ಹೊಸದಿಲ್ಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಪ್ರತೀಕಾರ ಮಾಡಿಯೇ ಸಿದ್ಧ ಎಂಬುದನ್ನು ಪುನರುಚ್ಛಿಸಿರುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಮ್ಮ ಎದೆಯಲ್ಲೂ ಬೆಂಕಿ ಜ್ವಾಲೆ ಉರಿಯುತ್ತಿರುವುದಾಗಿ ಹೇಳಿದ್ದಾರೆ. ಬಿಹಾರದಲ್ಲಿ ಹಲವಾರು ಕೇಂದ್ರ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ನೆನಪಿಸಿಕೊಂಡ ಮೋದಿ, ಉಗ್ರರಿಗೆ ತಕ್ಕ ಪಾಠವನ್ನು ಕಲಿಸಲಿದ್ದೇವೆ ಎಂಬುದನ್ನು ಒತ್ತಿ ಹೇಳಿದರು.
"ಇಲ್ಲಿ ಒಗ್ಗೂಡಿದ ಜನರಲ್ಲಿ ಹೇಳಬಯಸುವುದೇನೆಂದರೆ ನಿಮ್ಮ ಎದೆಯಲ್ಲಿ ಉರಿಯುತ್ತಿರುವ ಬೆಂಕಿಯು ನನ್ನ ಹೃದಯದಲ್ಲೂ ಉರಿಯುತ್ತಿದೆ" ಎಂದು ನುಡಿದರು.
ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್ಪಿಎಫ್ ಜವಾನರು ಹುತಾತ್ಮರಾಗಿದ್ದರು. ಬಳಿಕ ಪಾಕ್ ಪ್ರಚೋದಿತ ಉಗ್ರ ಸಂಘಟನೆ ಜೈಷೆ ಮೊಹಮ್ಮದ್ ಹೊಣೆ ಹೊತ್ತುಕೊಂಡಿತ್ತು.
ಉಗ್ರರ ದಾಳಿ ಬೆನ್ನಲ್ಲೇ ದೇಶದ್ಯಾಂತ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ನಡುವೆ ಜವಾನರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು.
"ಇಲ್ಲಿ ಒಗ್ಗೂಡಿದ ಜನರಲ್ಲಿ ಹೇಳಬಯಸುವುದೇನೆಂದರೆ ನಿಮ್ಮ ಎದೆಯಲ್ಲಿ ಉರಿಯುತ್ತಿರುವ ಬೆಂಕಿಯು ನನ್ನ ಹೃದಯದಲ್ಲೂ ಉರಿಯುತ್ತಿದೆ" ಎಂದು ನುಡಿದರು.
ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್ಪಿಎಫ್ ಜವಾನರು ಹುತಾತ್ಮರಾಗಿದ್ದರು. ಬಳಿಕ ಪಾಕ್ ಪ್ರಚೋದಿತ ಉಗ್ರ ಸಂಘಟನೆ ಜೈಷೆ ಮೊಹಮ್ಮದ್ ಹೊಣೆ ಹೊತ್ತುಕೊಂಡಿತ್ತು.
ಉಗ್ರರ ದಾಳಿ ಬೆನ್ನಲ್ಲೇ ದೇಶದ್ಯಾಂತ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ನಡುವೆ ಜವಾನರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು.