ಆ್ಯಪ್ನಗರ

ಸರಕಾರಿ ನಿವಾಸ ತೆರವು ಮಾಡಲು ಮಾಜಿ ಸಂಸದರಿಗೆ 7 ದಿನ ಗಡುವು

ನಿಯಮದಂತೆ ಲೋಕಸಭೆ ವಿಸರ್ಜನೆಯಾದ ಒಂದು ತಿಂಗಳ ಒಳಗಾಗಿ ಮಾಜಿ ಸಂಸದರು ಸರಕಾರಿ ನಿವಾಸ ತೆರವುಗೊಳಿಸಬೇಕು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 16ನೇ ಲೋಕಸಭೆಯನ್ನು ಮೇ 25ರಂದು ವಿಸರ್ಜಿಸಿದ್ದಾರೆ.

PTI 20 Aug 2019, 5:00 am
ಹೊಸದಿಲ್ಲಿ: 16ನೇ ಲೋಕಸಭೆ ವಿಸರ್ಜನೆಯಾಗಿ ಎರಡು ತಿಂಗಳು ಕಳೆದರೂ ಸರಕಾರಿ ನಿವಾಸ ತೆರವು ಮಾಡದ ಮಾಜಿ ಸಂಸದರ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಇಂತಹ ನಿವಾಸಗಳಿಗೆ ನೀರು ಮತ್ತು ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವಂತೆ ಆದೇಶಿಸಿದೆ.
Vijaya Karnataka Web parliment

''ಸುಮಾರು 200 ಮಾಜಿ ಸಂಸದರು ನಗರದ ಪ್ರತಿಷ್ಠಿತ ಲ್ಯೂಟೆನ್ಸ್‌ ದಿಲ್ಲಿ ಪ್ರದೇಶದಲ್ಲಿ ಹಂಚಿಕೆ ಮಾಡಲಾಗಿದ್ದ ಸರಕಾರಿ ನಿವಾಸಗಳಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ ಮನೆ ಖಾಲಿ ಮಾಡಲು ಏಳು ದಿನಗಳ ಗಡುವು ನೀಡಲಾಗಿದ್ದು, ನಾಲ್ಕನೇ ದಿನದಿಂದ ನೀರು ಮತ್ತು ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,'' ಎಂದು ಸಂಸತ್‌ನ ವಸತಿ ಸಮಿತಿ ಅಧ್ಯಕ್ಷ ಸಿ.ಆರ್‌.ಪಾಟೀಲ್‌ ತಿಳಿಸಿದ್ದಾರೆ.
ನಿಯಮದಂತೆ ಲೋಕಸಭೆ ವಿಸರ್ಜನೆಯಾದ ಒಂದು ತಿಂಗಳ ಒಳಗಾಗಿ ಮಾಜಿ ಸಂಸದರು ಸರಕಾರಿ ನಿವಾಸ ತೆರವುಗೊಳಿಸಬೇಕು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 16ನೇ ಲೋಕಸಭೆಯನ್ನು ಮೇ 25ರಂದು ವಿಸರ್ಜಿಸಿದ್ದಾರೆ. 17ನೇ ಲೋಕಸಭೆ ಸದಸ್ಯರಲ್ಲಿ 260 ಮಂದಿ ಮೊದಲ ಸಲ ಆಯ್ಕೆಯಾಗಿದ್ದಾರೆ. ಮಾಜಿ ಸಂಸದರು ಸರಕಾರಿ ನಿವಾಸ ತೆರವುಗೊಳಿಸದ ಕಾರಣ, ಹೊಸ ಸದಸ್ಯರಿಗೆ ವಸತಿ ಕಲ್ಪಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆರ್ಥಿಕ ಮಿತವ್ಯಯದ ಕ್ರಮವಾಗಿ ಹೊಸ ಸದಸ್ಯರಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸುವ ಬದಲಾಗಿ, ಸರಕಾರಿ ಅತಿಥಿಗೃಹಗಳಲ್ಲಿಯೇ ತಾತ್ಕಾಲಿಕ ವಾಸ್ತವ್ಯ ಕಲ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ