ಆ್ಯಪ್ನಗರ

ನೈತಿಕ ಪೊಲೀಸ್‌ಗಿರಿ ವಿರುದ್ಧ ಆಕ್ರೋಶ: ತೊಡೆ ಮೇಲೆ ಕುಳಿತು ಕೇರಳ ವಿದ್ಯಾರ್ಥಿಗಳ ಪ್ರತಿಭಟನೆ!

Kerala Moral Policing: ಕೇರಳದ ತಿರುವನಂತಪುರಂನಲ್ಲಿ ನೈತಿಕ ಪೊಲೀಸ್‌ಗಿರಿ ವಿರುದ್ಧ ಎಂಜಿಜಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಒಬ್ಬರ ತೊಡೆಯ ಮೇಲೊಬ್ಬರು ಕೂರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 22 Jul 2022, 5:02 pm

ಹೈಲೈಟ್ಸ್‌:

  • ತ್ರಿವೇಂಡ್ರಂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ
  • ನೈತಿಕ ಪೊಲೀಸ್‌ಗಿರಿ ವಿರೋಧಿಸಿ ತೊಡೆ ಮೇಲೆ ಕುಳಿತು ಫೋಟೊ
  • ಗಂಡು-ಹೆಣ್ಣು ಜತೆ ಕೂರುತ್ತಿದ್ದಕ್ಕೆ ನಿಲ್ದಾಣದ ಬೆಂಚ್ ಒಡೆದಿದ್ದ ಸ್ಥಳೀಯರು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kerala fb
ತಿರುವನಂತಪುರಂ: ನೈತಿಕ ಪೊಲೀಸ್‌ಗಿರಿ ವಿರುದ್ಧ ಕೇರಳದ ಶ್ರೀಕಾರ್ಯಂನಲ್ಲಿ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಅದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ತ್ರಿವೇಂಡ್ರಂ ಎಂಜಿನಿಯರಿಂಗ್ ಕಾಲೇಜು ಸಮೀಪದ ಹಳೆಯ ತಂಗುದಾಣದಲ್ಲಿ ಇದ್ದ ಬೆಂಚ್ ಅನ್ನು ಸ್ಥಳೀಯರು ಒಡೆದು ಹಾಕಿದ್ದರು. ಕಾಲೇಜು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಅಕ್ಕಪಕ್ಕ ಕೂರುವುದನ್ನು ತಡೆಯಲು ಸ್ಥಳೀಯ ಜನರು ಬೆಂಚ್ ಅನ್ನು ಮೂರು ಪ್ರತ್ಯೇಕ ಸೀಟುಗಳಾಗಿ ಮಾಡಿದ್ದರು. ಆದರೆ ಬುಧವಾರ ಕಾಲೇಜು ವಿದ್ಯಾರ್ಥಿಗಳು ಆ ಬೆಂಚುಗಳಲ್ಲಿ ಒಬ್ಬರ ತೊಡೆಯ ಮೇಲೆ ಒಬ್ಬರು ಕೂರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಮೂರು ಸೀಟುಗಳ ಮೇಲೆ ಎಂಜಿನಿಯರ್ ಕಾಲೇಜಿನ ಹುಡುಗರು ಕುಳಿತಿದ್ದು, ಅವರ ತೊಡೆ ಮೇಲೆ ಹೆಣ್ಣುಮಕ್ಕಳು ಕುಳಿತಿದ್ದಾರೆ. ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಕ್ಯಾಮೆರಾ ಕಡೆ ನಗುತ್ತಾ ಪೋಸ್ ನೀಡಿದ್ದಾರೆ. ಬಳಿಕ ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದೀಗ ವೈರಲ್ ಆಗಿದೆ.
ಬಲವಂತವಾಗಿ ಮಹಿಳೆಯ ಹಿಜಾಬ್ ತೆಗೆಸಿದ ಗುಂಪು: ಮತ್ತೊಂದು ಅಮಾನವೀಯ ಘಟನೆ

ತರಗತಿಗಳಲ್ಲಿ ಪ್ರತ್ಯೇಕ ಸಾಲುಗಳಲ್ಲಿ ಹುಡುಗ- ಹುಡುಗಿಯರು ಕೂರಬೇಕು ಎಂಬ ಕೆಲವರ ವಾದವನ್ನು ಈ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಕಾಲೇಜಿನ ವಿವಿಧ ವಿಭಾಗಗಳ ಎರಡನೇ ವರ್ಷದ ವಿದ್ಯಾರ್ಥಿಗಳು ಪ್ರತಿಭಟನೆಗೆ ಜತೆಗೂಡಿದ್ದಾರೆ. ಹೆಣ್ಣುಮಕ್ಕಳು ಮತ್ತು ಹುಡುಗರು ಒಟ್ಟಿಗೆ ಕೂರುವುದು ಸಾಮಾನ್ಯ ಅಭ್ಯಾಸವನ್ನಾಗಿ ಮಾಡಲು ತಾವು ಬಯಸಿರುವುದಾಗಿ ಅವರು ಹೇಳಿದ್ದಾರೆ.

"ನಮ್ಮ ಫೋಟೋ ಜನರ ವಿರುದ್ಧದ ಹೋರಾಟಕ್ಕೆ ಅಲ್ಲ. ಆದರೆ ಲಿಂಗದ ಗಡಿ ಹಾಕದೆ ವಿದ್ಯಾರ್ಥಿಗಳನ್ನು ನೋಡಬೇಕು ಎಂದು ಅವರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ" ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಂದನಾ ಪಿಎಂ ಹೇಳಿದ್ದಾರೆ.
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ : ಇಬ್ಬರು ಆರೋಪಿಗಳು ಅರೆಸ್ಟ್

"ನಾವು ಬೆಳೆಯುತ್ತಿರುವ ಸಂದರ್ಭಗಳಿಗೂ ಅವರು ಬೆಳೆದ ಸನ್ನಿವೇಶಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಒಂದು ರಾತ್ರಿಯಲ್ಲಿ ಸಮಾಜ ಬದಲಾಗುತ್ತದೆ ಎಂದು ನಾವು ಭಾವಿಸುವುದಿಲ್ಲ. ಆದರೆ ಜನರು ವಿದ್ಯಾರ್ಥಿಗಳಿಗೆ ನೋವುಂಟುಮಾಡುವುದನ್ನು ತಡೆಯಲು ಇದು ಒಂದು ಕಾರಣವಾಗಲಿ. ನಮ್ಮ ಪೋಸ್ಟ್ ವೈರಲ್ ಆದ ಬಳಿಕ ಜನರಿಂದ ನಮಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ನಮಗೆ ಫೇಸ್‌ಬುಕ್‌ನಲ್ಲಿ ನೆಗೆಟಿವ್ ಕಾಮೆಂಟ್ ಕೂಡ ಬಂದಿದೆ. ಆದರೆ ನ್ಯಾಯ ನಮ್ಮ ಕಡೆಗೆ ಇರುವಾಗ ಟೀಕೆಗಳು ಬಂದರೆ ತೊಂದರೆ ಇಲ್ಲ" ಎಂದು ಅವರು ತಿಳಿಸಿದ್ದಾರೆ.

ಈ ಬಸ್ ನಿಲ್ದಾಣ ಅನಧಿಕೃತವಾಗಿದ್ದು, 9 ತಿಂಗಳ ಹಿಂದೆ ಸ್ಥಳೀಯ ನಿವಾಸಿಗಳು ಅದನ್ನು ಸ್ಥಾಪಿಸಿದ್ದರು. ಅಲ್ಲಿ ಒಟ್ಟಿಗೆ ಕೂರುತ್ತಿದ್ದ ವಿದ್ಯಾರ್ಥಿಗಳು ಕೆಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. ಸ್ಥಳೀಯರು ವಿದ್ಯಾರ್ಥಿಗಳ ಕಡೆಗೆ ದಿಟ್ಟಿಸಿ ನೋಡುವುದು, ಕೀಳು ಮಾತುಗಳನ್ನಾಡುವುದನ್ನು ಮಾಡುತ್ತಿದ್ದರು ಎಂದು ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಎಂ ಹೇಳಿದ್ದಾರೆ.
ಕೈಗಳಿಗೆ ನೆತ್ತರು ಮೆತ್ತಿರುವಾಗ ಅದ್ಹೇಗೆ ಮಲಗುತ್ತೀರೋ?!: ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

ಮತ್ತೊಬ್ಬ ವಿದ್ಯಾರ್ಥಿ ಮಾಡಿದ್ದ ಟ್ವೀಟ್ ಕಂಡಿದ್ದ ಸ್ಥಳೀಯರು, ನಿಲ್ದಾಣದ ಬೆಂಚ್ ಅನ್ನು ತುಂಡು ಮಾಡಿದ್ದಾರೆ ಎನ್ನುವುದು ವಿದ್ಯಾರ್ಥಿಗಳಿಗೆ ಗೊತ್ತಾಗಿತ್ತು. ವಿದ್ಯಾರ್ಥಿಗಳ ನಡುವೆ ಸಾಮಾನ್ಯ ಹರಟೆ ವೇಳೆ ಈ ಫೋಟೋದ ಆಲೋಚನೆ ಹೊಳೆದಿದೆ. "ನಾವು ಜತೆಯಾಗಿ ಕೂರುವುದು ಅವರ ಸಮಸ್ಯೆ ಎಂದಾದರೆ, ನಾವೇಕೆ ಒಬ್ಬರ ಕಾಲಿನ ಮೇಲೊಬ್ಬರು ಕೂರಬಾರದು?" ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ತಮ್ಮ ಹಿರಿಯ ವಿದ್ಯಾರ್ಥಿಗಳಿಂದ ಬೆಂಬಲ ಸಿಕ್ಕಿದ್ದು ಕಂಡು ಅವರು ಅಚ್ಚರಿಯಾಗಿದ್ದಾರೆ. ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಕೂಡ ಅವರಿಗೆ ಬೆಂಬಲ ಘೋಷಿಸಿವೆ. ಅಲ್ಲಿನ ಮೇಯರ್ ಆರ್ಯ ರಾಜೇಂದ್ರನ್ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಚ್ ಅನ್ನು ಒಡೆದು, ಸಣ್ಣ ಕುರ್ಚಿಗಳಾಗಿ ಬದಲಿಸಿರುವ ಕೃತ್ಯ ಆಧುನಿಕ ಸಮಾಜಕ್ಕೆ ಅವಮಾನಕರ ಎಂದು ಅವರು ಹೇಳಿದ್ದಾರೆ. ತಿರುವನಂತಪುರಂ ಕಾರ್ಪೊರೇಷನ್ ಅಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಲಿದೆ ಎಂದು ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ