ಆ್ಯಪ್ನಗರ

ಮಿತ್ರ ಪಕ್ಷದಿಂದಲೇ ಆಪರೇಷನ್‌ ಭಯ, ಶಾಸಕರಿಗೆ ಪೊಲೀಸ್‌ ಭದ್ರತೆ ಕೋರಿದ ಶಿವಸೇನೆ

ತನ್ನ ಮಿತ್ರ ಪಕ್ಷ ಬಿಜೆಪಿಯೇ ತನ್ನ ಶಾಸಕರಿಗೆ ಗಾಳ ಹಾಕುವ ಭಯದಿಂದ ಶಿವಸೇನೆ ನವೆಂಬರ್‌ 15ರ ವರೆಗೆ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ಮುಂದಾಗಿದೆ. ಹೀಗಿದ್ದೂ ಆಪರೇಷನ್‌ ನಡೆಯಬಹುದು ಎಂಬ ಭಯದಲ್ಲಿ ಶಾಸಕರಿಗೆ ಪೊಲೀಸ್‌ ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿದೆ.

TIMESOFINDIA.COM 8 Nov 2019, 6:34 pm
ಮುಂಬಯಿ: ಮಹಾರಾಷ್ಟ್ರದ ಹಾಲಿ ವಿಧಾನಸಭೆ ಅವಧಿ ಶನಿವಾರಕ್ಕೆ ಕೊನೆಗೊಳ್ಳಲಿದ್ದು ಸರಕಾರ ರಚನೆ ಕಸರತ್ತು ಇನ್ನೂ ಮುಕ್ತಾಯ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಮಾಯಾನಗರಿಯಲ್ಲಿ ರೆಸಾರ್ಟ್‌ ರಾಜಕಾರಣ ಶುರುವಾಗಿದೆ.
Vijaya Karnataka Web Shiv Sena President Uddhav Thackeray


ತನ್ನ ಮಿತ್ರ ಪಕ್ಷ ಬಿಜೆಪಿಯೇ ತನ್ನ ಶಾಸಕರಿಗೆ ಗಾಳ ಹಾಕುವ ಭಯದಿಂದ ಶಿವಸೇನೆ ನವೆಂಬರ್‌ 15ರ ವರೆಗೆ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ಮುಂದಾಗಿದೆ. ಹೀಗಿದ್ದೂ ಆಪರೇಷನ್‌ ನಡೆಯಬಹುದು ಎಂಬ ಭಯದಲ್ಲಿ ಶಾಸಕರಿಗೆ ಪೊಲೀಸ್‌ ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿದೆ.

ಈ ಸಂಬಂಧ ಶಿವಸೇನೆಯ ಕಾರ್ಯದರ್ಶಿ ಮಿಲಿಂದ್‌ ನರ್ವೇಕರ್‌ ಮುಂಬಯಿ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದು ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ನವೆಂಬರ್‌ 15ರವರೆಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿಕೊಂಡಿದ್ದಾರೆ. ಎಲ್ಲಾ ಶಾಸಕರು ಮುಂಬಯಿ ಉಪನಗರ ಮಲಾಡ್‌ನ ರಿಟ್ರೀಟ್‌ ಹೊಟೇಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ ಎಂಬುದಾಗಿ ಅವರು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

“ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮುಂದಿನ ತೀರ್ಮಾನಕ್ಕಾಗಿ ಆಗಾಗ ಶಾಸಕರನ್ನು ಭೇಟಿಯಾಗಲಿದ್ದಾರೆ. ಸೂಕ್ತ ರಕ್ಷಣೆಗಾಗಿ ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ,” ಎಂಬುದಾಗಿ ಪೊಲೀಸರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಶಿವಸೇನೆಯಿಂದ ಪತ್ರ ಬಂದಿರುವುದನ್ನು ಮುಂಬಯಿ ಪೊಲೀಸರು ಖಚಿತಪಡಿಸಿದ್ದಾರೆ. “ನಾವು ಶಿವಸೇನೆಯಿಂದ ಪತ್ರ ಸ್ವೀಕರಿಸಿದ್ದೇವೆ ಮತ್ತು ಮುಂಬಯಿ ಪೊಲೀಸರು ಶಾಸಕರು ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ,” ಎಂಬುದಾಗಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಅಧಿಕಾರ ಹಂಚಿಕೆ ಸಂಬಂಧ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಪಟ್ಟು ಹಾಕಿ ಕುಳಿತಿವೆ. ಹೀಗಾಗಿ ಅಕ್ಟೋಬರ್‌ 24ರಂದು ಫಲಿತಾಂಶ ಬಂದಿದ್ದರೂ ಇನ್ನೂ ಸರಕಾರ ರಚನೆ ಆಗಿಲ್ಲ. ಈ ನಡುವೆ ನಮ್ಮ ಶಾಸಕರಿಗೆ ಪಕ್ಷ ಬದಲಾಯಿಸಲು ಆಮಿಷ ಒಡ್ಡಲಾಗುತ್ತಿದೆ ಎಂಬುದಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳು ದೂರಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ