ಆ್ಯಪ್ನಗರ

ನೆಹರೂ, ವಾಜಪೇಯಿ ಮೂರ್ಖತನದಿಂದ ಟಿಬೆಟ್‌, ತೈವಾನ್‌ ಕಳೆದುಕೊಂಡೆವು: ಸುಬ್ರಮಣಿಯನ್ ಸ್ವಾಮಿ

' ಜವಹರಲಾಲ್‌ ನೆಹರೂ ಹಾಗೂ ಆಟಲ್‌ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ಟಿಬೆಟ್‌ ಹಾಗೂ ತೈವಾನ್‌ ಚೀನಾದ ಭಾಗವೆಂದು ನಾವು ಭಾರತೀಯರು ಒಪ್ಪಿಕೊಂಡೆವು. ಆದರೆ ಚೀನಾ ಪರಸ್ಪರ ಒಪ್ಪಿಕೊಂಡ ವಾಸ್ತವ ಗಡಿ ನಿಯಂತ್ರಣ ರೇಖೆ (LAC)ಯನ್ನೇ ಗೌರವಿಸಿಲ್ಲ. ಅವರು ಲಡಾಖ್‌ನ ಭಾಗಗಳನ್ನು ಆಕ್ರಮಿಸಿಕೊಂಡರು. ಆದರೆ ಯಾರೂ ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮೂರ್ಖತನ ಪ್ರದರ್ಶಿಸುತ್ರಿದ್ದಾರೆ. ಚುನಾವಣೆಯಲ್ಲಿ ನಾವು ನಿರ್ಧಾರ ಮಾಡುತ್ತೇವೆ ಎನ್ನುವುದು ಚೀನಾ ಅರ್ಥ ಮಾಡಿಕೊಳ್ಳಬೇಕು' ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

Authored byಸಿನಾನ್\u200c ಇಂದಬೆಟ್ಟು | Indiatimes 4 Aug 2022, 7:19 am
ಹೊಸದಿಲ್ಲಿ: 'ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರೂ ಹಾಗೂ ಆಟಲ್‌ ಬಿಹಾರಿ ವಾಜಪೇಯಿ ಅವರ ಮೂರ್ಖತನದ ನಿರ್ಧಾರಗಳಿಂದಾಗಿಯೇ ಟಿಬೆಟ್ ಹಾಗೂ ತೈವಾನ್‌ ಅನ್ನು ಕಳೆದುಕೊಳ್ಳಬೇಕಾಯ್ತು' ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Vijaya Karnataka Web how-subramanian-swamy-has-always-managed-to-be-in-the-limelight-through-his-maverick-ways


ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಬಗ್ಗೆ ಮೌನವಾಗಿದ್ದಾರೆ ಎಂದು ಸ್ವಾಮಿ ಟೀಕೆ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ಏಕಕಾಲಕ್ಕೆ ಮುಜುಗರ ಉಂಟು ಮಾಡಿದ್ದಾರೆ.

ಮಕ್ಕಳ ಬುದ್ಧಿ ಚುರುಕುಗೊಳಿಸುವ ಸಂಸ್ಕೃತ ಭಾಷೆಯನ್ನು ಎಲ್ಲರೂ ಕಲಿಯಬೇಕು: ಡಾ ಸುಬ್ರಮಣಿಯನ್ ಸ್ವಾಮಿ
ಟಿಬೆಟ್‌ ಹಾಗೂ ತೈವಾನ್‌ ಚೀನಾ ಭಾಗವೆಂದು ಭಾರತೀಯರು ನಂಬಲು ನೆಹರೂ ಹಾಗೂ ವಾಜಪೇಯಿ ಅವರು ಮಾಡಿದ ಮೂರ್ಖತದ ನಿರ್ಧಾರಗಳೇ ಕಾರಣ ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಭಾರತ ಈ ಉದಾರ ನಿರ್ಧಾರ ತೆಗೆದುಕೊಂಡಾಗ್ಯೂ ಕೂಡ, ಚೀನಾ ಭಾರತದ ನಿರ್ಧಾರವನ್ನು ಗೌರವಿಸಿಲ್ಲ. ಬದಲಾಗಿ ಲಡಾಖ್‌ನ ಕೆಲ ಭಾಗವನ್ನೇ ಕಸಿದುಕೊಂಡಿತು. ಆದರೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ 'ಯಾರೂ ಬಂದಿಲ್ಲ' ಎಂದು ಮೂರ್ಖತನದ ಹೇಳಿಕೆಯನ್ನೇ ನೀಡುತ್ತಿದ್ದಾರೆ ಎಂದು ಸ್ವಾಮಿ ಕಿಡಿಕಾರಿದ್ದಾರೆ.

Akshay Kumar: 'ರಾಮ್ ಸೇತು'; ಅಕ್ಷಯ್ ಕುಮಾರ್ ವಿರುದ್ಧ ಮೊಕದ್ದಮೆ ಹೂಡಲಿರುವ ಬಿಜೆಪಿ ಸುಬ್ರಹ್ಮಣಿಯನ್ ಸ್ವಾಮಿ
' ಜವಹರಲಾಲ್‌ ನೆಹರೂ ಹಾಗೂ ಆಟಲ್‌ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ಟಿಬೆಟ್‌ ಹಾಗೂ ತೈವಾನ್‌ ಚೀನಾದ ಭಾಗವೆಂದು ನಾವು ಭಾರತೀಯರು ಒಪ್ಪಿಕೊಂಡೆವು. ಆದರೆ ಚೀನಾ ಪರಸ್ಪರ ಒಪ್ಪಿಕೊಂಡ ವಾಸ್ತವ ಗಡಿ ನಿಯಂತ್ರಣ ರೇಖೆ (LAC)ಯನ್ನೇ ಗೌರವಿಸಿಲ್ಲ. ಅವರು ಲಡಾಖ್‌ನ ಭಾಗಗಳನ್ನು ಆಕ್ರಮಿಸಿಕೊಂಡರು. ಆದರೆ ಯಾರೂ ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮೂರ್ಖತನ ಪ್ರದರ್ಶಿಸುತ್ರಿದ್ದಾರೆ. ಚುನಾವಣೆಯಲ್ಲಿ ನಾವು ನಿರ್ಧಾರ ಮಾಡುತ್ತೇವೆ ಎನ್ನುವುದು ಚೀನಾ ಅರ್ಥ ಮಾಡಿಕೊಳ್ಳಬೇಕು' ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ