ಆ್ಯಪ್ನಗರ

ಮೋದಿ ಮೋಹ: ಭದ್ರತೆ ಉಲ್ಲಂಘಿಸಿ ಓಡಿ ಪ್ರಧಾನಿ ಪಾದಕ್ಕೆರಗಿದ

ಪ್ರಧಾನಿ ಮೋದಿ ಭೇಟಿ ಆಕಾಂಕ್ಷಿ ವ್ಯಕ್ತಿಯೊಬ್ಬ ಬಿಗಿ ಭದ್ರತೆಯನ್ನು ಉಲ್ಲಂಘಿಸಿ ಪ್ರಧಾನಿ ಬಳಿ ಓಡಿ ಆತಂಕ ಸೃಷ್ಟಿಸಿದ ಘಟನೆ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ನಡೆದಿದೆ.

TIMESOFINDIA.COM 27 May 2018, 12:01 pm
ಶಾಂತಿನಿಕೇತನ್: ಪ್ರಧಾನಿ ಮೋದಿ ಭೇಟಿ ಆಕಾಂಕ್ಷಿ ವ್ಯಕ್ತಿಯೊಬ್ಬ ಬಿಗಿ ಭದ್ರತೆಯನ್ನು ಉಲ್ಲಂಘಿಸಿ ಪ್ರಧಾನಿ ಬಳಿ ಓಡಿ ಆತಂಕ ಸೃಷ್ಟಿಸಿದ ಘಟನೆ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ನಡೆದಿದೆ.
Vijaya Karnataka Web modi gift


ಶುಕ್ರವಾರ ಮುಂಜಾನೆ ವಿಶ್ವ ಭಾರತಿ ಸಮ್ಮೇಳನ ಮುಗಿದ ಬಳಿಕ ಈ ಘಟನೆ ನಡೆದಿದೆ. ಕೃಷ್ಣನಗರದಿಂದ ಆಗಮಿಸಿದ್ದ ಸ್ವಪನ್ ಮರಿತ್ ಎಂಬ ವ್ಯಕ್ತಿ ಬಿಗಿ ಭದ್ರತೆ ಕಣ್ತಪ್ಪಿಸಿ ಮೋದಿ ನಿಂತಿದ್ದ ವೇದಿಕೆ ಕಡೆ ಓಡಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆಯುವರೊಳಗೆ ಪ್ರಧಾನಿ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಆತ ರಾಷ್ಟ್ರ ಕವಿ ರವೀಂದ್ರನಾಥ್ ಭಾವಚಿತ್ರವನ್ನು ಅವರ ಕೈಗಿತ್ತಿದ್ದಾನೆ. ಪ್ರಧಾನಿ ಮೋದಿ ಒಂದು ಕ್ಷಣ ದಿಗ್ಮೂಢರಾದರೂ ಬಳಿಕ ಸಾವರಿಸಿಕೊಂಡು ಟ್ಯಾಗೋರ್ ಭಾವಚಿತ್ರವನ್ನು ಸ್ವೀಕರಿಸಿದ್ದಾರೆ. ಕ್ಷಣಾರ್ಧದಲ್ಲಿ ಇದು ನಡೆದಿದ್ದು ವೇದಿಕೆಯಲ್ಲಿದ್ದ ವಿಶ್ವ-ಭಾರತಿ ಉಪಕುಲಪತಿ ಸಬುಜ್ಕಲಿ ಸೇನ್ ಅವರಿಗೂ ಇದರ ಅರಿವಾಗಲಿಲ್ಲ.

ಆತನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬೋಲಾಪುರ ಪೊಲೀಸ್ ಠಾಣೆಯಲ್ಲಿ ಆತನನ್ನು ವಿಚಾರಣೆಗೊಳಪಡಿಸಲಾಗಿದ್ದು ಮೋದಿ ಅವರನ್ನು ಭೇಟಿಯಾಗಿ ಟ್ಯಾಗೋರ್ ಭಾವಚಿತ್ರ ಕೊಡುವುದನ್ನು ಬಿಟ್ಟು ಬೇರೆ ಉದ್ದೇಶ ತನಗಿರಲಿಲ್ಲ ಎಂದಾತ ಹೇಳಿದ್ದಾನೆ.

ಘಟನೆ ನಡೆದಾಗ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಷ್ಟೇ ವೇದಿಕೆಯಿಂದ ನಿರ್ಗಮಿಸಿದ್ದರು.

ಮೋದಿ ದೇಶದಲ್ಲಿಯೇ ಅತಿ ಹೆಚ್ಚು ಸುರಕ್ಷತಾ ಭದ್ರತೆ ಹೊಂದಿದ ನೇತಾರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ