ಆ್ಯಪ್ನಗರ

ಕಾಂಗ್ರೆಸ್‌ನ ಆರ್ಥಿಕ ಸ್ಥಿತಿ ಇಷ್ಟೊಂದು ಹದಗೆಟ್ಟಿದೆಯೇ?

ಟೈಮ್ಸ್ ಆಫ್ ಇಂಡಿಯಾ 23 Dec 2016, 11:30 am
ಮುಂಬಯಿ: ಮುಂಬಯಿಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷ ಆರ್ಥಿಕ ತೊಂದರೆಯಿಂದಾಗಿ ಮುಂಬರುವ ಬಿಎಂಸಿ(ಮುಂಬಯಿ ಮಹಾನಗರ ಪಾಲಿಕೆ ಚುನಾವಣೆ)ಗೆ ಸ್ಪರ್ಧಿಸಲು ಅಪೇಕ್ಷಿಸುವ ಅಭ್ಯರ್ಥಿಗಳಿಗೆ ರೂ 5000 ಮುಂಗಡ ಹಣ ಹಾಗೂ ನಾಮಿನೇಷನ್ ಫಾರಂಗೆ ರೂ 500 ನಿಗದಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
Vijaya Karnataka Web facing cash crunch congress charges poll aspirants rs 5k each
ಕಾಂಗ್ರೆಸ್‌ನ ಆರ್ಥಿಕ ಸ್ಥಿತಿ ಇಷ್ಟೊಂದು ಹದಗೆಟ್ಟಿದೆಯೇ?


ಕಾಂಗ್ರೆಸ್‌ನ ಈ ಕ್ರಮದಿಂದಾಗಿ ಇದೀಗ ರೂ 60 ಲಕ್ಷ ಹಣ ಸಂಗ್ರಹವಾಗಿದ್ದು, ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 2500 ರೂ ನಿಗದಿ ಮಾಡಲಾಗಿದೆ. ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಅಭ್ಯರ್ಥಿಯೊಬ್ಬ 'ಫಾರಂಗೆ ರೂ 500 ಅಷ್ಟೇ, ಆದರೆ ನಮ್ಮಿಂದ 5000 ರೂ ಕಟ್ಟಸಿಕೊಳ್ಳುತ್ತಿದ್ದಾರೆ, ಒಂದು ವೇಳೆ ಸೋತರೆ ಹಣ ಹೋಯ್ತು, ಬೇರೆ ಪಕ್ಷದವರು ಫಾರಂಗೆ ಇಷ್ಟೊಂದು ದುಡ್ಡು ಕಟ್ಟಿಸಿಕೊಳ್ಳುತ್ತಿಲ್ಲ' ಎಂದರು.

ಚುನಾವಣೆ ಪ್ರಚಾರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯೊಬ್ಬರಿಗೆ 1 ಕೋಟಿ ನಿಗದಿ ಮಾಡಿದರೆ, ಕಾಂಗ್ರೆಸ್ ರೂ 50 ಲಕ್ಷ ನಿಗದಿ ಮಾಡಿರುವ ವಿಷಯದ ಕುರಿತ ವರದಿಯನ್ನು ಮುಂಬಯಿ ಮಿರರ್ ಪ್ರಕಟಿಸಿತ್ತು.

ಮುಂಬಯಿಯ ಕಾಂಗ್ರೆಸ್ ಮುಖ್ಯ ಕಚೇರಿ ಎಂಆರ್‌ಸಿಸಿಯ ಸಮೀಪ ಇರುವ ಟೀ ಅಂಗಡಿಯಿಂದ ಪಕ್ಷದ ಕಾರ್ಯಕರ್ತರು ಟೀ ತರಿಸಿಕೊಡುತ್ತಿದ್ದರು, ಆದರೆ ಚಾಯ್‌ವಾಲಾನಿಗೆ ಬಿಲ್ ಮಾತ್ರ ಕೊಡುತ್ತಿರಲಿಲ್ಲ, ಹೀಗಾಗಿ ಚಾಯ್‌ವಾಲಾನ ಬಳಿ ಕಾಂಗ್ರೆಸ್ 2 ಲಕ್ಷ ಸಾಲ ಬಾಕಿ ಉಳಿಸಿಕೊಂಡಿದೆ. ಸಾಲದ ಹಣವನ್ನು ಚುಕ್ತಾ ಮಾಡದಿದ್ದರೆ ಟೀ ಕೊಡಲ್ಲ ಎಂದು ಚಾಯ್‌ವಾಲಾ ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟವಾಗಿ ಹೇಳಿದ್ದಾನೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಮುಂಬಯಿಯ ಕಾಂಗ್ರೆಸ್ ಪಕ್ಷ ಆರ್ಥಿಕ ತೊಂದರೆಗೆ ಸಿಲುಕಿದೆ ಎನ್ನಲು ಈ ಮೇಲಿನ ಅಂಶಗಳೇ ಸಾಕ್ಷಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ