ಆ್ಯಪ್ನಗರ

ಕರೆಂಟ್ ಶಾಕ್‌: ಅರೆಜೀವವಾಗಿ ಕಂಬದ ಮೇಲಿಂದ ಬಿದ್ದ ಕಾರ್ಮಿಕ

ಇಲ್ಲಿನ ರಾಮಂತಾಪೂರದಲ್ಲಿ ಘೋರ ಅಗ್ನಿ ದುರಂತ ಸಂಭವಿಸಿದೆ. ದುರಸ್ತಿ ಕೆಲಸಕ್ಕಾಗಿ ವಿದ್ಯುತ್ ಕಂಬ ಹತ್ತಿದ ಕಾರ್ಮಿಕನೊಬ್ಬನಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಾವುಬದುಕಿನ ನಡುವೆ ಹೋರಾಡುತ್ತಿದ್ದಾಗ ಸ್ಥಳೀಯರು ಹರಸಾಹಸಪಟ್ಟು ಆತನನ್ನು ಹೇಗೋ ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Samayam Telugu 3 Sep 2018, 7:40 pm
[This story originally published in Samayam Telugu on Aug 27, 2018]
Vijaya Karnataka Web electric-shock


ಹೈದರಾಬಾದ್: ಇಲ್ಲಿನ ರಾಮಂತಾಪೂರದಲ್ಲಿ ಘೋರ ಅಗ್ನಿ ದುರಂತ ಸಂಭವಿಸಿದೆ. ದುರಸ್ತಿ ಕೆಲಸಕ್ಕಾಗಿ ವಿದ್ಯುತ್ ಕಂಬ ಹತ್ತಿದ ಕಾರ್ಮಿಕನೊಬ್ಬನಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಾವುಬದುಕಿನ ನಡುವೆ ಹೋರಾಡುತ್ತಿದ್ದಾಗ ಸ್ಥಳೀಯರು ಹರಸಾಹಸಪಟ್ಟು ಆತನನ್ನು ಹೇಗೋ ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶೇ.50ರಷ್ಟು ಸುಟ್ಟ ಗಾಯಗಳಿಂದ ಸಾವುಬದುಕಿನ ನಡುವೆ ಹೋರಾಡುತ್ತಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, "ರಾಮಾಂತಪೂರದಲ್ಲಿನ ಶ್ರೀನಿವಾಸಪುರಂನ ರಿಲಯನ್ಸ್ ಕೇ ಬಲ್‌ನ ಓರ್ವ ಉದ್ಯೋಗಿ ವೈಯರ್‌ಗಳನ್ನು ಸರಿಪಡಿಸುವ ವೇಳೆ ವಿದ್ಯುತ್ ತಂತಿಗಳು ತಗುಲಿ ಶಾಕ್‌ಗೆ ಒಳಗಾಗಿ ಬೆಂಕಿ ಹೊತ್ತಿಕೊಂಡಿತು." ಎಂದು ತಿಳಿಸಿದ್ದಾರೆ.

ಬಳಿಕ ಸ್ಥಳೀಯರು ಉದ್ದವಾದ ಕೋಲುಗಳ ಸಹಾಯದಿಂದ ವಿದ್ಯುತ್ ತಂತಿಗಳ ಸಂಪರ್ಕ ತಪ್ಪಿಸಿ ಕೆಳಗೆ ಬೀಳುವಂತೆ ಮಾಡಿದರು. ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ಸರಬರಾಜು ನಿಲ್ಲಿಸುವಂತೆ ಮಾಡಿದ್ದಾರೆ. ಹಾಗಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತನ ಪರಿಸ್ಥಿತಿ ಶೋಚನೀಯವಾಗಿದೆ.

ಕಂಬದ ಮೇಲೆ ವಿದ್ಯುತ್ ಶಾಕ್‌ಗೆ ಒಳಗಾಗಿ ಒದ್ದಾಡುತ್ತಿರುವ ದೃಶ್ಯಗಳನ್ನು ಕೆಲವು ಮಂದಿ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಆ ಭಯಾನಕ ದೃಶ್ಯಗಳನ್ನು ಇಲ್ಲಿನ ವೀಡಿಯೋದಲ್ಲಿ ನೋಡಬಹುದು. ಈತ ವಿದ್ಯುತ್ ಇಲಾಖೆಯ ಕಾರ್ಮಿಕ ಅಲ್ಲ ಎಂದು ಗೊತ್ತಾಗಿದ್ದು, ಬ್ರಾಡ್‍ಬ್ಯಾಂಡ್‌ಗೆ ಸಂಬಂಧಿಸಿದ ವೈಯರ್‌ಗಳನ್ನು ತೆಗೆಯಲು ಕಂಬ ಹತ್ತಿದ್ದ. ಸಾವುಬದುಕಿನ ನಡುವೆ ಹೋರಾಡುತ್ತಿರುವ ಆತನಿಗೆ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ