ಆ್ಯಪ್ನಗರ

ಆರ್ಥಿಕ ಕುಸಿತ, ಮೋದಿ ಸರಕಾರವನ್ನು ಜಾಡಿಸಿದ ನಿರ್ಮಲಾ ಸೀತಾರಾಮನ್ ಪತಿ!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪ್ರಭಾಕರ್ ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಹಿಂದಿನ ಸರ್ಕಾರದ ಆರ್ಥಿಕ ನೀತಿಯನ್ನು ಅಳವಡಿಸಿ ಎಂದು ತಿಳಿ ಹೇಳಿದ್ದಾರೆ.

Vijaya Karnataka Web 14 Oct 2019, 5:36 pm
ಹೊಸ ದೆಹಲಿ: ದೇಶದ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್ ಅವರ ಪತಿ, ಆರ್ಥಿಕ ತಜ್ಞರೂ ಆಗಿರುವ ಪರಾಕಲ ಪ್ರಭಾಕರ್ ಅವರು ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Vijaya Karnataka Web nirmala and parabhak


ಆರ್ಥಿಕ ಹಿಂಜರಿಕೆ ತಾತ್ಕಾಲಿಕ ಎಂದ ಭಾಗವತ್‌

ಮಾತ್ರವಲ್ಲ ಆರ್ಥಿಕ ಸುಧಾರಣೆಗೆ ಬೇಕಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಇನ್ನಾದರೂ ಪರಿಸ್ಥಿತಿಯನ್ನು ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಕಿಡಿಕಾರಿದ್ದಾರೆ.

ವಿಶ್ವಸಂಸ್ಥೆಯಲ್ಲೂ ಆರ್ಥಿಕ ಮುಗ್ಗಟ್ಟು, ಖರ್ಚಿಗೆ ಹಣ ಇಲ್ಲದ ಸ್ಥಿತಿ!

ಈ ಬಗ್ಗೆ ಪರಾಕಲ ಪ್ರಭಾಕರ್ ಅವರು ದೈನಿಕವೊಂದಕ್ಕೆ ಅಂಕಣವನ್ನು ಬರೆದಿದ್ದು, ಭಾರತದ ಆರ್ಥಿಕ ಸ್ಥತಿ ಗಣನೀಯವಾಗಿ ಕುಸಿತ ಕಂಡಿದೆ. ಸರಕಾರವು ನಿರಾಕರಣೆಯ ನೀತಿಯನ್ನು ಅನುಸರಿಸುತ್ತಿದೆ. ಸರಕಾರ ಇದನ್ನು ಎಷ್ಟೇ ಅಲ್ಲಗಳೆದರೂ ಅಂಕಿ ಅಂಶವನ್ನು ಮುಚ್ಚಿಡಲು ಸಾಧ್ಯವಿಲ್ಲ. ಹಣದ ಕೊರತೆಯಿಂದ ಹಲವಾರು ಕ್ಷೇತ್ರಗಳು ಸಂಕಷ್ಟದಲ್ಲಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ದಶಕದ ಕನಿಷ್ಠ ಮಟ್ಟಕ್ಕೆ ರೆಪೋ ರೇಟ್‌: ಶೇ.5.15ಕ್ಕೆ ನಿಗದಿ ಮಾಡಿದ ಆರ್‌ಬಿಐ

ಇನ್ನೊಂದೆಡೆ ಖಾರವಾಗಿ ಪ್ರತಿಕ್ರಿಯಿಸಿರುವ ಪರಾಕಲ ಪ್ರಭಾಕರ್, ಭಾರತೀಯ ಜನ ಸಂಘ ಇರುವಾಗಿನಿಂದಲೂ ನೆಹರೂ ಅವರ ಸಮಾಜವಾದಿ ಧೋರಣೆಗಳನ್ನು ಧ್ವೇಷಿಸುತ್ತಾ ಬರುತ್ತಿದ್ದೀರಿ. ಇನ್ನಾದರೂ ಅದನ್ನು ಬಿಡಿ. ಬಿಜೆಪಿ ಬಂಡವಾಳಶಾಹಿ ಎಂದೇ ಹೆಸರು ಪಡೆದಿದೆ. ಮುಕ್ತ ಮಾರುಕಟ್ಟೆ ನೀತಿ ಇನ್ನೂ ಪರೀಕ್ಷೆಗೆ ಒಳಪಡಿಸಿಲ್ಲ. ಆರ್ಥಿಕ ನೀತಿಯಲ್ಲಿ ಬಿಜೆಪಿಯ ನೀತಿ ಇದಲ್ಲ ಇದಲ್ಲ ಎಂದೇ ಹೇಳುತ್ತಿದೆ ಹೊರತು ಆರ್ಥಿಕ ಸಿದ್ಧಾಂತ ಮತ್ತು ಅದರ ಅಭಿವ್ಯಕ್ತಿಗೆ ಗಮನ ಕೊಡುತ್ತಿಲ್ಲ. ಟೀಕೆ ಬಿಟ್ಟು ನರಸಿಂಹ ರಾವ್ ಹಾಗೂ ಮನಮೋಹನ್ ಸಿಂಗ್ ಸರ್ಕಾರ ರೂಪಿಸಿದ್ದ ಆರ್ಥಿಕ ಮಾದರಿಯನ್ನು ಅಳವಡಿಸಿ ಎಂದು ಬಿಜೆಪಿ ಆಡಳಿತದ ಕೇಂದ್ರಕ್ಕೆ ತಿಳಿ ಹೇಳಿದ್ದಾರೆ.

ಆರ್ಥಿಕ ಹಿಂಜರಿತಕ್ಕೆ ಸುಪ್ರೀಂ ಕೋರ್ಟ್‌ ಕಾರಣ: ಹಿರಿಯ ವಕೀಲ ಹರೀಶ್‌ ಸಾಳ್ವೆ

ಆರ್ಥಿಕತೆಯ ಪಥ ಬಿಜೆಪಿಯ ಮರುಚುನಾವಣೆಯ ಒಂದು ಭಾಗವಲ್ಲ ಎಂದು ನೆನಪಿರಲಿ ಎಂದಿರುವ ನಿರ್ಮಲಾ ಸೀತಾರಾಮನ್ ಅವರ ಪತಿ, ಮೋದಿ ಸರ್ಕಾರವು ಆರ್ಥಿಕ ಪ್ರದರ್ಶನದ ಬದಲು ಶಕ್ತಿಶಾಲಿ ರಾಜಕೀಯ, ರಾಷ್ಟ್ರೀಯವಾದ, ಭದ್ರತಾ ವೇದಿಕೆಗಳನ್ನು ಬಳಸಿಕೊಂಡಿದೆ. ಸರ್ದಾರ್ ಪಟೇಲ್ ಅವರನ್ನು ತನ್ನ ಆರ್ಥಿಕ ಮುಂಚೂಣಿಯ ವ್ಯಕ್ತಿಯನ್ನಾಗಿ ಬಳಸಿಕೊಂಡಂತೆ ಆರ್ಥಿಕತೆಯ ಬೆಳವಣಿಗೆಗೆ ನರಸಿಂಹರಾವ್ , ಮನಮೋಹನ್ ಸಿಂಗ್ ಅವರನ್ನು ಮುಂದಿಟ್ಟುಕೊಳ್ಳಲಿ ಎಂದಿದ್ದಾರೆ.

ನಿರ್ಮಲಾ ಆಯ್ತು, ಈಗ ಗೋಯಲ್ ಸರದಿ: ಗುರುತ್ವಾಕರ್ಷಣೆ ಕಂಡುಹಿಡಿದಿದ್ದು ಐನ್‌ಸ್ಟೈನ್ ಅಂತೆ!

ದೇಶದ ಆರ್ಥಿಕತೆಯ ಉದ್ಧಾರಕ್ಕೆ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಮಾದರಿಯನ್ನು ಅಳವಡಿಸಿಕೊಳ್ಳದಿದ್ದರೆ ಬಿಜೆಪಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಈಗ ತುಂಬಿಕೊಂಡಿರುವ ವ್ಯರ್ಥ ನೀರನ್ನು ಹೊರಹಾಕಲು ಸಾಧ್ಯವಿಲ್ಲ. ಇನ್ನೂ ಕೂಡ ಅವಕಾಶವಿದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಈ ದೇಶಕ್ಕೆ ಒಳಿತು ಎಂದು ಸಲಹೆ ನೀಡಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ