ಆ್ಯಪ್ನಗರ

ಪ್ರತಿ ಭಾರತೀಯನ ಗುರುತೂ ಹಿಂದೂ: ಮೋಹನ್ ಭಾಗವತ್

ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಹಿಂದೂಗಳು. ಇದೇ ಅವರ ಗುರುತು. ಹೀಗಾಗಿ ನಾವೆಲ್ಲರೂ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕೇ ಹೊರತು ಅದಕ್ಕೆ ಹಿಂಜರಿಕೆ ತೋರಬಾರದು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Vijaya Karnataka 20 Sep 2018, 9:59 am
ಹೊಸದಿಲ್ಲಿ: ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಹಿಂದೂಗಳು. ಇದೇ ಅವರ ಗುರುತು. ಹೀಗಾಗಿ ನಾವೆಲ್ಲರೂ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕೇ ಹೊರತು ಅದಕ್ಕೆ ಹಿಂಜರಿಕೆ ತೋರಬಾರದು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.
Vijaya Karnataka Web bhagwat


'ಭವಿಷ್ಯದ ಭಾರತ: ಆರೆಸ್ಸೆಸ್‌ ದೃಷ್ಟಿಕೋನ' ವಿಷಯದ ಕುರಿತು ದಿಲ್ಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಉಪನ್ಯಾಸ ಮಾಲಿಕೆಯ ಕೊನೆಯ ದಿನವಾದ ಬುಧವಾರ ಅವರು ಹಿಂದುತ್ವ, ಅಂತರ್‌ಜಾತಿ ವಿವಾಹ, ಆಧುನಿಕ ಶಿಕ್ಷಣ ನೀತಿಯ ವಿಚಾರಗಳ ಕುರಿತು ಮಾತನಾಡಿದರು.''ಆರೆಸ್ಸೆಸ್‌ ಧರ್ಮಗಳ ನಡುವೆ ಒಡಕು ಸೃಷ್ಟಿಸುವ ಕೆಲಸ ಮಾಡುವುದಿಲ್ಲ. ಹಿಂದೂಗಳ ಒಗ್ಗಟ್ಟಿಗೆ ಶ್ರಮಿಸುತ್ತದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು,'' ಎಂದು ಹೇಳಿದರು.

ನಕಲಿ ಗೋರಕ್ಷಕರಿಗೆ ಬೆಂಬಲವಿಲ್ಲ: ಗೋ ರಕ್ಷಣೆಯ ನೆಪದಲ್ಲಿ ಅನ್ಯ ಸಮುದಾಯದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಒಪ್ಪಿತವಲ್ಲ. ಹಲ್ಲೆ , ಹತ್ಯೆ ನಡೆಸುವ ಅಪರಾಧಿ ಹಿನ್ನೆಲೆಯುಳ್ಳವರನ್ನು ಯಾವ ಕಾರಣಕ್ಕೂ ಗೋರಕ್ಷಕರೆಂದು ಕರೆಯಲಾಗದು. ಇಂತಹವರ ವಿರುದ್ಧ ಕಾನೂನು ಕ್ರಮ ಅಗತ್ಯವಿದೆ ಎಂದರು.

ಅಂತರ್‌ಜಾತಿ ವಿವಾಹ: ಮದುವೆ ಎಂಬುದು ಗಂಡು-ಹೆಣ್ಣಿನ ಖಾಸಗಿ ವಿಚಾರವಾಗಿದ್ದು, ಅಂತರ್‌ ಜಾತಿ ವಿವಾಹಕ್ಕೆ ಆರೆಸ್ಸೆಸ್‌ ವಿರೋಧ ವ್ಯಕ್ತಪಡಿಸುವುದಿಲ್ಲ. ಒಂದೊಮ್ಮೆ ಈ ವಿಚಾರದಲ್ಲಿ ಗಣತಿ ಮಾಡಿದರೆ ಅಂತರ್‌ಜಾತಿ ವಿವಾಹ ಮಾಡಿಕೊಂಡವರಲ್ಲಿ ಆರೆಸ್ಸೆಸ್‌ ಕಾರ‍್ಯಕತರೇ ಹೆಚ್ಚಿರುತ್ತಾರೆ ಎಂದು ಹೇಳಿದರು.

ಭಾಷಣದ ಇತರ ಅಂಶಗಳು


* ಜಮ್ಮು-ಕಾಶ್ಮೀರದ ವಿಚಾರದಲ್ಲಿ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ಆರೆಸ್ಸೆಸ್‌ ಒಪ್ಪಿಕೊಳ್ಳದು.

* ರಾಮ ಮಂದಿರ ನಿರ್ಮಾಣ ನಮ್ಮ ಕನಸು. ಸಾಕಾರಕ್ಕೆ ಪ್ರಯತ್ನ ಮುಂದುವರಿಯಲಿದೆ.

* ಈಗಿರುವ ಮೀಸಲು ಕೋಟಾ ಪದ್ಧತಿ ಅಗತ್ಯ. ಆದರೆ ಅದನ್ನು ರಾಜಕೀಯಗೊಳಿಸಬಾರದು.

* ಸಂಘವು ಇಂಗ್ಲಿಷ್‌ ವಿರೋಧಿಯಲ್ಲ. ಆದರೆ ಅದು ಭಾರತೀಯ ಭಾಷೆಗಳ ಅಸ್ತಿತ್ವಕ್ಕ ಧಕ್ಕೆ ತರಬಾರದಷ್ಟೇ.

* ಮಹಿಳೆಯರಿಗೆ ಸುರಕ್ಷಿತ ಹಾಗೂ ಸುಭದ್ರ ವಾತಾವರಣ ನಿರ್ಮಿಸುವ ಅಗತ್ಯವಿದೆ.

ಬರಲಿವೆ ಸೆಗಣಿ ಸೋಪು , ಮೋದಿ ಅಂಡ್‌ ಯೋಗಿ ಕುರ್ತಾ

ಇ-ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ಇನ್ಮುಂದೆ ಗೋಮೂತ್ರ, ಸೆಗಣಿಯಿಂದ ತಯಾರಿಸಿ ಸೋಪು, ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೆಸರಿನಲ್ಲಿ ಕುರ್ತಾಗಳು ಸೇರಿದಂತೆ ತರಹೇವಾರಿ ದೇಸಿ ಉತ್ಪನ್ನಗಳು ಮಾರಾಟಕ್ಕೆ ಬರಲಿದ್ದು, ಇದಕ್ಕೆ ಆರೆಸ್ಸೆಸ್‌ ಬೆಂಬಲ ನೀಡಿದೆ. ಮಥುರಾದಲ್ಲಿರುವ ಆರೆಸ್ಸೆಸ್‌ನ ದೀನ್‌ ದಯಾಳ್‌ ಧಾಮ್‌ ಕೇಂದ್ರ ಹಾಗೂ ದೀನ್‌ ದಯಾಳ್‌ ಕಾಮಧೇನು ಗೋಶಾಲಾ ಔಷಧಾಲಯ ಇಂತಹ ಅನೇಕ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಆನ್‌ಲೈನ್‌ಲ್ಲಿ ಇವುಗಳ ಮಾರಾಟಕ್ಕೆ ಅವಕಾಶ ನೀಡುವುದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಆರೆಸ್ಸೆಸ್‌ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ