ಆ್ಯಪ್ನಗರ

ಶೋಪಿಯಾನ್‌ ಎನ್‌ಕೌಂಟರ್‌: ಪ್ರೊಫೆಸರ್‌ ಸೇರಿ ಐವರು ಉಗ್ರರ ಬಲಿ

ಶೋಪಿಯಾನ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಕಾಶ್ಮೀರ ಯೂನಿವರ್ಸಿಟಿಯ ಓರ್ವ ಪ್ರೊಫೆಸರ್ ಸಹಿತ ಐವರು ಉಗ್ರರು ಬಲಿಯಾಗಿದ್ದಾರೆ.

Vijaya Karnataka Web 6 May 2018, 5:19 pm
ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕಾಶ್ಮೀರ ಯೂನಿವರ್ಸಿಟಿಯ ಓರ್ವ ಪ್ರೊಫೆಸರ್ ಸಹಿತ ಐವರು ಉಗ್ರರು ಬಲಿಯಾಗಿದ್ದಾರೆ.
Vijaya Karnataka Web rafi prof terrorist


ಮೃತ ಪ್ರೊಫೆಸರ್‌ನನ್ನು ಮೊಹಮ್ಮದ್ ರಫಿ ಭಟ್ ಎಂದು ಗುರುತಿಸಲಾಗಿದ್ದು, ಕಳೆದ ಶುಕ್ರವಾರದಿಂದ ಆತ ನಾಪತ್ತೆಯಾಗಿದ್ದ.

ಶೋಪಿಯಾನ್‌ನ ಬದ್ಗಾಮ್‌ ಮತ್ತು ಝೈನ್‌ಪೋರ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆಸಲಾಗಿದ್ದು, ಐವರು ಉಗ್ರರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ಎಸ್‌. ಪಿ. ವೇದ್‌ ತಿಳಿಸಿದ್ದಾರೆ. ಪ್ರಮುಖ ಉಗ್ರಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್‌ ಸದ್ದಾಂ ಪದ್ದಾರ್ ಕೂಡ ಬಲಿಯಾಗಿದ್ದಾನೆ ಎನ್ನಲಾಗಿದ್ದು, ಆದರೆ ಪೊಲೀಸರು ಅದನ್ನು ದೃಢಪಡಿಸಿಲ್ಲ.

ಉಗ್ರರ ಎನ್‌ಕೌಂಟರ್ ನಡೆದ ಕೂಡಲೇ ಶೊಪಿಯಾನ್, ಪುಲ್ವಾಮ ಮತ್ತಿತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮಧ್ಯೆ ಕಲಹ ಏರ್ಪಟ್ಟಿದೆ.

ಉಗ್ರರೊಂದಿಗೆ ಸೇರಿದ್ದ ಪ್ರೊಫೆಸರ್:

ಶುಕ್ರವಾರ ನಾಪತ್ತೆಯಾಗಿದ್ದ ಪ್ರೊಫೆಸರ್ ರಫಿ ಕಾಶ್ಮೀರ ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದರು. ನಾಪತ್ತೆ ಬಗ್ಗೆ ಶನಿವಾರ ವಿವಿ ಆಡಳಿತ ಮಂಡಳಿಗೆ ಆತನ ಕುಟುಂಬ ಮಾಹಿತಿ ನೀಡಿತ್ತು. ಶುಕ್ರವಾರ ರಫಿ ಕೊನೆಯ ಬಾರಿಗೆ ಫೋನ್ ಮಾಡಿ ತಾಯಿಯೊಂದಿಗೆ ಮಾತನಾಡಿದ್ದರು. ಆದರೆ ಉಗ್ರರೊಂದಿಗೆ ಹೋಗುತ್ತಿರುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ರಫಿ ನಾಪತ್ತೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ನಡೆಸಿದ್ದರು.

ಶರಣಾಗಲು ನಿರಾಕರಿಸಿದ್ದ ರಫಿ

ಉಗ್ರರೊಂದಿಗೆ ಪತ್ತೆಯಾದ ರಫಿಗೆ ಶರಣಾಗುವಂತೆ ಭದ್ರತಾ ಪಡೆಗಳು ಸೂಚಿಸಿದರೂ, ಯಾವುದೇ ಪ್ರಯತ್ನ ಕೈಗೂಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್ ಸಂದರ್ಭದಲ್ಲಿ ಭದ್ರತಾ ಪಡೆಯ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಶನಿವಾರ ಶ್ರೀನಗರದ ಛಟ್ಟಬಾಲ್ ಪ್ರದೇಶದಲ್ಲಿ ನಡೆದಿದ್ದ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ