ಆ್ಯಪ್ನಗರ

ಬಂಧನದ ಭೀತಿ: ತಂದೆ ಅಂತ್ಯ ಸಂಸ್ಕಾರಕ್ಕೆ ಬಾರದ ಝಾಕೀರ್ ನಾಯ್ಕ್

ಪ್ರಚೋದಾತ್ಮಕ ಭಾಷಣಗಳಿಂದ ಧರ್ಮ ಬೋಧಿಸುವ ಆರೋಪ ಹೊತ್ತಿರುವ ಡಾ.ಝಾಕೀರ್ ನಾಯ್ಕ್ ತಂದೆ ಡಾ.ಅಬ್ದುಲ್ ಕರೀಮ್ ನಾಯ್ಕ್ ಭಾನುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದು, ಬಂಧನದ ಭೀತಿಯಿಂದ ಝಾಕೀರ್, ತಮ್ಮ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ.

ಏಜೆನ್ಸೀಸ್ 31 Oct 2016, 10:17 am
ಮುಂಬಯಿ: ವಿವಾದಿತ ಧರ್ಮ ಪ್ರಚಾರಕ ಡಾ.ಝಾಕೀರ್ ನಾಯ್ಕ್ ತಂದೆ ಡಾ.ಅಬ್ದುಲ್ ಕರೀಮ್ ನಾಯ್ಕ್ ಭಾನುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದು, ಬಂಧನದ ಭೀತಿಯಿಂದ ಝಾಕೀರ್, ತಮ್ಮ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ.
Vijaya Karnataka Web fearing arrest zakir naik skips fathers funeral in mumbai
ಬಂಧನದ ಭೀತಿ: ತಂದೆ ಅಂತ್ಯ ಸಂಸ್ಕಾರಕ್ಕೆ ಬಾರದ ಝಾಕೀರ್ ನಾಯ್ಕ್


ಜುಲೈ 1ರ ಢಾಕಾ ದಾಳಿ ರೂವಾರಿಗಳು ಝಾಕೀರ್ ನಾಯ್ಕ್ ಭಾಷಣಗಳಿಂದ ಪ್ರಚೋದಿರಾಗಿದ್ದರು ಎಂಬ ಆರೋಪವಿದ್ದು, ಇದೀಗ ನಾಯ್ಕ್ ಮಲೈಷ್ಯಾದಲ್ಲಿ ಇದ್ದಾರೆನ್ನಲಾಗಿದೆ.

ಮತ್ತೆ ನಾಯ್ಕ್ ವಿರುದ್ಧ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಕೇಂದ್ರ ಸರಕಾರ ಅವರ ಸರ್ಕಾರೇತರ ಸಂಘಟನೆಯಾದ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನವನ್ನು ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯಡಿ 'ಕಾನೂನುಬಾಹಿರ ಸಂಘಟನೆ' ಎಂದು ಘೋಷಿಸಲು ನಿರ್ಧರಿಸಿದೆ. ಈ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ನಾಯ್ಕ್ ಮಾಲೀಕತ್ವದ ಪೀಸ್ ಟಿವಿ ಪ್ರಸಾರ ಮಾಡುವ ಕೋಮುವಾದ ಸೃಷ್ಟಿಸುವ ಕಾರ್ಯಕ್ರಮಗಳು, ನಾಯ್ಕ್ ಅವರ ಪ್ರಚೋದಾತ್ಮಕ ಭಾಷಣಗಳು ಹಾಗೂ ಅವರ ವಿರುದ್ಧ ದಾಖಲಾದ ಪ್ರಕರಣಗಳನ್ನು ಪ್ರಸ್ತುತಪಡಿಸಲಿದೆ.

ನಾಯ್ಕ್ ತಂದೆ ಮುಂಬಯಿ ಮನೋಶಾಸ್ತ್ರ ಸಂಘಟನೆಯ ಮುಖ್ಯಸ್ಥರಾಗಿದ್ದರು. ಫಿಸಿಷಿಯನ್ ಹಾಗೂ ಶಿಕ್ಷಣ ತಜ್ಞರಾಗಿದ್ದ ಡಾ. ಕರೀಮ್ ಅವರು ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಅವರನ್ನು ಮಾರ್ಗೋವ್‌ನ ಪ್ರಿನ್ಸ್ ಅಲಿ ಖಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೇ ರೋಡ್ ನಿಲ್ದಾಣದ ಸಮೀಪ ನಡೆದ ಅವರ ಅಂತ್ಯ ಕ್ರಿಯೆಯಲ್ಲಿ ವಕೀಲರು, ವೈದ್ಯರು, ರಾಜಕಾರಣಿಗಳು, ಪತ್ರಕರ್ತರು ಮತ್ತು ಉದ್ಯಮಿಗಳು ಸೇರಿ 1,500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ