ಎನ್ಕೌಂಟರ್ಗೆ ಐವರು ಪಿಎಲ್ಎಫ್ಐ ಉಗ್ರರು ಹತ
ಕುಂತಿ ಜಿಲ್ಲೆಯ ಮುರು ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಮುಂಜಾನೆ 6.30ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು. ಎನ್ಕೌಂಟರ್ನಲ್ಲಿ ಪಿಎಲ್ಎಫ್ಐ ಪ್ರದೇಶಿಕ ಕಮಾಂಡರ್ ಪ್ರಭು ಸಹಯ್ ಬೋದ್ರ ಹಾಗೂ ಇತರ ನಾಲ್ವರು ಉಗ್ರರು ಬಲಿಯಾಗಿದ್ದಾರೆ.
Vijaya Karnataka 30 Jan 2019, 5:00 am
ರಾಂಚಿ: ಜಾರ್ಖಂಡ್ನ ಕುಂತಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ನಡೆಸಿದ ಎನ್ಕೌಂಟರ್ಗೆ ನಿಷೇಧಿತ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ(ಪಿಎಲ್ಎಫ್ಐ) ಸಂಘಟನೆಯ ಐವರು ನಕ್ಸಲೀಯರು ಹತರಾಗಿದ್ದು, ಇಬ್ಬರು ನಕ್ಸಲರು ಗಾಯಗೊಂಡಿದ್ದಾರೆ.
ಪಿಎಲ್ಎಫ್ಐ, ಸಿಪಿಐ(ಮಾವೋವಾದಿ)ನಿಂದ ವಿಭಜನೆಗೊಂಡ ಗುಂಪಾಗಿದೆ.
ಕುಂತಿ ಜಿಲ್ಲೆಯ ಮುರು ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಮುಂಜಾನೆ 6.30ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು. ಎನ್ಕೌಂಟರ್ನಲ್ಲಿ ಪಿಎಲ್ಎಫ್ಐ ಪ್ರದೇಶಿಕ ಕಮಾಂಡರ್ ಪ್ರಭು ಸಹಯ್ ಬೋದ್ರ ಹಾಗೂ ಇತರ ನಾಲ್ವರು ಉಗ್ರರು ಬಲಿಯಾಗಿದ್ದಾರೆ.
ಬೋದ್ರ ವಾಂಟೆಡ್ ಉಗ್ರನಾಗಿದ್ದು, ಈತನ ತಲೆಗೆ ಎರಡು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಗಾಯಗೊಂಡ ಇಬ್ಬರು ಉಗ್ರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಿಂದ ಎರಡು ಎ.ಕೆ.47 ರೈಫಲ್, ಎರಡು 0.315 ರೈಫಲ್, ಒಂದು 9 ಎಂ.ಎಂ. ಬಂದೂಕು, 264 ಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್ನ 209 ಕೋಬ್ರಾ ಪಡೆಯ ಸಿಬ್ಬಂದಿ, ಎಸ್ಎಪಿ ಯೋಧರು, ಕುಂತಿ ಜಿಲ್ಲಾ ಪೊಲೀಸರು ಸೇರಿದಂತೆ 60 ಮಂದಿಯ ಒಂದು ತಂಡ ಭಾಗವಹಿಸಿತ್ತು. ಎನ್ಕೌಂಟರ್ನಲ್ಲಿ ಭದ್ರತಾ ಸಿಬ್ಬಂದಿಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಮಾವೋವಾದಿ ಉಗ್ರರ ಗುಂಪೊಂದು ಲತಹರ್ ಜಿಲ್ಲೆಯ ಕುಮಾಂಡಿ ಪ್ರದೇಶದಲ್ಲಿ ಅಡಗಿ ಕುಳಿತಿರುವ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಮಂಗಳವಾರ ಮತ್ತೊಂದು ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರದಲ್ಲೇ ಪ್ರದೇಶದಿಂದ ಉಗ್ರರನ್ನು ಮೂಲೋತ್ಪಾಟನೆಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಲ್ಎಫ್ಐ, ಸಿಪಿಐ(ಮಾವೋವಾದಿ)ನಿಂದ ವಿಭಜನೆಗೊಂಡ ಗುಂಪಾಗಿದೆ.
ಕುಂತಿ ಜಿಲ್ಲೆಯ ಮುರು ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಮುಂಜಾನೆ 6.30ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು. ಎನ್ಕೌಂಟರ್ನಲ್ಲಿ ಪಿಎಲ್ಎಫ್ಐ ಪ್ರದೇಶಿಕ ಕಮಾಂಡರ್ ಪ್ರಭು ಸಹಯ್ ಬೋದ್ರ ಹಾಗೂ ಇತರ ನಾಲ್ವರು ಉಗ್ರರು ಬಲಿಯಾಗಿದ್ದಾರೆ.
ಬೋದ್ರ ವಾಂಟೆಡ್ ಉಗ್ರನಾಗಿದ್ದು, ಈತನ ತಲೆಗೆ ಎರಡು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಗಾಯಗೊಂಡ ಇಬ್ಬರು ಉಗ್ರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಿಂದ ಎರಡು ಎ.ಕೆ.47 ರೈಫಲ್, ಎರಡು 0.315 ರೈಫಲ್, ಒಂದು 9 ಎಂ.ಎಂ. ಬಂದೂಕು, 264 ಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್ನ 209 ಕೋಬ್ರಾ ಪಡೆಯ ಸಿಬ್ಬಂದಿ, ಎಸ್ಎಪಿ ಯೋಧರು, ಕುಂತಿ ಜಿಲ್ಲಾ ಪೊಲೀಸರು ಸೇರಿದಂತೆ 60 ಮಂದಿಯ ಒಂದು ತಂಡ ಭಾಗವಹಿಸಿತ್ತು. ಎನ್ಕೌಂಟರ್ನಲ್ಲಿ ಭದ್ರತಾ ಸಿಬ್ಬಂದಿಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಮಾವೋವಾದಿ ಉಗ್ರರ ಗುಂಪೊಂದು ಲತಹರ್ ಜಿಲ್ಲೆಯ ಕುಮಾಂಡಿ ಪ್ರದೇಶದಲ್ಲಿ ಅಡಗಿ ಕುಳಿತಿರುವ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಮಂಗಳವಾರ ಮತ್ತೊಂದು ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರದಲ್ಲೇ ಪ್ರದೇಶದಿಂದ ಉಗ್ರರನ್ನು ಮೂಲೋತ್ಪಾಟನೆಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.