ಆ್ಯಪ್ನಗರ

ವೇದಾಂತ ತಾಮ್ರ ಘಟಕದ ವಿಸ್ತರಣೆಗೆ ಮಂಜೂರಾಗಿದ್ದ ಭೂಮಿ ರದ್ದು

ವೇದಾಂತ ಸಂಸ್ಥೆಯ ತಾಮ್ರ ಉತ್ಪಾದನಾ ಘಟಕದ 2ನೇ ಹಂತದ ವಿಸ್ತರಣೆಗಾಗಿ ಮಂಜೂರಾಗಿದ್ದ ಭೂಮಿಯನ್ನು ತಮಿಳುನಾಡು ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ರದ್ದುಗೊಳಿಸಿದೆ.

TIMESOFINDIA.COM 29 May 2018, 1:10 pm
ಚೆನ್ನೈ: ವೇದಾಂತ ಸಂಸ್ಥೆಯ ತಾಮ್ರ ಉತ್ಪಾದನಾ ಘಟಕದ 2ನೇ ಹಂತದ ವಿಸ್ತರಣೆಗಾಗಿ ಮಂಜೂರಾಗಿದ್ದ ಭೂಮಿಯನ್ನು ತಮಿಳುನಾಡು ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ರದ್ದುಗೊಳಿಸಿದೆ.
Vijaya Karnataka Web vedantha


ಸೋಮವಾರ ವೇದಾಂತ ಸಂಸ್ಥೆಯ ತಾಮ್ರ ಉತ್ಪಾದನಾ ಘಟಕವನ್ನು ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರಕಾರ ಆದೇಶಿಸಿತ್ತು. ಘಟಕದ ಸಾಮರ್ಥ್ಯ ಹೆಚ್ಚಿಸಿ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಉದ್ಧೇಶದಿಂದ ಭೂಮಿ ಮಂಜೂರಾತಿಗೆ ಸಂಸ್ಥೆ ನಿಗಮಕ್ಕೆ ಅರ್ಜಿ ಸಲ್ಲಿಸಿತ್ತು. ದಾಖಲೆಗಳನ್ನು ಪರೀಶೀಲಿಸಿ, ಸಂಸ್ಥೆಗೆ ಭೂಮಿ ಮಂಜೂರು ಮಾಡಿತ್ತು.

ಸಂಸ್ಥೆ ವಿರುದ್ಧ ಪರಿಸರ ಮಾಲಿನ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರಕಾರ ಘಟಕವನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಂಜೂರಾಗಿದ್ದ ಭೂಮಿಯನ್ನು ರದ್ದುಗೊಳಿಸಲಾಗಿದ್ದು, ಭೂಮಿಗೆ ಪಾವತಿಸಲಾದ ಮೊತ್ತವನ್ನು ನಿಯಮಾನುಸಾರ ವಾಪಾಸು ಮಾಡಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸನ್‌ ತಿಳಿಸಿದ್ದಾರೆ.

ಜನರ ಹಾಗೂ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ, ಘಟಕದ ವಿಸ್ತರಣೆಗಾಗಿ ನೀಡಿದ್ದ ಭೂಮಿಯ ಮಂಜೂರಾತಿಯನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಘಟಕವನ್ನು ಮುಚ್ಚುವಂತೆ ತೂತುಕುಡಿಯಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಉಂಟಾದ ಗಲಭೆಯಲ್ಲಿ 13 ಮಂದಿ ಸಾವನ್ನಪ್ಪಿದ್ದರು. ವೇದಾಂತ ತಾಮ್ರ ಉತ್ಪಾದನಾ ಘಟಕದಿಂದಾಗುತ್ತಿರುವ ಪರಿಸರ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದಾಗಿ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ