ಆ್ಯಪ್ನಗರ

ನಮ್ಮದು ಸೂಟ್‌ಕೇಸ್‌ ಸರಕಾರವಲ್ಲ : ಟೀಕೆಗಳಿಗೆ ನಿರ್ಮಲಾ ತಿರುಗೇಟು

ಹಣಕಾಸು ಸಚಿವೆಯಾದ ನಂತರ ಮೊದಲ ಬಾರಿಗೆ ಚೆನ್ನೈಗೆ ಆಗಮಿಸಿದ ನಿರ್ಮಲಾ ಸೀತಾರಾಮನ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

PTI 21 Jul 2019, 5:00 am
ಚೆನ್ನೈ: ನಮ್ಮದು ಸೂಟ್‌ಕೇಸ್‌ ಸಂಸ್ಕೃತಿಯ ಸರಕಾರವಲ್ಲ. ಭ್ರಷ್ಟಾಚಾರಕ್ಕೆ ಸೂಜಿಮೊನೆಯಷ್ಟೂ ಆಸ್ಪದವಿಲ್ಲ. ಪಾರದರ್ಶಕ ಹಾಗೂ ದಕ್ಷ ಆಡಳಿತವೇ ನಮ್ಮ ಹೆಚ್ಚುಗಾರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಈ ಮೂಲಕ ಅವರು ಬಜೆಟ್‌ ಮಂಡನೆ ವೇಳೆ ಸೂಟ್‌ಕೇಸ್‌ ಬಿಟ್ಟು ಕೆಂಪು ವರ್ಣದ ಬಟ್ಟೆಯ ಬ್ಯಾಗ್‌ನಲ್ಲಿ ಬಜೆಟ್‌ ಪ್ರತಿಯನ್ನು ಸಂಸತ್ತಿಗೆ ತಂದು ಮಂಡಿಸಿದ ನಡೆಯನ್ನು ಟೀಕಿಸಿದ್ದ ಪ್ರತಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.
Vijaya Karnataka Web nirmala

ಹಣಕಾಸು ಸಚಿವೆಯಾದ ನಂತರ ಮೊದಲ ಬಾರಿಗೆ ಚೆನ್ನೈಗೆ ಆಗಮಿಸಿದ ನಿರ್ಮಲಾ ಸೀತಾರಾಮನ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

''ಪ್ರತಿಪಕ್ಷದವರು ನಾನು ಬಜೆಟ್‌ ಪ್ರತಿಯನ್ನು ಲೇದರ್‌ ಸೂಟ್‌ಕೇಸ್‌ನಲ್ಲಿ ತರದಿದ್ದಕ್ಕೆ ನಾನಾ ಅರ್ಥಗಳನ್ನು ಕಲ್ಪಿಸಿ ಟೀಕಿಸಿದರು. ಆದರೆ ಟೀಕಾಕಾರಿಗೆ ನಾನು ಹೇಳುವುದಿಷ್ಟೇ, ನಮ್ಮ ಸರಕಾರ 'ಸೂಟ್‌ಕೇಸ್‌ ಸಂಸ್ಕೃತಿ'ಯ ಸರಕಾರವಲ್ಲ. ಆಡಳಿತದ ಪ್ರತಿ ಹೆಜ್ಜೆಗಳೂ ಪಾರದರ್ಶಕವಾಗಿವೆ. ಇದನ್ನು ಬಿಂಬಿಸಲೆಂದೇ ಸೂಟ್‌ಕೇಸ್‌ ಬದಲು ಬ್ಯಾಗ್‌ನಲ್ಲಿ ಬಜೆಟ್‌ ಪ್ರತಿಯನ್ನು ತಂದಿದ್ದೆ,'' ಎಂದು ಹೇಳಿದರು.

ಹಿಂದಿ ಹೇರಿಕೆ ಇಲ್ಲ: ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಯಾವ ರಾಜ್ಯಗಳ ಮೇಲೂ ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ. ಈ ವಿಚಾರದಲ್ಲಿ ಸರಕಾರದ ನಿಲುವು ಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ