ಜೋಧ್ಪುರ: ಸ್ತ್ರೀವೇಷ ಧರಿಸಿ ಹೆಣ್ಣು ಕೂಡ ನಾಚಿಸುವಂತೆ ನರ್ತಿಸುತ್ತಿದ್ದ 'ಕ್ವೀನ್' ಹರೀಶ್ ಸೇರಿ ನಾಲ್ವರು ಜನಪದ ಕಲಾವಿದರು ಭಾನುವಾರ ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಕ್ವೀನ್ ಹರೀಶ್ ನೇತೃತ್ವದ ನಾಲ್ವರು ಕಲಾವಿದರ ತಂಡವು ಕಾರಿನಲ್ಲಿ ಅಜ್ಮೇರ್ನಿಂದ ಜೈಸಲ್ಮೇರ್ ಕಡೆಗೆ ಹೊರಟಿತ್ತು. ಜೋಧ್ಪುರ ಸಮೀಪದ ಕಪರ್ದಾ ಹಳ್ಳಿಯ ಸಮೀಪ ನಿಯಂತ್ರಣ ಕಳೆದುಕೊಂಡ ಕಾರು ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಹರೀಶ್, ರವೀಂದ್ರ, ಭಿಕೆ ಖಾನ್ ಮತ್ತು ಲತೀಫ್ ಖಾನ್ ಮೃತಪಟ್ಟಿದ್ದಾರೆ. ಕಾರು ತೀವ್ರತರದಲ್ಲಿ ಜಖಂಗೊಂಡಿದೆ ಎಂದು ರಾಜಸ್ಥಾನದ ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಅನೇಕ ಗಣ್ಯರು ಮೃತರ ಕುಟುಂಬಕ್ಕೆ ಸಂತಾಪ ಸಲ್ಲಿಸಿದ್ದಾರೆ. ಜೈಸಲ್ಮೇರ್ ಮೂಲದ ಹರೀಶ್ ಕುಮಾರ್ ಅವರು ನೃತ್ಯಲೋಕದಲ್ಲಿ 'ಕ್ವೀನ್ ಹರೀಶ್' ಎಂದೇ ಹೆಸರಾಗಿದ್ದರು.
ರಸ್ತೆ ಅಪಘಾತದಲ್ಲಿ ಜನಪದ ಕಲಾವಿದ ಕ್ವೀನ್ ಹರೀಶ್ ದುರ್ಮರಣ
ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಕ್ವೀನ್ ಹರೀಶ್ ನೇತೃತ್ವದ ನಾಲ್ವರು ಕಲಾವಿದರ ತಂಡವು ಕಾರಿನಲ್ಲಿ ಅಜ್ಮೇರ್ನಿಂದ ಜೈಸಲ್ಮೇರ್ ಕಡೆಗೆ ಹೊರಟಿತ್ತು.
PTI 3 Jun 2019, 5:00 am