ಆ್ಯಪ್ನಗರ

ಈಶಾನ್ಯ, ಉತ್ತರ ಭಾರತದಲ್ಲಿ ಮಳೆ ಅಬ್ಬರಕ್ಕೆ 14 ಮಂದಿ ಸಾವು

800 ಗ್ರಾಮಗಳು ಬಹುತೇಕ ಜಲಾವೃತಗೊಂಡಿದ್ದು, ಜನರ ಪಾಡು ಹೇಳತೀರದಾಗಿದೆ. 4.23 ಲಕ್ಷ ಜನರು ಸಂತ್ರಸ್ತರಾಗಿದ್ದಾರೆಂದು ಸರಕಾರ ಹೇಳಿದೆ.

PTI 13 Jul 2019, 5:00 am
ಗುವಾಹಟಿ: ಈಶಾನ್ಯ ಹಾಗೂ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಅಸ್ಸಾಂನ ಲಖೀಂಪುರ, ಚಿರಾಂಗ್‌, ಕೊಕ್ರಝಾರ್‌, ದಿಬ್ರುಗಢ, ಜೋರ್‌ಹಾಟ್‌, ಬಾರ್ಪೆಟಾ ಸೇರಿದಂತೆ ಅನೇಕ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. 800 ಗ್ರಾಮಗಳು ಬಹುತೇಕ ಜಲಾವೃತಗೊಂಡಿದ್ದು, ಜನರ ಪಾಡು ಹೇಳತೀರದಾಗಿದೆ. 4.23 ಲಕ್ಷ ಜನರು ಸಂತ್ರಸ್ತರಾಗಿದ್ದಾರೆಂದು ಸರಕಾರ ಹೇಳಿದೆ. ಇತ್ತ ಉತ್ತರ ಪ್ರದೇಶದ ಲಖನೌ, ಬರೇಲಿ, ಗೋರಖ್‌ಪುರ, ಬಹರೀಚ್‌, ಪ್ರಯಾಗ್‌ರಾಜ್‌ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗುತ್ತಿದ್ದು, ಕಳೆದ 9 ದಿನದಲ್ಲಿ ಮಳೆ ಸಂಬಂಧಿ ಅವಘಡಗಳಿಂದ ಬಲಿಯಾದವರ ಸಂಖ್ಯೆ ಶುಕ್ರವಾರ 14ಕ್ಕೆ ಏರಿದೆ. ನದಿಗಳು ಅಪಾಯದ ಮಟ್ಟ ತಲುಪಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ನೆರೆಯ ನೇಪಾಳದಲ್ಲೂ ವರುಣನ ಆರ್ಭಟ ಮುಂದುವರಿದಿದ್ದು ಸಾವು-ನೋವು ಸಂಭವಿಸಿದೆ.
Vijaya Karnataka Web assam

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ