ಆ್ಯಪ್ನಗರ

ಗೋ ರಕ್ಷಕರ ಭಯವೆಂದು ಗೋವುಗಳನ್ನು ಪೊಲೀಸರಿಗೆ ಒಪ್ಪಿಸಿದ ಮುಸ್ಲಿಂ ಕೌನ್ಸಿಲರ್‌

ನೂತನ ಮುಸ್ಲಿಂ ಕೌನ್ಸಿಲರ್‌ ಒಬ್ಬ ಮನೆಯವರ ಮತ್ತು ಸ್ನೇಹಿತರ ಸುರಕ್ಷತೆ ದೃಷ್ಟಿಯಿಂದ ಸಾಕಿದ ಹಸುವನ್ನು ಪೊಲೀಸರಿಗೆ ಒಪ್ಪಿಸಿದ ವಿಚಿತ್ರ ಘಟನೆ ನಡೆದಿದೆ.

Vijaya Karnataka Web 17 Jan 2018, 7:09 pm
ಮೀರತ್‌: ಮುನ್ಸಿಪಾಲ್‌ ಕೌನ್ಸಿಲರ್‌ ಆಗಿ ನೂತನವಾಗಿ ಆಯ್ಕೆ ಆಗಿರುವ ಅಬ್ದುಲ್‌ ಗಫರ್‌ ಎಂಬುವವರು 'ಗೋರಕ್ಷಕರಿಂದ ಭಯವಿದೆ' ಎಂದು ತಮ್ಮ ಮನೆಯಲ್ಲಿರುವ ಹಸುವನ್ನು ಪೊಲೀಸ್‌ ಠಾಣೆಗೆ ತಂದು ಒಪ್ಪಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
Vijaya Karnataka Web fearing gaurakshaks muslim councillor gives away cow to cops
ಗೋ ರಕ್ಷಕರ ಭಯವೆಂದು ಗೋವುಗಳನ್ನು ಪೊಲೀಸರಿಗೆ ಒಪ್ಪಿಸಿದ ಮುಸ್ಲಿಂ ಕೌನ್ಸಿಲರ್‌


ನಾನೊಬ್ಬ ಮುಸ್ಲಿಂ ಆಗಿದ್ದು, ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಜಾಗ್ರತೆಯಿಂದ ಇರುವಂತೆ ಹೇಳಿದ್ದೇನೆ. ಗೋ ರಕ್ಷಕರು ಎಂಬ ಹೆಸರಿನಲ್ಲಿ ನಡೆಯುತ್ತಿರು ದೌರ್ಜನ್ಯದಿಂದ ಭಯವಾಗುತ್ತಿದೆ ಎಂದು 73 ವರ್ಷದ ಗಫರ್‌ ಪೊಲೀಸರಿಗೆ ತಿಳಿಸಿದ್ದಾರೆ.

'ನಮ್ಮ ಮನೆಯಲ್ಲಿರುವ ಹಸುವನ್ನು ಆಸ್ಪತ್ರೆಗೆ ಕರೆದೊಯ್ಯಲು ಭಯವಾಗುತ್ತಿತ್ತು' ಎಂದಿರುವ ಗಫರ್‌ ಹಸುವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆದರೆ ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬ ವಿಚಾರದಲ್ಲಿ ನೌಚಂಡಿ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಹಸುವನ್ನು ಠಾಣೆಯ ಆವರಣದಲ್ಲಿ ಕಟ್ಟಿಹಾಕಲಾಗಿದ್ದು, ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಗೋಮಾಳಕ್ಕೆ ಕಳುಹಿಸುವ ಯೋಚನೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿಯಲ್ಲಿ ಈ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ