ಆ್ಯಪ್ನಗರ

ಅಂದೇ ಉಗ್ರರ ಉಡಾಯಿಸುತ್ತಿದ್ದೆವು, ಯುಪಿಎ ಸರಕಾರ ಅನುಮತಿ ನೀಡಲಿಲ್ಲ: ಐಎಎಫ್‌ ಮಾಜಿ ಪೈಲಟ್‌

'ಉಗ್ರರ ಶಿಬಿರಗಳನ್ನು ಅಂದೇ ಉಡಾಯಿಸಬೇಕಿತ್ತು. ತಡವಾದರೂ, ಆ ಕೆಲಸವನ್ನು ಈಗಲಾದರೂ ಮಾಡಿದ್ದು ಒಳ್ಳೆಯದಾಯಿತು. ಭಾರತೀಯ ವಾಯುಪಡೆಯ ಮಿರಾಜ್ 2000 ವಿಮಾನಗಳು ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು ಉಡಾಯಿಸಿ ಉಗ್ರ ನೆಲೆಗಳನ್ನು ಧ್ವಂಸ ಪಡಿಸಿದ್ದು ಒಳ್ಳೆಯದೇ ಆಯಿತು. 2008ರಲ್ಲಿ ಮುಂಬಯಿ ಮೇಲೆ ಉಗ್ರ ದಾಳಿ ನಡೆದ ಬಳಿಕ ಪಿಓಕೆಯ ಮುಜಾಫರಾಬಾದ್‌ನಲ್ಲಿರುವ ಉಗ್ರ ನೆಲೆಗಳನ್ನು ನಾವು ಧ್ವಂಸಗೊಳಿಸಲು ಸಜ್ಜಾಗಿದ್ದೆವು ಎಂದ ವಾಯುಪಡೆ ಮಾಜಿ ಪೈಲಟ್.

Vijaya Karnataka Web 26 Feb 2019, 7:08 pm
ಹೊಸದಿಲ್ಲಿ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಷೆ ಮೊಹಮ್ಮದ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನು ಹೊಸಕಿ ಹಾಕಿರುವುದಕ್ಕೆ ದೇಶಾದ್ಯಂತ ವ್ಯಾಪಕ ಸಂಭ್ರಮ ವ್ಯಕ್ತವಾಗುತ್ತಿದೆ. ಇದೇ ವೇಳೆ, ವಾಯುಪಡೆಯ ಮಾಜಿ ಪೈಲಟ್ ಒಬ್ಬರು, 2008ರಲ್ಲೇ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಲು ವಾಯುಪಡೆ ಸಜ್ಜಾಗಿತ್ತು; ಆದರೆ ಸರಕಾರ ಅನುಮತಿ ನೀಡಲಿಲ್ಲ ಎಂದು ಹೇಳಿದ್ದಾರೆ.
Vijaya Karnataka Web IAF Strikes


'ಉಗ್ರರ ಶಿಬಿರಗಳನ್ನು ಅಂದೇ ಉಡಾಯಿಸಬೇಕಿತ್ತು. ತಡವಾದರೂ, ಆ ಕೆಲಸವನ್ನು ಈಗಲಾದರೂ ಮಾಡಿದ್ದು ಒಳ್ಳೆಯದಾಯಿತು. ಭಾರತೀಯ ವಾಯುಪಡೆಯ ಮಿರಾಜ್ 2000 ವಿಮಾನಗಳು ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು ಉಡಾಯಿಸಿ ಉಗ್ರ ನೆಲೆಗಳನ್ನು ಧ್ವಂಸ ಪಡಿಸಿದ್ದು ಒಳ್ಳೆಯದೇ ಆಯಿತು. 2008ರಲ್ಲಿ ಮುಂಬಯಿ ಮೇಲೆ ಉಗ್ರ ದಾಳಿ ನಡೆದ ಬಳಿಕ ಪಿಓಕೆಯ ಮುಜಾಫರಾಬಾದ್‌ನಲ್ಲಿರುವ ಉಗ್ರ ನೆಲೆಗಳನ್ನು ನಾವು ಧ್ವಂಸಗೊಳಿಸಲು ಸಜ್ಜಾಗಿದ್ದೆವು. ನನ್ನ ಕಮಾಂಡ್‌ನಲ್ಲಿದ್ದ ಸುಖೋಯ್ ಸ್ಕ್ವಾಡ್ರನ್‌ ಈ ಕಾರ್ಯಾಚರಣೆಗೆ ಸಜ್ಜಾಗಿತ್ತು. ಆದರೆ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿಲ್ಲ. ತಡವಾದರೂ ಈಗ ಒಳ್ಳೆಯ ನಿರ್ಧಾರವೇ ಕೈಗೊಳ್ಳಲಾಗಿದೆ' ಎಂದು ನಿವೃತ್ತ ವಾಯುಪಡೆ ಪೈಲಟ್ ಮೊಹಂತೋ ಪ್ಯಾಂಗಿಂಗ್ ಟ್ವೀಟ್ ಮಾಡಿದ್ದಾರೆ.


ಈ ನಡುವೆ ರಕ್ಷಣಾ ತಜ್ಞ ನಿತಿನ್ ಗೋಖಲೆ ಟ್ವೀಟ್ ಮಾಡಿ, 2008ರ ಮುಂಬಯಿ ದಾಳಿ ವೇಳೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದವರು ಶಿವಶಂಕರ್ ಮೆನನ್‌. ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 26/11ರ ಲಷ್ಕರೆ ತಯ್ಬಾ ದಾಳಿ ಬಳಿಕ ಪಾಕ್ ಉಗ್ರರನ್ನು ದಂಡಿಸುವ ಕ್ರಮ ಕೈಗೊಳ್ಳದಿದ್ದುದು ಏಕೆ ಎಂದು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. 26/11ರ ದಾಳಿ ಬಳಿಕ ವಾಯುಪಡೆ ಇಂತಹದೇ ದಾಳಿ ನಡೆಸಲು ಸನ್ನದ್ಧವಾಗಿರುವುದಾಗಿ ತಿಳಿಸಿತ್ತು. ಆದರೆ ರಾಜಕೀಯ ನೇತಾರರು ನಿರ್ಧಾರ ಕೈಗೊಳ್ಳಲಿಲ್ಲ' ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ