ಆ್ಯಪ್ನಗರ

ಫೊನಿ ಅಪಾಯದ ಬಗ್ಗೆ 65 ಲಕ್ಷ ಎಸ್‌ಎಂಎಸ್‌!

ಈ ಎಸ್‌ಎಂಎಸ್‌ಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಒಡಿಶಾದ ರೈತರಿಗೆ ಕಳಿಸಲಾಯಿತು. ಆ ಭಾಗದಲ್ಲಿ ಫೊನಿ ಆರ್ಭಟ ಭೀಕರವಾಗಿದ್ದರಿಂದ ಅಲ್ಲಿನ ಜನರ ಕಾಳಜಿಗೆ ಈ ಕ್ರಮ ಕೈಗೊಳ್ಳಲಾಯಿತು.

PTI 28 May 2019, 5:00 am
ಹೊಸದಿಲ್ಲಿ: ಒಡಿಶಾ ಕರಾವಳಿ, ಪೂರ್ವ ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯಗಳಿಗೆ ಅಪ್ಪಳಿಸಿದ ಫೊನಿ ಚಂಡಮಾರತದ ಅಪಾಯ ಕುರಿತು ಸಾಕಷ್ಟು ಮುಂಚಿತವಾಗಿಯೇ ಭಾರತೀಯ ಹವಾಮಾನ ಇಲಾಖೆ ಜನರನ್ನು ಎಚ್ಚರಿಸಿತ್ತು. ಚಂಡಮಾರುತದ ಅಪಾಯಕ್ಕೆ ಒಳಗಾಗುವ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಭಾಗಗಳ ಸುಮಾರು 65 ಲಕ್ಷ ರೈತರಿಗೆ ಎಸ್‌ಎಂಎಸ್‌ ಕಳಿಸುವ ಮೂಲಕ ಸುರಕ್ಷತೆಯ ಎಚ್ಚರಿಕೆ ರವಾನಿಸಲಾಗಿತ್ತು ಎಂದು ಹವಾಮಾನ ಇಲಾಖೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
Vijaya Karnataka Web foni


ಈ ಎಸ್‌ಎಂಎಸ್‌ಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಒಡಿಶಾದ ರೈತರಿಗೆ ಕಳಿಸಲಾಯಿತು. ಆ ಭಾಗದಲ್ಲಿ ಫೊನಿ ಆರ್ಭಟ ಭೀಕರವಾಗಿದ್ದರಿಂದ ಅಲ್ಲಿನ ಜನರ ಕಾಳಜಿಗೆ ಈ ಕ್ರಮ ಕೈಗೊಳ್ಳಲಾಯಿತು. ಎಸ್‌ಎಂಎಸ್‌ಗಳನ್ನು ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿಯೇ ಕಳಿಸಲಾಗಿತ್ತು. 'ಜಾನುವಾರು ಮತ್ತು ಕೋಳಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿ. ಕಟಾವು ಕೆಲಸಗಳಿದ್ದರೆ ಮುಂದೂಡಿ. ಕೃಷಿ ಉತ್ಪನ್ನಗಳ ಬಗ್ಗೆ ತಕ್ಷಣವೇ ಜಾಗ್ರತೆ ವಹಿಸಿ' ಎನ್ನುವ ಸಂದೇಶಗಳನ್ನು ಅಂದು ರೈತರಿಗೆ ಕಳಿಸಲಾಯಿತು ಎಂದು ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಗ್ರಾಮ ಕೃಷಿ ಮೌಸಂ ಸೇವಾ ಯೋಜನೆ ಅಡಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಪಡೆದಿದ್ದು, ಇಲ್ಲಿ ದಾಖಲಾದ ಮೊಬೈಲ್‌ ಸಂಖ್ಯೆಗಳು ಮುನ್ಸೂಚನೆ ನೀಡಲು ನೆರವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ