ಆ್ಯಪ್ನಗರ

ಕಠುವಾ ಹೋರಾಟಗಾರನ ದೌರ್ಜನ್ಯ: ಪತ್ನಿ ದೂರು

ದೇಶಾದ್ಯಂತ ಸಂಚಲನ ಮೂಡಿಸಿದ್ದ ಕಠುವಾ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದ ಮುಂಚೂಣಿ ನಾಯಕತ್ವದಲ್ಲಿ ವಕೀಲ, ಸಾಮಾಜಿಕ ಕಾರ್ಯಕರ್ತ ತಾಲಿಬ್‌ ಹುಸೇನ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ.

Vijaya Karnataka 1 Jul 2018, 9:28 am
ಶ್ರೀನಗರ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕಠುವಾ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದ ಮುಂಚೂಣಿ ನಾಯಕತ್ವದಲ್ಲಿ ವಕೀಲ, ಸಾಮಾಜಿಕ ಕಾರ್ಯಕರ್ತ ತಾಲಿಬ್‌ ಹುಸೇನ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ.
Vijaya Karnataka Web Kathua


ತಾಲಿಬ್‌ ವಿರುದ್ಧ ಪತ್ನಿ ನಸ್ರತ್‌ ಬೇಗಮ್‌ (30) ನೇರವಾಗಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಜ್ಯುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಶಬನಮ್‌ ಶೇಕ್‌ ಅವರು ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ನಸ್ರತ್‌, ಅವರ ತಂದೆ ತಹಿರ್‌ ಮತ್ತು ಸುಮಾರು 12 ನೆರೆಹೊರೆಯವರು ಸೇರಿ ಸಲ್ಲಿಸಿದ ಲಿಖಿತ ದೂರು ಹಾಗೂ ಕೋರ್ಟ್‌ ಆದೇಶವನ್ನು ಆಧರಿಸಿ, ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು, ಬಳಿಕ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ರಣಬಿರ್‌ ಪೀನಲ್‌ ಕೋಡ್‌ (ಆರ್‌ಪಿಸಿ) ಸೆಕ್ಷನ್‌ 164 ಅಡಿಯಲ್ಲಿ, ದೂರುದಾರರ ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡು, ನಂತರ ತಾಲಿಬ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆಗಾಗಿ ಒತ್ತಾಯ, ವಿಚ್ಛೇದನ ಬೆದರಿಕೆ ಮತ್ತು ಕೊಲೆ ಆರೋಪವನ್ನು ತಾಲಿಬ್‌ ವಿರುದ್ಧ ಹೊರಿಸಲಾಗಿದೆ. ತಾಲಿಬ್‌ ಅವರ ಸಹೋದರನ ವಿರುದ್ಧವೂ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ