ಆ್ಯಪ್ನಗರ

ಪಟ್ಟಭದ್ರರಿಂದ ಮಾತ್ರವೇ ವಿರೋಧ

ಇದು ದೇಶದ ಹಿತಕ್ಕಾಗಿ ಕೈಗೊಂಡ ದಿಟ್ಟ ಕ್ರಮವೇ ವಿನಾ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಲ್ಲಎಂದು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

PTI 14 Aug 2019, 5:00 am
ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಶಾಶ್ವತ ಅಭಿವೃದ್ಧಿಗೆ ಆದ್ಯತೆ ನೀಡಿ ತಮ್ಮ ಸರಕಾರ ಕೈಗೊಂಡ 370 ಮತ್ತು 35ಎ ವಿಧಿಗಳ ರದ್ದು ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸರಕಾರದ ಈ ಕ್ರಮದ ವಿರುದ್ಧ ಅಪಸ್ವರ ಎತ್ತಿದವರ ವಿರುದ್ಧ ಚಾಟಿ ಕೂಡ ಬೀಸಿದ್ದಾರೆ.
Vijaya Karnataka Web pm


''ಕಾಶ್ಮೀರದ ವಿಷಯದಲ್ಲಿ ಕೈಗೊಂಡ ಕ್ರಮವನ್ನು ವಿರೋಧಿಸುವವರು ಎಂಥವರೆಂದು ನೋಡಿ, ಅವರು ಶುದ್ಧ ಪಟ್ಟಭದ್ರರು. ವಂಶಾಡಳಿತದ ಕುಡಿಗಳು, ಭಯೋತ್ಪಾದಕರ ಬೆಂಬಲಿಗರು ಮತ್ತು ವಿರೋಧ ಪಕ್ಷಗಳಲ್ಲಿನ ಕೆಲವು ಸ್ನೇಹಿತರು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಷ್ಟ್ರದ ಜನ ಪಕ್ಷಾತೀತವಾಗಿ ಸರಕಾರದ ಬೆನ್ನಿಗೆ ನಿಂತಿದ್ದಾರೆ. ಇದು ದೇಶದ ಹಿತಕ್ಕಾಗಿ ಕೈಗೊಂಡ ದಿಟ್ಟ ಕ್ರಮವೇ ವಿನಾ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಲ್ಲ,'' ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿಶೇಷ ಸ್ಥಾನಮಾನದ ವಿಧಿಗಳು ಕಾಶ್ಮೀರ ಕಣಿವೆಗೆ ಲಾಭ ತಂದುಕೊಟ್ಟಿರುವುದಕ್ಕಿಂತ ಹೆಚ್ಚಾಗಿ ನಷ್ಟ ಉಂಟು ಮಾಡಿವೆ. ಆದರೆ, ಕೆಲವು ಕುಟುಂಬಗಳ ಸದಸ್ಯರು, ಪ್ರತ್ಯೇಕತಾವಾದಿಗಳು ಇದರ ಅನುಕೂಲ ಪಡೆದು ಸಂಪನ್ನರಾದರು. ಜನ ಮಾತ್ರ ಬಡವರಾದರು. ಇನ್ನು ಮುಂದೆ ಅಂತಹ ದುರ್ಬಳಕೆಯ ಜಮಾನ ಮುಗಿದಿದೆ. ರಾಜ್ಯ ಪುನರ್‌ ವಿಂಗಡನೆ ಮಾಡಿರುವುದರಿಂದ ಕಣಿವೆಯ ಸಮಗ್ರ ಹಾಗೂ ತ್ವರಿತಗತಿಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯವನ್ನು ಕಾಡಿದ ತಾರತಮ್ಯ ನೀತಿಗಳು ಇನ್ನು ಮುಂದೆ ನಿರ್ನಾಮಗೊಳ್ಳಲಿದ್ದು, ಕೈಗಾರಿಕೋದ್ಯಮದ ಮೂಲಕ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭ್ಯುದಯ ಸಾಧ್ಯವಾಗಲಿದೆ ಎಂದರು.

-----
ಪಾಕಿಸ್ತಾನವು ಗಡಿಯಲ್ಲಿ ಯುದ್ಧ ವಿಮಾನಗಳನ್ನು ನಿಯೋಜಿಸಿರುವುದು ಸಾಮಾನ್ಯ ಪ್ರಕ್ರಿಯೆ. ಅದಕ್ಕೆ ಕಳವಳಪಡಬೇಕಿಲ್ಲ. ಜಮ್ಮು-ಕಾಶ್ಮೀರದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ.
- ಜ.ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ