ಆ್ಯಪ್ನಗರ

ಬೆಂಚಿನ ಮೇಲೆ ನಿಲ್ಲಿಸಿದ್ದಕ್ಕೆ 5ನೇ ತರಗತಿ ವಿದ್ಯಾರ್ಥಿಯ ಆತ್ಮಹತ್ಯೆ

ಶಾಲೆಯಲ್ಲಿ ಶಿಕ್ಷಕರ ಶಿಕ್ಷೆಗೆ ಬೆದರಿ ಐದನೇ ತರಗತಿ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋರಖ್‌ಪುರದಲ್ಲಿ ನಡೆದಿದೆ.

Vijaya Karnataka Web 22 Sep 2017, 11:34 am
ಗೋರಖ್‌ಪುರ: ಶಾಲೆಯಲ್ಲಿ ಶಿಕ್ಷಕರ ಶಿಕ್ಷೆಗೆ ಬೆದರಿ ಐದನೇ ತರಗತಿ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋರಖ್‌ಪುರದಲ್ಲಿ ನಡೆದಿದೆ.
Vijaya Karnataka Web fifth std student suicide
ಬೆಂಚಿನ ಮೇಲೆ ನಿಲ್ಲಿಸಿದ್ದಕ್ಕೆ 5ನೇ ತರಗತಿ ವಿದ್ಯಾರ್ಥಿಯ ಆತ್ಮಹತ್ಯೆ


ಸೇಂಟ್‌ ಆ್ಯಂಥೋನಿ ಶಾಲೆಯ 11 ವರ್ಷದ ವಿದ್ಯಾರ್ಥಿ ನವನೀತ್‌ ಪ್ರಕಾಶ್‌ ಮೃತಪಟ್ಟ ಬಾಲಕ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಶಿಕ್ಷ ಕರೊಬ್ಬರು ತನ್ನನ್ನು ಮೂರು ಪೀರಿಯಡ್‌ಗಳಿಗೆ ಬೆಂಚಿನ ಮೇಲೆ ನಿಲ್ಲಿಸಿದರಲ್ಲದೆ, ಕೆಟ್ಟದಾಗಿ ವರ್ತಿಸಿದರು ಎಂದು ದೂರಿದ್ದಾನೆ. ‘ಯಾರಿಗೂ ಇಷ್ಟು ಘೋರ ಶಿಕ್ಷೆ ನೀಡದಂತೆ ನನ್ನ ಟೀಚರ್‌ಗೆ ಹೇಳಿ’ಎಂದು ಎಂದಿದ್ದಾನೆ.

ಸೆ.15ರಂದು ಪರೀಕ್ಷೆ ಬರೆಯಲು ಶಾಲೆಗೆ ಹೋದ ನವನೀತ್‌ ಮನೆಗೆ ಬರುವಾಗ ಬೇಸರದಲ್ಲಿದ್ದ. ಅದೇ ದಿನ ಸಂಜೆ ವಿಷ ಸೇವಿಸಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ. ಈ ಶಿಕ್ಷಕನಿಂದ ಆತ ಪದೇ ಪದೆ ಮಾನಸಿಕವಾಗಿ ನೋಯುತ್ತಿದ್ದ. ಈ ಬಗ್ಗೆ ನಾವು ಶಾಲಾಡಳಿತಕ್ಕೆ ದೂರು ಕೂಡ ನೀಡಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ.

ಆರೋಪಿ ಶಿಕ್ಷಕ ಹಾಗೂ ಶಾಲೆಯ ವಿರುದ್ಧ ಕುಟುಂಬವು ಪ್ರಕರಣ ದಾಖಲಿಸಿದ್ದು, ಶಾಲಾಡಳಿತವಿನ್ನೂ ಘಟನೆ ಕುರಿತು ಪ್ರತಿಕ್ರಿಯಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ