ಆ್ಯಪ್ನಗರ

ಅಕ್ರಮ ಸಂಬಂಧ ಬಯಲಾಗುವ ಭೀತಿ, ಮಗಳನ್ನು ಕಾಲುವೆಗೆ ದೂಡಿದ ತಂದೆ

ಅತ್ತಿಗೆ ಜತೆಗಿನ ಅಕ್ರಮ ಸಂಬಂಧ ಬಯಲಾದೀತು ಎಂಬ ಭೀತಿಯಲ್ಲಿ ತಂದೆಯೇ ಮಗಳನ್ನು ನರ್ಮದಾ ಕಾಲುವೆಗೆ ದೂಡಿದ್ದ ಘಟನೆ ಗುಜರಾತಿನಲ್ಲಿ ನಡೆದಿದೆ.

ಏಜೆನ್ಸೀಸ್ 8 May 2016, 12:32 pm
ಅಹಮದಾಬಾದ್‌: ಅತ್ತಿಗೆ ಜತೆಗಿನ ಅಕ್ರಮ ಸಂಬಂಧ ಬಯಲಾದೀತು ಎಂಬ ಭೀತಿಯಲ್ಲಿ ತಂದೆಯೇ ಮಗಳನ್ನು ನರ್ಮದಾ ಕಾಲುವೆಗೆ ದೂಡಿದ್ದ ಘಟನೆ ಗುಜರಾತಿನ ಮೆಹಸಾನಾ ಜಿಲ್ಲೆಯ ಕಡಿ ಬಳಿ ನಡೆದಿದೆ.
Vijaya Karnataka Web flung to drown by dad gujarat woman swims 12 km
ಅಕ್ರಮ ಸಂಬಂಧ ಬಯಲಾಗುವ ಭೀತಿ, ಮಗಳನ್ನು ಕಾಲುವೆಗೆ ದೂಡಿದ ತಂದೆ


ಕಾಲುವೆಯಲ್ಲಿ ಸುಮಾರು 12 ಕಿ.ಮೀ. ಈಜಿದ ಯುವತಿ, ಸ್ಥಳೀಯರ ನೆರವಿನಿಂದ ಬದುಕುಳಿದಿದ್ದಾಳೆ.

ಅವರಿಬ್ಬರ ಅಕ್ರಮ ಸಂಬಂಧವನ್ನು ನಾನು ಬಯಲು ಮಾಡಬಹುದು ಎಂಬ ಭೀತಿಯಿಂದ ತಂದೆ ಹಾಗೂ ದೊಡ್ಡಮ್ಮ ನನ್ನನ್ನು ಕಾಲುವೆಗೆ ದೂಡಿದರು ಎಂದು ಯುವತಿ ಕಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಜಾಲ ಬೀಸಿದ್ದಾರೆ.

ಹಂಡ್ವಿ ಗ್ರಾಮದ ಭಾವನಾ ಗೋಸ್ವಾಮಿ (20) ಜಗಳ ಮಾಡಿಕೊಂಡು ಅತ್ತೆ ಮನೆಯಿಂದ ಲಕ್ಷೀಪುರದಲ್ಲಿರುವ ತಂದೆ ಮನುಗಿರಿ ಗೋಸ್ವಾಮಿ ಅವರ ಮನೆಗೆ ಕಳೆದವಾರ ಬಂದಿದ್ದಳು. ಗ್ರಾಮದ ಮೆಲ್ಡಿ ಮಠ ದೇವಸ್ಥಾನದ ಅರ್ಚಕರಾಗಿರುವ ಮನುಗಿರಿ ಮನೆಯಲ್ಲಿ ತಂದೆಯ ಅಣ್ಣನ ಹೆಂಡತಿ ಕಪಿಲಾ ಇರುವುದು ನೋಡಿ ಭಾವನಾಗೆ ಅಚ್ಚರಿಯಾಗಿತ್ತು. ಆದರೂ, ಆಕೆ ಯಾರನ್ನೂ ಈ ವಿಚಾರವಾಗಿ ಪ್ರಶ್ನಿಸಿರಲಿಲ್ಲ.

'ಪಟ್ಟಣಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿದ ತಂದೆ ಮತ್ತು ದೊಡ್ಡಮ್ಮ ಬೈಕ್‌ನಲ್ಲಿ ಕರೆದೊಯ್ದು ಕಾಲುವೆ ಬಳಿ ಇಳಿಸಿದರು. ನಂತರ ನನ್ನನ್ನು ದೂಡಿದರು,'ಎಂದು ಭಾವನಾ ಹೇಳಿದ್ದಾಳೆ.

ಬದುಕಿದ್ದು ಹೇಗೆ ?

ಅಲ್ಪಸ್ವಲ್ಪ ಈಜು ತಿಳಿದಿದ್ದ ಭಾವನಾ, ಸಹಾಯ ಯಾಚಿಸುತ್ತಾ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಈಜಿ ಮುಂದೆ ಸಾಗಿದ್ದಳು. ರಾತ್ರಿ ಹೊಲ ಕಾಯುತ್ತಿದ್ದ ಫತೇಪುರ ಗ್ರಾಮದ ರೈತರಿಗೆ ಭಾವನಾಳ ಕೂಗು ಕೇಳಿಸಿ ಅವರು ಆಕೆಯನ್ನು ರಕ್ಷಿಸಿದ್ದಾರೆ. ಆ ವೇಳೆಗಾಗಲೇ ಭಾವನಾ 12 ಕಿ.ಮೀ. ಈಜಿದ್ದಳು ಎಂದು ನಂತರ ತಿಳದುಬಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಆಕೆ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ