ಆ್ಯಪ್ನಗರ

ತ್ರಿವಳಿ ತಲಾಖ್‌ ಸಂತ್ರಸ್ತೆ ವಿರುದ್ಧ ಫತ್ವಾ ಹೊರಡಿಸಿದ ಮೌಲ್ವಿ

ಬರೇಲಿಯಲ್ಲಿ ಮುಸ್ಲಿಂ ಮಹಿಳೆ ವಿರುದ್ಧ ಕ್ರಮ

Vijaya Karnataka Web 24 Jul 2018, 10:23 pm
ಬರೇಲಿ: ತ್ರಿವಳಿ ತಲಾಖ್‌ ವಿರುದ್ಧ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣ ವರದಿಯಾಗಿದೆ.
Vijaya Karnataka Web ತ್ರಿವಳಿ ತಲಾಖ್‌
ತ್ರಿವಳಿ ತಲಾಖ್‌


ಬಲವಂತದಿಂದ ತ್ರಿವಳಿ ತಲಾಖ್ ನೀಡಿದ್ದ ಮಹಿಳೆಯನ್ನು ಈಗ ಬಹಿಷ್ಕರಿಸುವಂತೆ ಬರೇಲಿಯ ದರ್ಗಾ ಆಲಾ ಹಜರತ್‌ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.

ನಿದಾ ಖಾನ್‌ ಎಂಬಾಕೆಗೆ ಪತಿ ಶೀರನ್‌ ರಾಜಾ 2016ರಲ್ಲಿ ತಲಾಖ್‌ ನೀಡಿದ್ದರು.

ಅದಕ್ಕೂ ಮುನ್ನ ಕೆಲವು ವರ್ಷಗಳಿಂದಲೂ ನಿದಾ ಖಾನ್‌ ಮೇಲೆ ಹಲ್ಲೆ ನಡೆಸಿ ಆಕೆಗೆ ಗರ್ಭಪಾತವಾಗುವಂತೆ ಕೂಡ ಮಾಡಿದ್ದರು. ಈ ವಿಷಯವನ್ನು ನಿದಾ ಖಾನ್‌ ತಿಳಿಸಿದ್ದಾರೆ.

ಇದರಿಂದ ಬೇಸತ್ತು ಸಿಡಿದೆದ್ದಿದ್ದ ನಿದಾಖಾನ್ ಹೋರಾಟಕ್ಕೆ ಮುಂದಾಗಿದ್ದರು. ಸ್ವಯಂ ಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಮುಸ್ಲಿಂ ಮಹಿಳೆಯರಿಗೆ ತಿಳಿವಳಿಕೆ ನೀಡುವ ಕಾರ್ಯ ಮಾಡುತ್ತಿದ್ದರು.

ಅಲ್ಲದೇ ಕುರಾನ್‌, ತ್ರಿವಳಿ ತಲಾಖ್‌, ಮುಸ್ಲಿಂ ಷರಿಯಾ ಕಾನೂನು ಹಾಗೂ ಇತರ ಕೆಲವು ನಿಯಮಗಳ ವಿರುದ್ಧ ಬಹಿರಂಗವಾಗಿಯೇ ತಮ್ಮ ದನಿ ಎತ್ತಿದ್ದರು.

ಹೀಗಾಗಿ ನಿದಾ ಖಾನ್‌ ವಿರುದ್ಧ ಇಲ್ಲಿನ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.

ಒಂದು ವೇಳೆ ಆಕೆ ಕ್ಷಮಾಪಣೆ ಕೇಳದಿದ್ದರೆ, ಆಕೆಯನ್ನು ಬಹಿಷ್ಕರಿಸಬೇಕಾಗುತ್ತದೆ. ಯಾರೂ ಆಕೆಯೊಂದಿಗೆ ಮಾತನಾಡಬಾರದು, ಆಕೆ ಜತೆ ಊಟ ಮಾಡಬಾರದು, ಆನಾರೋಗ್ಯಕ್ಕೊಳಗಾದರೆ ಆರೈಕೆ ಮಾಡಬಾರದು, ಒಂದು ವೇಳೆ ಮೃತಪಟ್ಟರೆ ಆಕೆಗೆ ಕೊನೆಯ ಪ್ರಾರ್ಥನೆಯನ್ನೂ ಸಲ್ಲಿಸಬಾರದು ಎಂದು ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ.

ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್ ಆಫ್‌ ಇಂಡಿಯಾಗೆ ಈ ಫತ್ವಾ ದಾಖಲೆ ದೊರೆತಿದೆ.

ಆದರೆ 2014ರ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಷರಿಯಾ ಕೋರ್ಟ್‌ಗಳು ನೀಡುವ ಆದೇಶಗಳಿಗೆ ಯಾವುದೇ ಮಾನ್ಯತೆ ಇಲ್ಲ. ನನ್ನ ಗಂಡ ತಲಾಖ್‌ ನೀಡಿದಾಗ ನನ್ನ ಆಭರಣ, ನನಗೆ ಸೇರಬೇಕಾದ ಎಲ್ಲವನ್ನೂ ನೀಡಬೇಕಾಗಿತ್ತು. ತಲಾಖ್‌ ನೀಡಿದ ಮೌಲ್ವಿಗಳು ಆತನ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ನಿದಾ ಖಾನ್‌ ವಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ