ಆ್ಯಪ್ನಗರ

ಇರಾನ್‌-ಅಮೆರಿಕ ಸಮರದ ಛಾಯೆ

ಅಮೆರಿಕವು ಇರಾನ್‌ ಮೇಲೆ ದಾಳಿ ನಡೆಸುವ ಕಠಿಣ ತೀರ್ಮಾನಕ್ಕೆ ಬಂದಿತ್ತಾದರೂ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿತು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಹೇಳಿಕೊಂಡಿದ್ದರೆ, ಒಂದೊಮ್ಮೆ ದಾಳಿ ನಡೆದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲ ನಿರ್ಮಾಣಗಳು ಸುಟ್ಟು ಬೂದಿಯಾಗಲಿವೆ ಎಂದು ಇರಾನ್‌ ತಿರುಗೇಟು ನೀಡಿದೆ.

PTI 23 Jun 2019, 7:54 am
ತೆಹ್ರಾನ್‌/ವಾಷಿಂಗ್ಟನ್‌: ತೈಲ ಸಂಘರ್ಷ ಮತ್ತು ಸ್ವಪ್ರತಿಷ್ಠೆಯ ಅಬ್ಬರದಲ್ಲಿ ಮುಳುಗಿರುವ ಅಮೆರಿಕ ಮತ್ತು ಇರಾನ್‌ ದೇಶಗಳ ನಡುವೆ ಸಮರ ಸನ್ನದ್ಧ ಸ್ಥಿತಿ ನಿರ್ಮಾಣವಾಗಿದೆ. ಇದರ ಬಿಸಿ ಭಾರತಕ್ಕೂ ತಟ್ಟಿದೆ.
Vijaya Karnataka Web iran america


ಅಮೆರಿಕವು ಇರಾನ್‌ ಮೇಲೆ ದಾಳಿ ನಡೆಸುವ ಕಠಿಣ ತೀರ್ಮಾನಕ್ಕೆ ಬಂದಿತ್ತಾದರೂ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿತು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಹೇಳಿಕೊಂಡಿದ್ದರೆ, ಒಂದೊಮ್ಮೆ ದಾಳಿ ನಡೆದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲ ನಿರ್ಮಾಣಗಳು ಸುಟ್ಟು ಬೂದಿಯಾಗಲಿವೆ ಎಂದು ಇರಾನ್‌ ತಿರುಗೇಟು ನೀಡಿದೆ.

2017ರಲ್ಲಿ ಅಮೆರಿಕವು ತನ್ನ ಹೊಸ ವಲಸೆ ನೀತಿಯಲ್ಲಿ ಇರಾನ್‌ನ ವೀಸಾದಾರರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಎರಡು ದೇಶಗಳ ನಡುವೆ ಹೊಸ ಸಂಘರ್ಷ ಜೋರಾಗಿದ್ದು, ಕಳೆದ ಎರಡು ವರ್ಷಗಳಿಂದ ನಾನಾ ಕಾರಣಗಳಿಗಾಗಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಳೆದ ಮೇನಲ್ಲಿ ಫ್ಯುಜೈರಾ ಬಂದರಿನಲ್ಲಿ ನಿಲ್ಲಿಸಿದ ಅಮೆರಿಕದ ತೈಲ ಟ್ಯಾಂಕರ್‌ಗಳನ್ನು ನಾಶ ಮಾಡಿದ್ದು, ಕಳೆದ ಗುರುವಾರವಷ್ಟೇ ಆರ್‌ಕ್ಯು-4 ಗ್ಲೋಬಲ್‌ ಹಾಕ್‌ಸ್ಪೈ ಡ್ರೋನ್‌ಅನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಪಡೆ ಹೊಡೆದುರುಳಿಸಿದ್ದು ಅಮೆರಿಕದ ರೋಷಾಗ್ನಿಗೆ ತುಪ್ಪ ಸುರಿದಂತಾಗಿದೆ.
...................
ಭಾರತಕ್ಕೇನು ಪರಿಣಾಮ?
  • ಅಮೆರಿಕಕ್ಕೆ ಹೋಗುವ ಯಾವುದೇ ವಿಮಾನಗಳು ಇರಾನ್‌ ವಾಯು ಪ್ರದೇಶ, ಒಮನ್‌ ಕೊಲ್ಲಿಯ ಮೇಲೆ ಹಾರಬಾರದು ಎಂದು ಸೂಚನೆ ನೀಡಿರುವುದರಿಂದ ಭಾರತ ಹಲವು ವಿಮಾನಗಳ ಮಾರ್ಗ ಬದಲಿಸಬೇಕಾಗಿದೆ. ಮುಂಬಯಿಯಿಂದ ನ್ಯೂಯಾರ್ಕ್‌ಗೆ ಹೋಗುವ ವಿಮಾನವನ್ನು ಶನಿವಾರ ರದ್ದು ಮಾಡಲಾಯಿತು.
  • ಇರಾನ್‌ನಿಂದ ತೈಲ ಖರೀದಿಸದಂತೆ ಅಮೆರಿಕ ಹೇರಿಸುವ ನಿರ್ಬಂಧವನ್ನು ಸಂಪೂರ್ಣ ಪಾಲಿಸುವಂತೆ ಭಾರತದ ಮೇಲೆ ಒತ್ತಡ ಹೇರುವುದು ನಿಶ್ಚಿತ. ಇದರಿಂದ ತೈಲ ಬೆಲೆ ಹೆಚ್ಚಲಿದೆ.
  • ಇರಾನ್‌-ಅಮೆರಿಕ ಸಂಘರ್ಷ ನಡೆದರೆ ತೈಲ ಸಾಗಾಟದ ಮೇಲೂ ಪರಿಣಾಮ ಬೀರಲಿದೆ.
....................
ಇರಾನ್‌ನ 3 ಜಾಗದಲ್ಲಿ ದಾಳಿಗೆ ಸಿದ್ಧತೆ ನಡೆದಿತ್ತು. 150 ಸಾವು ಸಂಭವಿಸುತ್ತದೆ ಎಂಬ ಕಾರಣಕ್ಕೆ ಕೊನೆಯ 10 ನಿಮಿಷದಲ್ಲಿ ನಿರ್ಧಾರ ಬದಲಿಸಿದೆ.
- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ