ಆ್ಯಪ್ನಗರ

ಇರಾನ್‌ ಜಲ-ವಾಯು ಪ್ರದೇಶದ ಮೇಲೆ ಹಾರಾಟ ಬೇಡ: ವಿಮಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ

ಪರ್ಷಿಯನ್ ಜಲಸಂಧಿ ಮತ್ತು ಓಮಾನ್ ಜಲಸಂಧಿ ನಡುವೆ ಸಂಪರ್ಕಿಸುವ ಹೊರ್ಮುಜ್ ಕಾಲುವೆ ಮೇಲಿನ ವಾಯಪ್ರದೇಶ ಇರಾನ್‌ಗೆ ಸೇರಿದ್ದಾಗಿದ್ದು, ಅಲ್ಲಿಂದ 22.2 ಕಿಮೀ (12 ನಾಟಿಕಲ್ ಮೈಲು) ದೂರದ ವರೆಗೂ ಇರಾನ್ ಸ್ವಾಮ್ಯಕ್ಕೆ ಒಳಪಟ್ಟಿದೆ. ಹೀಗಾಗಿ ಈ ಪ್ರದೇಶದಲ್ಲಿ ಹಾರಾಟ ನಡೆಸದಂತೆ ವಿಮಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ನಾಗರಿಕ ವಿಮಾನ ಯಾನ ನಿರ್ದೇಶನಾಲಯ (ಡಿಜಿಸಿಎ) ಈ ನಿರ್ದೇಶನ ನೀಡಿದ್ದು, ಇರಾನ್‌ನ ಭೂಮಿಯ ಮೇಲಿನ ಆಗಸ ಪ್ರದೇಶದಲ್ಲಿ ಹಾರಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಿದ್ದರೂ, ಆ ಪ್ರದೇಶದ ಮೇಲೂ ಹಾರಾಟವನ್ನು ತಪ್ಪಿಸಲು ಸಾಧ್ಯವಾದರೆ ಉತ್ತಮ ಎಂದು ಸಲಹೆ ನೀಡಿದೆ.

TNN 23 Jun 2019, 8:27 am
ಹೊಸದಿಲ್ಲಿ: ಭಾರತೀಯ ವಿಮಾನಗಳು ಇರಾನ್‌ನ ಸಾಗರದ ಮೇಲಿನ ವಾಯುಪ್ರದೇಶದ ಮೇಲೆ ಹಾರಾಟ ನಡೆಸದಂತೆ ಭಾರತ ಸರಕಾರ ಸೂಚನೆ ನೀಡಿದೆ. ಇರಾನ್‌ ಮತ್ತು ಅಮೆರಿಕ ನಡುವೆ ಸಮರದ ಛಾಯೆ ಉದ್ಧವಿಸಿರುವ ಹಿನ್ನೆಲೆಯಲ್ಲಿ ಭಾರತ ಈ ಸುರಕ್ಷತಾ ಸೂಚನೆಯನ್ನು ನೀಡಿದೆ.
Vijaya Karnataka Web Flights


ಪರ್ಷಿಯನ್ ಜಲಸಂಧಿ ಮತ್ತು ಓಮಾನ್ ಜಲಸಂಧಿ ನಡುವೆ ಸಂಪರ್ಕಿಸುವ ಹೊರ್ಮುಜ್ ಕಾಲುವೆ ಮೇಲಿನ ವಾಯಪ್ರದೇಶ ಇರಾನ್‌ಗೆ ಸೇರಿದ್ದಾಗಿದ್ದು, ಅಲ್ಲಿಂದ 22.2 ಕಿಮೀ (12 ನಾಟಿಕಲ್ ಮೈಲು) ದೂರದ ವರೆಗೂ ಇರಾನ್ ಸ್ವಾಮ್ಯಕ್ಕೆ ಒಳಪಟ್ಟಿದೆ. ಹೀಗಾಗಿ ಈ ಪ್ರದೇಶದಲ್ಲಿ ಹಾರಾಟ ನಡೆಸದಂತೆ ವಿಮಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ನಾಗರಿಕ ವಿಮಾನ ಯಾನ ನಿರ್ದೇಶನಾಲಯ (ಡಿಜಿಸಿಎ) ಈ ನಿರ್ದೇಶನ ನೀಡಿದ್ದು, ಇರಾನ್‌ನ ಭೂಮಿಯ ಮೇಲಿನ ಆಗಸ ಪ್ರದೇಶದಲ್ಲಿ ಹಾರಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಿದ್ದರೂ, ಆ ಪ್ರದೇಶದ ಮೇಲೂ ಹಾರಾಟವನ್ನು ತಪ್ಪಿಸಲು ಸಾಧ್ಯವಾದರೆ ಉತ್ತಮ ಎಂದು ಸಲಹೆ ನೀಡಿದೆ.

ಟೈಮ್ಸ್ ಆಫ್ ಇಂಡಿಯಾ ಇನ್ಫೋಗ್ರಾಫಿಕ್ಸ್


ಇದರಿಂದಾಗಿ ಪಶ್ಚಿಮ ದೇಶಗಳಿಂದ (ಸೌದಿ ಅರೇಬಿಯಾ, ಯುರೋಪ್ ಮತ್ತು ಅಮೆರಿಕ ಸೇರಿದಂತೆ) ಹಿಂದಿರುಗುವ ಏರ್‌ ಇಂಡಿಯಾದ ವಿಮಾನಗಳು ಮತ್ತು ಇಂಡಿಗೋ ಸಂಸ್ಥೆಯ ದೋಹಾ-ಇಸ್ತಾಂಬುಲ್-ದೋಹಾ ವಿಮಾನಗಳ ಹಾರಾಟವನ್ನು ಸೀಮಿತಗೊಳಿಸಲಾಗಿದೆ. ಪಶ್ಚಿಮದ ದೇಶಗಳ ಕಡೆ ಹೊರಟಿರುವ ಏರಿಂಡಿಯಾ ವಿಮಾನಗಳ ಹಾರಾಟದ ಮೇಲೆ ಯಾವುದೇ ಪರಿಣಾಮವಿಲ್ಲ.

ಇರಾನ್‌-ಅಮೆರಿಕ ಸಮರದ ಛಾಯೆ

'ಹಿಂದಿರುಗುವ ಹಾದಿಯಲ್ಲಿ ಈ ವಿಮಾನಗಳು ಮಸ್ಕತ್‌ ಮೂಲಕವಾಗಿ ಮಾರ್ಗವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಇದರಿಂದ 20-25 ನಿಮಿಷಗಳಷ್ಟು ಹೆಚ್ಚುವರಿ ಕಾಲ ಹಾರಾಡಬೇಕಾಗುತ್ತದೆ. ಅದೇ ರೀತಿ ದೋಹಾ-ಇಸ್ತಾಂಬುಲ್-ದೋಹಾ ವಲಯದ ಇಂಡಿಗೋ ವಿಮಾನದ ಹಾರಾಟಕ್ಕೂ ತೊಂದರೆಯಾಗಿದೆ' ಎಂದು ಮೂಲವೊಂದು ತಿಳಿಸಿದೆ.


ಈ ಮಾರ್ಗ ಬದಲಾವಣೆಯಿಂದ ವಿಮಾನದ ಪ್ರಯಾಣದ ದರ ಸಾಮಾನ್ಯಕ್ಕಿಂತ 500 ರೂ.ಗಳ ವರೆಗೆ ಹೆಚ್ಚಬಹುದು. ಪಾಕಿಸ್ತಾನದ ವಾಯುಪ್ರದೇಶವೂ ಫೆಬ್ರವರಿ 27ರಿಂದ ಮುಚ್ಚಿರುವ ಕಾರಣ ಪಶ್ಚಿಮ ಮತ್ತು ದಕ್ಷಿಣ ಏಷ್ಯಾ ನಡುವೆ ದಿಲ್ಲಿ ಮೂಲಕವಾಗಿ ಹಾಋಉವ ವಿಮಾನಗಳು ಸುರಕ್ಷತೆಗಾಗಿ ಮಾರ್ಗ ಬದಲಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

'ನಾವು ಶನಿವಾರ ಬೆಳಗ್ಗೆಯೇ ವಿಮಾನ ಸಂಸ್ಥೆಗಳಿಗೆ ಮಾರ್ಗ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದೇವೆ. ಅದರಂತೆ ಮಾರ್ಗ ಬದಲಾವಣೆಯ ನಕ್ಷೆಗಳನ್ನು ರೂಪಿಸಿ ಸಂಬಂಧಿತ ಅಧಿಕಾರಿಗಳ ಜತೆ ಅವರು ಹಂಚಿಕೊಳ್ಳುತ್ತಿದ್ದಾರೆ. ಶನಿವಾರ ಸಂಜೆಯಿಂದ ಭಾರತಕ್ಕೆ ಆಗಮಿಸುವ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಉಂಟಾಗಿದೆ. ಟೆಹರಾನ್ ಮೇಲಿನ ಜಲ-ವಾಯು ಪ್ರದೇಶದ ಮೂಲಕ ಹಾರಾಡದಂತೆ ನಾವು ಸೂಚನೆ ನೀಡಿದ್ದೇವೆ' ಎಂದು ಡಿಜಿಸಿಎ ಅಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ