ಆ್ಯಪ್ನಗರ

ಸೋಂಕು ನಿವಾರಕ ಸುರಂಗಗಳಿಂದ ಹಾನಿ, ಇನ್ನೂ ನಿಷೇಧಿಸಿಲ್ಲ ಯಾಕೆ? ಸುಪ್ರೀಂ ಪ್ರಶ್ನೆ

ಸೋಂಕು ನಿವಾರಕ ಸುರಂಗಗಳಲ್ಲಿರುವ ರಾಸಾಯನಿಕ ಹಾಗೂ ಅತಿನೇರಳೆ ಕಿರಣಗಳು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಹಾನಿ ಮಾಡುತ್ತದೆ ಎಂದು ತಿಳಿದಿದ್ದರೂ, ಕೇಂದ್ರ ಸರಕಾರ ಯಾಕೆ ಅವುಗಳನ್ನು ನಿಷೇಧ ಮಾಡಿಲ್ಲ ಏಕೆ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

Agencies 7 Sep 2020, 9:59 pm
ಹೊಸದಿಲ್ಲಿ: ಸೋಂಕು ನಿವಾರಣೆಗಾಗಿ ಸ್ಥಾಪನೆ ಮಾಡಿರುವ ಸುರಂಗಗಳಲ್ಲಿ ಹರಿಸಲಾಗುವ ಅತಿನೇರಳ ಕಿರಣ ಹಾಗೂ ರಾಸಾಯನಿಕಗಳಿಂದ ದೈಹಿಕ ಹಾಗೂ ಮಾನಸಿಕ ಹಾನಿ ಉಂಟಾಗುತ್ತಿರುವ ಹೊರತಾಗಿಯೂ ಆ ವಿಧಾನವನ್ನು ಯಾಕೆ ನಿಷೇಧ ಮಾಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಸೋಮವಾರ ಪ್ರಶ್ನಿಸಿತು.
Vijaya Karnataka Web Disinfection chamber


ಅಶೋಕ್‌ ಭೂಷಣ್‌, ಆರ್‌. ಸುಭಾಷ್‌ ರೆಡ್ಡಿ, ಎಮ್‌. ಶಾ ಅವರಿದ್ದ ನ್ಯಾಯಪೀಠವು ಗುರುಸಿಮ್ರನ್‌ ಸಿಂಗ್‌ ನರುಲಾ ಎಂಬುವರು ಸೋಂಕು ನಿರೋಧಕ ಸುರಂಗದ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ, 'ಆರೋಗ್ಯ ಸಚಿವಾಲಯವು ಈ ಬಗ್ಗೆ ಯಾಕೆ ಯಾವುದೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿಲ್ಲ' ಎಂದು ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಮೆಹ್ತಾ ಅವರು, ರಾಸಾಯನಿಕ ಹಾಗೂ ಅತಿನೇರಳೆ ಕಿರಣಗಳು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಹಾನಿ ಮಾಡುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗಾದರೆ ಕೇಂದ್ರ ಸರಕಾರ ಯಾಕೆ ಅವುಗಳನ್ನು ನಿಷೇಧ ಮಾಡಿಲ್ಲ ಎಂದು ಕೇಳಿತು.

ಈ ವೇಳೆ ಮೆಹ್ತಾ ಅವರು "ಈ ಕುರಿತು ನಿರ್ದೇಶನಗಳನ್ನು ಜಾರಿ ಮಾಡಲಾಗುವುದು," ಎಂದು ಹೇಳಿದರು. "ಸೋಂಕು ನಿವಾರಣೆ ಸುರಂಗ, ಚೇಂಬರ್‌ ಹಾಗೂ ಕ್ಯಾಬಿನೆಟ್‌ಗಳ ಮೂಲಕ ಮನುಷ್ಯ ಹಾದು ಹೋದಾಗ ಸೋಂಕು ನಿವಾರಣೆಯಾಗುವುದಿಲ್ಲ. ಬದಲಾಗಿ ಅದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ," ಎಂಬ ತಜ್ಞರ ಸಮಿತಿಯ ವರದಿಯನ್ನು, ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ