ಈ ನಡುವೆ, ಕೇಂದ್ರದ ಬಹು ವಿಶೇಷಜ್ಞರ ಉನ್ನತ ಮಟ್ಟದ ತಂಡ ಕೂಡಾ ಬಿಹಾರಕ್ಕೆ ಭೇಟಿ ನೀಡಿ ರೋಗ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಸಹಕಾರ ನೀಡಲು ಮುಂದಾಗಿದೆ. ಮುಜಫ್ಫರ್‌ಪುರದಲ್ಲಿ ಮೆದುಳು ಜ್ವರದ ಸಮಸ್ಯೆ ತೀವ್ರವಾಗಿರುವಂತೆಯೇ ಗಯಾದಲ್ಲಿ ಜಪಾನೀಸ್‌ ಎನ್ಸೆಫಲೈಟಿಸ್‌ ಸಮಸ್ಯೆ ತೀವ್ರವಾಗಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಮಂಗಳವಾರ ಬಿಹಾರದ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದು, ಪೋಷಕಾಂಶಯುಕ್ತ ಮತ್ತು ಗ್ಲುಕೋಸ್‌ ಅಂಶ ಹೆಚ್ಚಿರುವ ಆಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ಮಕ್ಕಳ ಹಂತಕ!
ಮೆದುಳು ಜ್ವರ ಮಕ್ಕಳನ್ನೇ ಅತಿಯಾಗಿ ಕಾಡುವ ಸಮಸ್ಯೆಯಾಗಿದ್ದು, ಪ್ರತಿ ವರ್ಷವೂ ಸಾವು ಸಂಭವಿಸುತ್ತಿರುತ್ತದೆ. 2017ರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 60 ಮಕ್ಕಳು ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ