ಆ್ಯಪ್ನಗರ

ಭವಿಷ್ಯದ ಯೋಜನೆಗಳ ಬಗ್ಗೆ ಗಮನ ಹರಿಸಿ: ವಿಜ್ಞಾನಿಗಳಿಗೆ ಕೆ ಶಿವನ್‌ ಕರೆ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 2 ಈಗ ಕೊನೆಯ ಹಂತದಲ್ಲಿ ಸಿಲುಕಿಕೊಂಡಿದೆ. ಅದರಿಂದ ಸಂದೇಶಗಳಿಗಾಗಿ ಕಾಯಲಾಗುತ್ತಿದೆ. ಈ ನಡುವೆ ಹೊಸ ಯೋಜನೆ ಬಗ್ಗೆ ಗಮನ ಹರಿಸಿ ಎಂದು ಶಿವನ್ ಕರೆ ನೀಡಿದ್ದಾರೆ.

Vijaya Karnataka Web 11 Sep 2019, 9:05 pm
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ - ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ 2 ಯೋಜನೆ ಶೇಕಡ 99ರಷ್ಟು ಯಶಸ್ಸು ಕಂಡಿದ್ದು ದೇಶವಾಸಿಗಳಿಗೆ ಖುಷಿ ನೀಡಿದೆ. ಆದರೆ ಇಸ್ರೋ ಅಧ್ಯಕ್ಷ ಕೆ. ಶಿವನ್‌ ಈಗ ಅದನ್ನು ಬಿಟ್ಟು ಮುಂದೆ ಸಾಗಿದ್ದಾರೆ.
Vijaya Karnataka Web ಕೆ ಶಿವನ್
ಕೆ ಶಿವನ್


ಇಸ್ರೋದ ಭವಿಷ್ಯದ ಯೋಜನೆಗಳ ಬಗ್ಗೆ ಗಮನಹರಿಸಿ. ಈಗ ನಮ್ಮ ಮುಂದೆ ಅಗಾಧ ಅನುಭವ ಇದೆ. ಯಾವುದು ಅಸಾಧ್ಯವಲ್ಲ ಎಂಬುದು ಮನವರಿಕೆಯಾಗಿದೆ ಎಂದು ವಿಜ್ಞಾನಿಗಳನ್ನು ಹುರಿದುಂಬಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಚಂದ್ರಯಾನ 2 ಬಗೆಗಿನ ಎಲ್ಲ ಮಾಹಿತಿಯನ್ನು ಕಲೆ ಹಾಕಲು ವಿಜ್ಞಾನಿಗಳಿಗೆ ಸೂಚಿಸಲಾಗಿತ್ತು. ಇಸ್ರೋದ ಆಂತರಿಕ ಲೋಪ ವಿಶ್ಲೇಷಣೆ ಸಮಿತಿ ಎಲ್ಲ ಡೇಟಾಗಳನ್ನು ಪರಿಶೀಲನೆ ನಡೆಸುತ್ತಿದೆ.

ಚಂದ್ರಯಾನ 2 ವಿಕ್ರಮ್‌ ಲ್ಯಾಂಡರ್‌ನಿಂದ ಸಂದೇಶಗಳನ್ನು ಪಡೆಯಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ.

ಈ ಸಂದರ್ಭದಲ್ಲಿಯೇ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಿವನ್‌, ಚಂದ್ರಯಾನ 2 ಯೋಜನೆಯನ್ನು ಆರ್ಬಿಟರ್‌ ವಿಜ್ಞಾನದ ಹಿನ್ನೆಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದೇವೆ. ಲ್ಯಾಂಡಿಂಗ್‌ ವಿಷಯದಲ್ಲಿ ಶೇಕಡ 95ರಷ್ಟು ಯಶಸ್ಸು ಕಂಡಿದ್ದೇವೆ. ಇದು ನಿಜಕ್ಕೂ ದೊಡ್ಡ ಸಾಧನೆಯೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಭವಿಷ್ಯದ ಯೋಜನೆಗಳ ಬಗ್ಗೆ ಹೆಚ್ಚು ನಿಗಾ ವಹಿಸಿ. ವಿಜ್ಞಾನದಲ್ಲಿ ನಿರಂತರ ಪ್ರಯತ್ನಗಳು ಸಾಗುತ್ತಿರುತ್ತವೆ. ಮುಂದೆ ಸಾಗೋಣ. ಭವಿಷ್ಯದ ಯೋಜನೆಗಳನ್ನು ಸಾಕಾರಗೊಳಿಸೋಣ ಎಂದು ವಿಜ್ಞಾನಿಗಳನ್ನು ಕೆ ಶಿವನ್‌ ಪ್ರೋತ್ಸಾಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ