ಆ್ಯಪ್ನಗರ

ಭ್ರಷ್ಟಚಾರ ಪ್ರಕರಣದ ಆರೋಪಿಯ ಪತ್ನಿಗೆ ಮೊಬೈಲ್‌ ಕರೆ ವಿವರ ನೀಡಿದ ಎನ್‌ಐಎ ಮಾಜಿ ಅಧಿಕಾರಿ ವಿರುದ್ಧ ಕೇಸ್‌!

​​ಸದ್ಯ ಬಿಎಸ್‌ಎಫ್‌ನಲ್ಲಿ ಕಾರ‍್ಯನಿರ್ವಹಿಸುತ್ತಿರುವ ಶ್ರೀವಾತ್ಸವ ವಿರುದ್ಧ ದೂರು ದಾಖಲಿಸಲು ಸಿಬಿಐ, ಗೃಹ ಸಚಿವಾಲಯದ ಅನುಮತಿ ಕೋರಿತ್ತು. ಅನುಮತಿ ದೊರೆತ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯೊಬ್ಬರಿಂದ 1.5 ಲಕ್ಷ ರೂ. ಲಂಚ ಪಡೆದ ಪ್ರಕರಣ ಸಂಬಂಧ ಸಿಬಿಐ 2018ರಲ್ಲಿ ಕಾನ್ಪುರ ವಿಭಾಗದಲ್ಲಿಆಗ ಜಿಎಸ್‌ಟಿ ಕಮಿಷನರ್‌ ಆಗಿದ್ದ ಸಂಸಾರ್‌ ಚಾಂದ್‌ ಹಾಗೂ ಅವರ ಪತ್ನಿ ಅವನೀಶ್‌ ಕೌರ್‌ ಅವರನ್ನು ಬಂಧಿಸಿತ್ತು.

Vijaya Karnataka Web 29 Aug 2020, 7:06 am
ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಅಧಿಕಾರಿಯೊಬ್ಬರ ಪತ್ನಿಗೆ ವ್ಯಕ್ತಿಯೊಬ್ಬರ ಮೊಬೈಲ್‌ ಕರೆಗಳನ್ನು ರವಾನಿಸಿ ಹಲವು ಬಗೆಯಲ್ಲಿ ನೆರವಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಜಿ ಅಧಿಕಾರಿ ಜಲಜ್‌ ಶ್ರೀವಾತ್ಸವ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
Vijaya Karnataka Web CBI_ED


ಸದ್ಯ ಬಿಎಸ್‌ಎಫ್‌ನಲ್ಲಿ ಕಾರ‍್ಯನಿರ್ವಹಿಸುತ್ತಿರುವ ಶ್ರೀವಾತ್ಸವ ವಿರುದ್ಧ ದೂರು ದಾಖಲಿಸಲು ಸಿಬಿಐ, ಗೃಹ ಸಚಿವಾಲಯದ ಅನುಮತಿ ಕೋರಿತ್ತು. ಅನುಮತಿ ದೊರೆತ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯೊಬ್ಬರಿಂದ 1.5 ಲಕ್ಷ ರೂ. ಲಂಚ ಪಡೆದ ಪ್ರಕರಣ ಸಂಬಂಧ ಸಿಬಿಐ 2018ರಲ್ಲಿ ಕಾನ್ಪುರ ವಿಭಾಗದಲ್ಲಿಆಗ ಜಿಎಸ್‌ಟಿ ಕಮಿಷನರ್‌ ಆಗಿದ್ದ ಸಂಸಾರ್‌ ಚಾಂದ್‌ ಹಾಗೂ ಅವರ ಪತ್ನಿ ಅವನೀಶ್‌ ಕೌರ್‌ ಅವರನ್ನು ಬಂಧಿಸಿತ್ತು.

ಪ್ರಕರಣದಿಂದ ಬಚಾವಾಗಲು ಕೌರ್‌, ಸುದೇಶ್‌ ಸೈನಿ ಎಂಬುವರ ಮೊಬೈಲ್‌ ದೂರವಾಣಿ ಕರೆಗಳ ವಿವರಗಳನ್ನು ತಮಗೆ ಒದಗಿಸುವಂತೆ ಜಲಜ್‌ ಶ್ರೀವಾತ್ಸವ ಅವರನ್ನು ಕೋರಿದ್ದರು. ಅದರಂತೆ ಶ್ರೀವಾತ್ಸವ ಅವರು 2017 ಹಾಗೂ 2018ರಲ್ಲಿ ಸುದೇಶ್‌ ಸೈನಿ ಎಂಬ ವ್ಯಕ್ತಿ ನಡೆಸಿದ್ದರು ಎನ್ನಲಾದ ದೂರವಾಣಿ ಕರೆಗಳ ವಿವರಗಳನ್ನು ಪಡೆದುಕೊಂಡು ಅದನ್ನು ಕೌರ್‌ ಅವರಿಗೆ ನೀಡಿದ್ದರು. ಈ ಪ್ರಕರಣದ ಒಳ ಸುಳಿಗಳನ್ನು ಜಾಲಾಡಿದ ಸಿಬಿಐ ಈಗ ಶ್ರೀವಾತ್ಸವ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.
ಜಿಎಸ್‌ಟಿ ನಷ್ಟ ಪರಿಹಾರ: ವಾಗ್ದಾನ ತಪ್ಪಿದ ಕೇಂದ್ರ, 5 ತಿಂಗಳಿಂದ ರಾಜ್ಯಗಳಿಗೆ ನಯಾಪೈಸೆ ಇಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ