ಆ್ಯಪ್ನಗರ

ಬಾರಾಮುಲ್ಲಾದಲ್ಲಿ ಗುಂಡಿನ ಚಕಮಕಿ : ಓರ್ವ ಉಗ್ರ ಉಡೀಸ್‌, ಮುಂದುವರಿದ ಕಾರ್ಯಾಚರಣೆ!

​​ಯೆಡಿಪೊರಾದಲ್ಲಿ ಉಗ್ರರು ಇರುವ ಮಾಹಿತಿ ಮೇರೆಗೆ ಹುಡುಕಾಟ ಆರಂಭಿಸಿದ ಯೋಧರ ಮೇಲೆ ಅಡಗಿ ಕುಳಿತ್ತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯೋಧರ ತಂಡವನ್ನ ಪ್ರತಿನಿಧಿಸಿದ್ದ ಮೇಜರ್‌ ಒಬ್ಬರಿಗೆ ಗುಂಡೇಟು ಬಿದ್ದಿದೆ. ಕೂಡಲೇ ಗಾಯಗೊಂಡ ಅವರನ್ನ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

Agencies 4 Sep 2020, 3:35 pm
ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರನ್ನ ಹೆಡೆಮುರಿ ಕಟ್ಟುವಲ್ಲಿ ನಿರತರಾಗಿರುವ ಯೋಧರು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಬಾಬಾಮುಲ್ಲಾ ಜಿಲ್ಲೆಯ ಪಟ್ಟನ್‌ ಏರಿಯಾ ಯೆಡಿಫೊರಾದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದ ಉಗ್ರನನ್ನು ಹೊಡೆದುರಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
Vijaya Karnataka Web EhCaX7QUwAAfEcb


ಯೆಡಿಪೊರಾದಲ್ಲಿ ಉಗ್ರರು ಇರುವ ಮಾಹಿತಿ ಮೇರೆಗೆ ಹುಡುಕಾಟ ಆರಂಭಿಸಿದ ಯೋಧರ ಮೇಲೆ ಅಡಗಿ ಕುಳಿತ್ತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯೋಧರ ತಂಡವನ್ನ ಪ್ರತಿನಿಧಿಸಿದ್ದ ಮೇಜರ್‌ ಒಬ್ಬರಿಗೆ ಗುಂಡೇಟು ಬಿದ್ದಿದೆ. ಕೂಡಲೇ ಗಾಯಗೊಂಡ ಅವರನ್ನ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಿದ ಯೋಧರು ಬಳಿಕ ಮನೆಯ ಅಕ್ಕಪಕ್ಕ ಇದ್ದ ನಿವಾಸಿಗಳನ್ನ ಮೊದಲು ತೆರವು ಕಾರ್ಯಾಚರಣೆ ನಡೆಸಿ ಅವರನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಮತ್ತೆ ಕಾರ್ಯಾಚರಣೆ ಆರಂಭಿಸಿ ಓರ್ವ ಉಗ್ರನನ್ನು ಹೊಡೆದುರಳಿಸಿದ್ದಾರೆ. ಸಾವನಪ್ಪಿದ ಉಗ್ರ ಸೇರಿ ಒಟ್ಟು ಮೂರು ಮಂದಿ ಉಗ್ರರು ಮನೆಯಲ್ಲಿ ಅಡಗಿ ಕುಳಿತ್ತಿದ್ದರು ಎಂದು ತಿಳಿದುಬಂದಿದೆ. ಮತ್ತಿಬ್ಬರಿಗಾಗಿ ಕಾರ್ಯಾಚರಣೆ ಆರಂಭವಾಗಿದೆ.

ಬಾಬಾಮುಲ್ಲಾದಲ್ಲಿ ಗುಂಡಿನ ಕಾಳಗ: ಯೋಧರೊಬ್ಬರಿಗೆ ಗಾಯ, ಮನೆಯಲ್ಲಿ ಅಡಗಿ ಕುಳಿತ್ತಿದ್ದಾರೆ ಮೂವರು ಉಗ್ರರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ