ಆ್ಯಪ್ನಗರ

ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ ಚುನಾವಣಾ ಆಯೋಗ

ಗೋವಾದ ಚುನಾವಣೆ ರ‍್ಯಾಲಿಯಲ್ಲಿ ಲಂಚದ ಕುರಿತು ನೀಡಿದ ಹೇಳಿಕೆಗಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಚುನಾವಣೆ ಆಯೋಗ ಸೂಚಿಸಿದೆ.

ಟೈಮ್ಸ್ ಆಫ್ ಇಂಡಿಯಾ 30 Jan 2017, 7:54 am
ಹೊಸದಿಲ್ಲಿ: ಗೋವಾ ರಾರ‍ಯಲಿಯಲ್ಲಿ ನೀಡಿದ್ದ ವಿವಾದತ್ಮಕ ಹೇಳಿಕೆ ಸಂಬಂಧ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಚುನಾವಣಾ ಆಯೋಗವು ಅಧಿಕಾರಿಗಳಿಗೆ ಸೂಚಿಸಿದೆ.
Vijaya Karnataka Web fir against arvind kejriwal ordered by election commission for poll bribe remarks
ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ ಚುನಾವಣಾ ಆಯೋಗ


ಚುನಾವಣಾ ಪ್ರಚಾರ ಸಭೆಯಲ್ಲಿ ಭ್ರಷ್ಟಾಚಾರವನ್ನು ಬೆಂಬಲಿಸಿರುವ ಕೇಜ್ರಿವಾಲ್‌ ವಿರುದ್ಧ ಜನಪ್ರತಿನಿಧಿಗಳ ಕಾಯಿದೆಯಡಿ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವು ಗೋವಾದಲ್ಲಿರುವ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಸಂಬಂಧ ಜ.31ರೊಳಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.

ಜನವರಿ 8ರಂದು ಗೋವಾದ ರಾರ‍ಯಲಿಯಲ್ಲಿ ಕೇಜ್ರಿವಾಲ್‌, 'ಕಾಂಗ್ರೆಸ್‌, ಬಿಜೆಪಿ ನಿಮಗೆ ಹಣ ನೀಡಿದರೆ, ಅದನ್ನು ಸ್ವಂತದ್ದೆಂಬಂತೆ ಸ್ವೀಕರಿಸಿ. ಆದರೆ ಮತಗಟ್ಟೆಗೆ ಬಂದಾಗ ತಪ್ಪದೇ ಆಪ್‌ ಚಿಹ್ನೆ ಇರುವ ಪೊರಕೆಯ ಬಟನ್‌ ಒತ್ತಿ,' ಎಂದು ವಿವಾದಿತ ಹೇಳಿಕೆ ನೀಡಿದ್ದರು. ಕೇಜ್ರಿವಾಲ್‌ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ