ಆ್ಯಪ್ನಗರ

ಫಾರೂಕ್‌ ಅಬ್ದುಲ್ಲ ಗೃಹ ಬಂಧನ ಮತ್ತೆ ಮೂರು ತಿಂಗಳು ವಿಸ್ತರಣೆ

ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲ ಅವರನ್ನು ಮುಂದಿನ ಮೂರು ತಿಂಗಳ ಅವಧಿಗೆ ಗೃಹಬಂಧನದಲ್ಲೇ ಇರಿಸಲು ಆದೇಶಿಸಲಾಗಿದೆ. ಫಾರೂಕ್‌ ಮನೆಯನ್ನು ಸಬ್‌-ಜೈಲ್‌ ಎಂದು ಘೋಷಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

TIMESOFINDIA.COM 14 Dec 2019, 6:29 pm
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲ ಅವರನ್ನು ಇನ್ನೂ ಮೂರು ತಿಂಗಳ ಕಾಲ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ. ಸಾರ್ವಜನಿಕ ಸುರಕ್ಷತಾ ಕಾಯ್ದೆ (Public Safety Act - PSA)ಯ ಅನ್ವಯ ಕೇಂದ್ರ ಗೃಹ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Vijaya Karnataka Web farook1


ಆಗಸ್ಟ್‌ 5 ರಂದು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದುಗೊಳಿಸಿದ ವೇಳೆ ಫಾರೂಕ್‌ ಅಬ್ದುಲ್ಲ ಅವರನ್ನು ಗೃಹ ಬಂಧನದಲ್ಲಿ ಇರಿಸಲು ಆದೇಶ ನೀಡಲಾಗಿತ್ತು. ಐದು ಬಾರಿ ಸಂಸದರಾಗಿ, ಮೂರು ಬಾರಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಫಾರೂಕ್‌ ಅಬ್ದುಲ್ಲ ಅವರನ್ನು ಕಳೆದು ಐದು ತಿಂಗಳಿನಿಂದ ಗೃಹ ಬಂಧನದಲ್ಲಿಯೇ ಇರಿಸಲಾಗಿದೆ. ಇದೀಗ ಮತ್ತೆ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿದೆ. ಗುಪ್‌ಕರ್‌ ರಸ್ತೆಯಲ್ಲಿರುವ ಫಾರೂಕ್‌ ಅಬ್ದುಲ್ಲ ಮನೆಯನ್ನು ಸಬ್‌ ಜೈಲು ಎಂದು ಗೃಹ ಇಲಾಖೆ ಘೋಷಣೆ ಮಾಡಿದೆ.

ಎಂಡಿಎಂಕೆ ನಾಯಕ ಫಾರೂಕ್‌ ಅಬ್ದುಲ್ಲ ಅವರನ್ನು ಕಾನೂನು ಬಾಹಿರವಾಗಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಸೆ.17 ರಂದು ವಿಚಾರಣೆ ಆರಂಭಗೊಳ್ಳುವ ಕೆಲವೇ ಗಂಟೆಗಳ ಮೊದಲು PSA ಅಡಿಯಲ್ಲಿ ಅವರನ್ನು ಗೃಹಬಂಧನದಲ್ಲಿಡುವಂತೆ ಆದೇಶ ನೀಡಲಾಗಿತ್ತು.

370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ

ಡಿ.13 ರಂದು ಮುಕ್ತಾಯಗೊಂಡ ಲೋಕಸಭೆ ಚಳಿಗಾಲ ಅಧಿವೇಶನದ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರಕ್ಕೂ ಫಾರೂಕ್‌ ಅಬ್ದುಲ್ಲ ಗೃಹ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಜಮ್ಮು ಕಾಶ್ಮೀರ ಆಡಳಿತ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತದೆ. ರಾಜ್ಯದ ಸುರಕ್ಷತೆಯ ದೃಷ್ಟಿಯಿಂದ ಈ ಕುರಿತು ಸ್ಥಳೀಯ ಆಡಳಿತ ವ್ಯವಸ್ಥೆಯೇ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲ ಪುತ್ರ, ಒಮರ್‌ ಅಬ್ದುಲ್ಲ, ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ಮಂದಿ ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕರನ್ನು ಆ.5 ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ. ಕೇಂದ್ರದ ಈ ನಿರ್ಧಾರವನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.


ಕಾಯ್ದೆಯ ಪ್ರಕಾರ ರಾಜ್ಯದ ಸುರಕ್ಷತೆಯ ದೃಷ್ಟಯಿಂದ ವ್ಯಕ್ತಿಯೋರ್ವನನ್ನು ಯಾವುದೇ ನ್ಯಾಯಾಲಯದ ವಿಚಾರಣೆ ಇಲ್ಲದೇ ಮೂರು ತಿಂಗಳಿನಿಂದ ಒಂದು ವರ್ಷದ ವರೆಗೆ ಅಥವಾ ಬಳಿಕ ಎರಡು ವರ್ಷಗಳ ವರೆಗೆ ಬಂಧನದಲ್ಲಿರಿಸಲು ಅವಕಾಶ ಇರಲಿದೆ. ಈ ಕಾಯ್ದೆ ಕೇವಲ ಜಮ್ಮು ಕಾಶ್ಮೀರ ಭಾಗಕ್ಕೆ ಮಾತ್ರವೇ ಅನ್ವಯವಾಗುತ್ತದೆ. ರಾಷ್ಟ್ರೀಯ ಸುರಕ್ಷತಾ ಕಾಯ್ದೆ (ಎನ್‌ಎಸ್‌ಎ)ಗೆ ಸರಿ ಸಮಾನವಾದ ಕಾಯ್ದೆ ಇದಾಗಿದೆ.
ಆಗಸ್ಟ್‌ 5 ರಂದು ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಲದಾಕ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸುವ ನಿರ್ಣಯ ಕೈಗೊಂಡಿತ್ತು.

82 ವರ್ಷದ ಫಾರೂಕ್‌ ಅಬ್ದುಲ್ಲ ಕೆಲ ವರ್ಷಗಳ ಹಿಂದಷ್ಟೇ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಅಂತೆಯೇ ಅವರಿಗೆ ಹೃದಯಕ್ಕೆ ಪೇಸ್‌ಮೇಕರ್‌ ಅಳವಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ