ಆ್ಯಪ್ನಗರ

ದರೋಡೆ, ಕೊಲೆ: ಮಾಜಿ ಯೋಧ ಸೇರಿದಂತೆ ಮೂವರ ಬಂಧನ

ಲಿಫ್ಟ್ ಕೊಡಿ ಎಂದು ಚಾಲಕನಲ್ಲಿ ವಿನಂತಿಸಿ ಟ್ರಕ್ ಏರಿದ ಆರೋಪಿಗಳು, ಆತನಿಗೆ ಬೆದರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಬಳಿಕ ಆತನನ್ನು ಹತ್ಯೆಗೈದು, ಟ್ರಕ್‌ ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

TIMESOFINDIA.COM 1 Mar 2019, 3:23 pm
ಫರಿದಾಬಾದ್‌: ಚಾಲಕನನ್ನು ಕೊಲೆ ಮಾಡಿ ಟ್ರಕ್ ದರೋಡೆ ಮಾಡಿದ ಆರೋಪದ ಮೇಲೆ ಮಾಜಿ ಸೈನಿಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಹರಿಯಾಣಾದಲ್ಲಿ ನಡೆದಿದೆ.
Vijaya Karnataka Web murder


ಫರಿದಾಬಾದ್‌ನ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಬಳಿ ಈ ಘಟನೆ ಸಂಭವಿಸಿತ್ತು. ಲಿಫ್ಟ್ ಕೊಡಿ ಎಂದು ಚಾಲಕನಲ್ಲಿ ವಿನಂತಿಸಿ ಟ್ರಕ್ ಏರಿದ ಆರೋಪಿಗಳು, ಆತನಿಗೆ ಬೆದರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಬಳಿಕ ಆತನನ್ನು ಹತ್ಯೆಗೈದು, ಟ್ರಕ್‌ ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

12 ಲಕ್ಷ ರೂಪಾಯಿ ಮೌಲ್ಯದ 120 ಏರ್ ಕೂಲರ್ ಹೊತ್ತು ಬರುತ್ತಿದ್ದ ಟ್ರಕ್ ಕಾಣೆಯಾಗಿದೆ ಎಂದು ಫೆ.20ರಂದು ಗ್ರೆಟರ್ ನೋಯ್ಡಾದ ವ್ಯಾಪಾರಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ದರೋಡೆ ಗ್ಯಾಂಗ್ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ