ಹೊಸದಿಲ್ಲಿ: ಸಂಸತ್ತು ಅಥವಾ ವಿಧಾನಸಭೆಯಲ್ಲಿ ವೋಟಿಗಾಗಿ ನೋಟು ಪಡೆದ ಜನಪ್ರತಿನಿಧಿಗಳಿಗೆ ತನಿಖೆಯಿಂದ ರಕ್ಷಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯೂ ಸೇರಿದಂತೆ ಐದು ಮಹತ್ವದ ಪ್ರಕರಣಗಳು ಸುಪ್ರೀಂ ಕೋರ್ಟ್ನ ಪಂಚ ಸದಸ್ಯ ಸಂವಿಧಾನ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬರಲಿವೆ. ನ್ಯಾಯಮಂಡಳಿಗಳ ಮರು ರಚನೆ ಮತ್ತು ಭೂ ಸ್ವಾಧೀನ ಕಾಯಿದೆಯ ಸೆಕ್ಷನ್ 24 ಕುರಿತಾದ ಅರ್ಜಿಗಳನ್ನು ಸಿಜೆಐ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಡಿ.ವೈ. ಚಂದ್ರಚೂಡ್, ದೀಪಕ್ ಮಿಶ್ರಾ, ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ ಕುರಿತಾದ ಮಾಹಿತಿಯು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡಿಸಬೇಕೆಂಬ ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಸಲ್ಲಿಸಿರುವ ಅರ್ಜಿ, ಸುಪ್ರೀ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಾಹಿತಿ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತಾರೆಯೇ ಎಂಬ ಗೊಂದಲ ನಿವಾರಣೆ ಕೋರಿ ಸಲ್ಲಿಸಲಾದ ಅರ್ಜಿಗಳೂ ವಿಚಾರಣೆಗೆ ಬರಲಿವೆ.
ವೋಟಿಗಾಗಿ ನೋಟು ಸೇರಿ ಪಂಚ ಪ್ರಕರಣಗಳ ವಿಚಾರಣೆ ಇಂದು
ನ್ಯಾಯಮಂಡಳಿಗಳ ಮರು ರಚನೆ ಮತ್ತು ಭೂ ಸ್ವಾಧೀನ ಕಾಯಿದೆಯ ಸೆಕ್ಷನ್ 24 ಕುರಿತಾದ ಅರ್ಜಿಗಳನ್ನು ಸಿಜೆಐ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಡಿ.ವೈ. ಚಂದ್ರಚೂಡ್, ದೀಪಕ್ ಮಿಶ್ರಾ, ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ.
Vijaya Karnataka 27 Mar 2019, 5:00 am