ಆ್ಯಪ್ನಗರ

ಸತ್ಯಕ್ಕೆ ಜಯವಾಗಿದೆ, ಬಿಜೆಪಿಯ ಆಟ ಕೊನೆಯಾಗಲಿದೆ: ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌

ಮಹಾರಾಷ್ಟ್ರ ಬಿಜೆಪಿ ಸರಕಾರ ರಚನೆ ಕುರಿತಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ತೃಪ್ತಿ ವ್ಯಕ್ತ ಪಡಿಸಿರುವ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ 'ಸತ್ಯಕ್ಕೆ ಜಯವಾಗಲಿದೆ, ಬಿಜೆಪಿ ಆಟ ಕೊನೆಗೊಳ್ಳಲಿದೆ' ಎಂದಿವೆ.

Vijaya Karnataka Web 26 Nov 2019, 12:14 pm
ಮುಂಬಯಿ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಬುಧವಾರ ವಿಶ್ವಾಸಮತ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಿದೆ. ಗೌಪ್ಯ ಮತದಾನಕ್ಕೆ ಅವಕಾಶ ನೀಡದೆ ನೇರ ಪ್ರಸಾರಕ್ಕೆ ಆದೇಶಿಸಿರುವುದು ನಮ್ಮ ಗೆಲುವು. ಸತ್ಯಕ್ಕೆ ಗೆಲುವಾಗಲಿದೆ ಎಂದು ಎನ್‌ಸಿಪಿ ವಿಶ್ವಾಸ ವ್ಯಕ್ತ ಪಡಿಸಿದೆ.
Vijaya Karnataka Web Sharad Pawar


ಸತ್ಯಮೇವ ಜಯತೆ ಬಿಜೆಪಿ ಕಾ ಖೇಲ್‌ ಖತಂ (ಸತ್ಯಕ್ಕೆ ಗೆಲುವಾಗುತ್ತದೆ, ಬಿಜೆಪಿಯ ಆಟ ಕೊನೆಗೊಳ್ಳುತ್ತದೆ) ಎಂದು ಎನ್‌ಸಿಪಿ ಮುಖ್ಯ ವಕ್ತಾರ ನವಾಬ್‌ ಮಲ್ಲಿಕ್‌ ಟ್ವೀಟ್‌ ಮಾಡಿದ್ದಾರೆ. ಮಹಾರಾಷ್ಟ್ರ ಸರಕಾರ ರಚನೆ ಕುರಿತಾದ ಸುಪ್ರೀಂ ಕೋರ್ಟ್‌ ತೀರ್ಪು ಭಾರತದ ಪ್ರಜಾಪ್ರಭುತ್ವದಲ್ಲಿ ಒಂದು ಮೈಲುಗಲ್ಲು. ಬುಧವಾರ ಸಂಜೆ 5 ಗಂಟೆಗೆ ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂ ಆದೇಶಿಸಿದೆ. ಇದು ಬಿಜೆಪಿಯ ಆಟ ಅಂತ್ಯವಾಗಿದೆ ಎಂಬುದನ್ನು ತಿಳಿಯ ಪಡಿಸುತ್ತಿದೆ. ಕೆಲವೇ ದಿನಗಳಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಎನ್‌ಸಿಪಿ ಮುಖಂಡ ನವಾಬ್‌ ಮಲ್ಲಿಕ್‌ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಬುಧವಾರ 11 ಗಂಟೆಗೆ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಜೆ 5 ಗಂಟೆಗೆ ವಿಶ್ವಾಸ ಮತ ಪರೀಕ್ಷೆ ನಡೆಯಲಿದೆ. ಎಲ್ಲ 3 ಪಕ್ಷಗಳಿಗೆ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌) ಸುಪ್ರೀಂ ಕೋರ್ಟ್‌ ತೀರ್ಪು ತೃಪ್ತಿಯಾಗಿದೆ. ಇಂದೇ ದೇವೇಂದ್ರ ಫಡ್ನವಿಸ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚೌಹಾಣ್‌ ಒತ್ತಾಯಿಸಿದ್ದಾರೆ.

'ಮಹಾ' ಸುಪ್ರೀಂ ತೀರ್ಪು: ನಾಳೆ ಸಂಜೆ 5ರೊಳಗೆ 'ನೇರ ಪ್ರಸಾರ'ದೊಂದಿಗೆ ಬಹುಮತ ಸಾಬೀತಿಗೆ ಆದೇಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ