ಆ್ಯಪ್ನಗರ

5 ದಿನಗಳ ಕಾಲ ಆರು ಕಾಂಗ್ರೆಸ್‌ ಸಂಸದರ ಅಮಾನತು

ಲೋಕಸಭೆಯಲ್ಲಿ ಸ್ಪೀಕರ್ ಮೇಲೆ ಕಾಗದ ಪತ್ರಗಳನ್ನು ತೂರಿದ ಆರೋಪದಲ್ಲಿ ಕಾಂಗ್ರೆಸ್‌ನ ಆರು ಮಂದಿ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಐದು ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 24 Jul 2017, 8:00 pm
ಹೊಸದಿಲ್ಲಿ: ಲೋಕಸಭೆಯಲ್ಲಿ ಸ್ಪೀಕರ್ ಮೇಲೆ ಕಾಗದ ಪತ್ರಗಳನ್ನು ತೂರಿ ದುರ್ವರ್ತೆನೆ ತೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಆರು ಮಂದಿ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಐದು ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ.
Vijaya Karnataka Web for unbecoming conduct 6 congress mps suspended from lok sabha for 5 days
5 ದಿನಗಳ ಕಾಲ ಆರು ಕಾಂಗ್ರೆಸ್‌ ಸಂಸದರ ಅಮಾನತು


ಕಾಂಗ್ರೆಸ್ ನ ಸದಸ್ಯರಾದ ಗೌರವ ಗೊಗೊಯಿ, ಕೆ.ಸುರೇಶ್, ಅಧೀರ್ ರಾಜನ್ ಚೌಧರಿ, ರಂಜಿತ್ ರಂಜನ್, ಸುಶ್ಮೀತಾ ದೇವಿ ಮತ್ತು ಎಂಕೆ ರಾಘವನ್ ಅಮಾನತುಗೊಂಡವರು.

ಶೂನ್ಯವೇಳೆಯಲ್ಲಿ ಭೋಫರ್ಸ್‌ ಪ್ರಕರಣ ಹಾಗೂ ಗೋರಕ್ಷಣೆ ಹೆಸರಲ್ಲಿ ದೇಶಾದ್ಯಂತ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ಶೇಮ್ ಶೇಮ್ ಎಂದು ಘೋಷಣೆಗಳನ್ನು ಕೂಗುತ್ತ, ಸ್ಪೀಕರ್ ಅವರ ಕುರ್ಚಿ ಬಳಿ ಮುಖ್ಯವಾದ ಕಾಗದ ಪತ್ರಗಳನ್ನು ತೂರಿದರು.

ಇವರನ್ನು ಸಮಾಧಾನಗೊಳಿಸಲು ಸ್ಪೀಕರ್‌ ಪ್ರಯತ್ನಪಟ್ಟರಾದರೂ ಗದ್ಧಲ ಜಾಸ್ತಿಯಾಗುತ್ತಲೇ ಹೋಗಿತ್ತು. ಹೀಗಾಗಿ ಲೋಕಸಭೆಯಲ್ಲಿ ಆರು ಸಂಸದರ ದುರ್ವತನೆಯನ್ನು ಕ್ಷಮಿಸಲಾ ಸಾಧ್ಯವಿಲ್ಲ ಎಂದು ಹೇಳಿ, ಐದು ದಿನಗಳ ಕಾಲ ಅಮಾನತುಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ