ಆ್ಯಪ್ನಗರ

ಮುಂಬಯಿ ದಾಳಿ ಬಳಿಕವೂ ಪ್ರತಿಕಾರಕ್ಕೆ ಸಜ್ಜಾಗಿದ್ದ ಸೇನೆ

ಪಾಕಿಸ್ತಾನದ ಬಾಲಾಕೋಟ್‌ ಮೇಲಿನ ವಾಯು ಪಡೆಯ ಪ್ರತಿಕಾರ ದಾಳಿ ಬಗೆಗಿನ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೊಡಾ ಅವರ ಲಘು ಹೇಳಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಪಾಕಿಸ್ತಾನದ ಬಗ್ಗೆ ಅನಗತ್ಯ ಮೃದು ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್‌ ಅಂದು ಉಗ್ರರನ್ನು ದಂಡಿಸದೇ ಬಿಟ್ಟಿತು ಎಂದು ಹೇಳಿದ್ದಾರೆ.

Vijaya Karnataka 25 Mar 2019, 5:00 am
ಹೊಸದಿಲ್ಲಿ: ಮುಂಬಯಿ ಮೇಲಿನ ಉಗ್ರ ದಾಳಿ ಬಳಿಕವೂ ಪಾಕಿಸ್ತಾನ ವಿರುದ್ಧ ಪ್ರತಿಕಾರಕ್ಕೆ ನಮ್ಮ ಸೇನಾ ಪಡೆಗಳು ಸಜ್ಜಾಗಿದ್ದರೂ ಅಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಅನುಮತಿ ನೀಡದೇ ಪುಕ್ಕಲುತನ ಪ್ರದರ್ಶಿಸಿತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Vijaya Karnataka Web nirmala


ಪಾಕಿಸ್ತಾನದ ಬಾಲಾಕೋಟ್‌ ಮೇಲಿನ ವಾಯು ಪಡೆಯ ಪ್ರತಿಕಾರ ದಾಳಿ ಬಗೆಗಿನ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೊಡಾ ಅವರ ಲಘು ಹೇಳಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ, ಪಾಕಿಸ್ತಾನದ ಬಗ್ಗೆ ಅನಗತ್ಯ ಮೃದು ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್‌ ಅಂದು ಉಗ್ರರನ್ನು ದಂಡಿಸದೇ ಬಿಟ್ಟಿತು ಎಂದರು.

''2008ರ ನವೆಂಬರ್‌ 26ರಂದು ನಡೆದ ಮುಂಬಯಿ ದಾಳಿ ಬಳಿಕವೂ ಭಾರತ ಬಾಲಾಕೋಟ್‌ ರೀತಿಯ ಪ್ರತಿಕಾರ ದಾಳಿ ನಡೆಸಬಹುದಾಗಿತ್ತು. ಅಂದು ಸಶಸ್ತ್ರ ಪಡೆಗಳು ಸಂಪೂರ್ಣ ಸಜ್ಜಾಗಿದ್ದವು. ಸೇನಾ ಸನ್ನದ್ಧತೆ ಕುರಿತು ಸರಕಾರಕ್ಕೂ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರ ಯಾವುದೇ ಖಚಿತ ಕ್ರಮದ ಕೈಗೊಳ್ಳದ ಕಾರಣ ಉಗ್ರರ ಹಾವಳಿ ಮತ್ತಷ್ಟು ಹೆಚ್ಚಲು ಕಾರಣವಾಯಿತು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ