ಆ್ಯಪ್ನಗರ

Fact Check: ಸಿಎಎ ವಿರೋಧಿ ಪ್ರತಿಭಟನೆ ವೇಳೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರದ ಬದಲು ಇಸ್ಲಾಮಿಕ್ ಶ್ಲೋಕ..?

ರುದ್ರ ಹನುಮಾನ್ ಪೋಸ್ಟರ್ ಹಾಕಿಕೊಂಡರೆ ದೇಶದ ಜಾತ್ಯತೀತ ಮನಸ್ಥಿತಿಗೆ ಧಕ್ಕೆಯಾಗುತ್ತೆ ಎನ್ನುವುದಾದರೆ, ಲಾ ಇಲಾಹಿ ಇಲ್ಲಲ್ಲಾ ಎಂಬ ಬರಹ ರಾಷ್ಟ್ರಧ್ವಜದಲ್ಲಿ ಬಂದಿರುವುದಕ್ಕೆ ಏನನ್ನುತ್ತೀರಿ ಎಂದು ರಂಜನ್ ಪ್ರಶ್ನಿಸಿದ್ದರು.

TIMESOFINDIA.COM 5 Feb 2020, 2:04 pm
ಹೊಸ ದಿಲ್ಲಿ: ಫೇಸ್‌ಬುಕ್ ಬಳಕೆದಾರ ರಜತ್ ರಂಜನ್ ಎಂಬುವರು ಜನವರಿ 30,2020ರಂದು ಒಂದು ಪೋಸ್ಟ್‌ ಶೇರ್ ಮಾಡಿದ್ದರು. ಜನರ ದೊಡ್ಡ ಗುಂಪೊಂದು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡ್ತಿದ್ದ ಫೋಟೋ ಅದು.
Vijaya Karnataka Web fact check
Fact Check: ಸಿಎಎ ವಿರೋಧಿ ಪ್ರತಿಭಟನೆ ವೇಳೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರದ ಬದಲು ಇಸ್ಲಾಮಿಕ್ ಶ್ಲೋಕ..?


ಈ ಫೋಟೋಗೆ ವಿವರಣೆ ಬರೆದಿದ್ದ ರಜತ್ ರಂಜನ್, ಹೈದರಾಬಾದ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಭಾರತದ ಧ್ವಜದಲ್ಲಿ ಅಶೋಕ ಚಕ್ರದ ಬದಲು ‘ಲಾ ಇಲಾಹಿ ಇಲ್ಲಲ್ಲಾ’ ಎಂಬ ಇಸ್ಲಾಮಿಕ್ ಶ್ಲೋಕವನ್ನು ಬರೆಯಲಾಗಿತ್ತು ಎಂದು ವಿವರಿಸಿದ್ದರು. ಲಾ ಇಲಾಹಿ ಇಲ್ಲಲ್ಲಾ ಅಂದ್ರೆ ಅಲ್ಲಾನ ಹೊರತುಪಡಿಸಿ ಬೇರೆ ಯಾವುದೇ ದೇವರಿಲ್ಲ ಎಂಬ ಅರ್ಥ ಬರುತ್ತೆ.

ರುದ್ರ ಹನುಮಾನ್ ಪೋಸ್ಟರ್ ಹಾಕಿಕೊಂಡರೆ ದೇಶದ ಜಾತ್ಯತೀತ ಮನಸ್ಥಿತಿಗೆ ಧಕ್ಕೆಯಾಗುತ್ತೆ ಎನ್ನುವುದಾದರೆ, ಲಾ ಇಲಾಹಿ ಇಲ್ಲಲ್ಲಾ ಎಂಬ ಬರಹ ರಾಷ್ಟ್ರಧ್ವಜದಲ್ಲಿ ಬಂದಿರುವುದಕ್ಕೆ ಏನನ್ನುತ್ತೀರಿ ಎಂದು ರಂಜನ್ ಪ್ರಶ್ನಿಸಿದ್ದರು.


ಈ ಬಗ್ಗೆ ವಿಜಯ ಕರ್ನಾಟಕ ಮಾತೃಸಂಸ್ಥೆಯಾದ ಟೈಮ್ಸ್‌ ನೆಟ್‌ವರ್ಕ್‌ನ ವಾಟ್ಸಪ್‌ ನಂಬರ್‌ಗೆ ಸತ್ಯಾಸತ್ಯತೆ ಪರೀಕ್ಷಿಸಲು ಸಂದೇಶ ಬಂದಿತ್ತು. ಇದರ ಸತ್ಯಾಸತ್ಯತೆ ಪರೀಕ್ಷಿಸಿದಾಗ ರಜತ್ ರಂಜ್ ಮಾಡಿರುವ ಪೋಸ್ಟ್‌ ಅಸಲಿ ಅನ್ನೋದು ಪತ್ತೆಯಾಗಿದೆ.

ತೆಲಂಗಾಣದ ಹೈದ್ರಾಬಾದ್‌ನಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ತೆಗೆದ ಫೋಟೋ ಇದು. ಇಲ್ಲಿನ ಲೋಯರ್ ಟ್ಯಾಂಕ್ ಬಂಡ್‌ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಭಾರತದ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರದ ಬದಲಿಗೆ ಲಾ ಇಲಾಹಿ ಇಲ್ಲಲ್ಲ ಎಂದು ಬರೆಯಲಾಗಿತ್ತು.

ಅಶೋಕ ಚಕ್ರ, ಭಾರತ ಧ್ವಜ ಹಾಗೂ ಸಿಎಎ ಎಂಬ ಕೀವರ್ಡ್‌ಗಳನ್ನು ಬಳಸಿ ಹುಡುಕಿದರೆ ಪತ್ರಕರ್ತ ಆನಂದ್ ರಂಗನಾಥನ್ ಅವರ ಪೋಸ್ಟ್‌ ಸಿಗುತ್ತೆ. ಆ ಪೋಸ್ಟ್‌ನಲ್ಲೂ ಹೈದ್ರಾಬಾದ್‌ ಪ್ರತಿಭಟನೆ ವೇಳೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರದ ಬದಲಿಗೆ ಇಸ್ಲಾಮಿಕ್ ಶ್ಲೋಕ ಬಳಸಿರೋದನ್ನು ಪ್ರಸ್ತಾಪಿಸಿ ಫೋಟೋ ಸಮೇತ ಹಾಕಿದ್ದಾರೆ.


ಈ ಮೂಲಕ, ಹೈದ್ರಾಬಾದ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಅಶೋಕ ಚಕ್ರದ ಬದಲು ಲಾ ಇಲಾಹಿ ಇಲ್ಲಲ್ಲಾ ಎಂಬ ಇಸ್ಲಾಮಿಕ್ ಶ್ಲೋಕ ಬಳಸಿರೋದು ಸತ್ಯ ಎಂದು ಸಾಬೀತಾಗಿದೆ.

ತೆಲಂಗಾಣದಲ್ಲಿ ಅಶೋಕ ಚಕ್ರವಿಲ್ಲದೆ ಅರ್ಧ ಚಂದ್ರ, ನಕ್ಷತ್ರವಿರುವ ತ್ರಿವರ್ಣ ಧ್ವಜ ಹಾರಾಟ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ