ಆ್ಯಪ್ನಗರ

ಸಿಂಗ್‌ರಷ್ಟೇ ಮೋದಿ ವಿದೇಶ ಪ್ರವಾಸ: ಕಡಿಮೆ ಖರ್ಚು, ಪ್ರಚಾರ ಹೆಚ್ಚು; ಅದಕ್ಕೇ ಪ್ರತಿಪಕ್ಷಗಳ ಸಿಟ್ಟು

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಇರುವುದಕ್ಕಿಂತ ಹೆಚ್ಚು ವಿದೇಶ ಪ್ರವಾಸಗಳಲ್ಲೇ ಇರುತ್ತಾರೆ ಎನ್ನುವುದು ಪ್ರತಿಪಕ್ಷಗಳ ಆರೋಪ. ವಾಸ್ತವ ಏನೆಂದರೆ ಯುಪಿಎ-2 ಅವಧಿಯಲ್ಲಿ ಡಾ.ಮನಮೋಹನ ಸಿಂಗ್‌ ಎಷ್ಟು ವಿದೇಶ ಪ್ರವಾಸ ಕೈಗೊಂಡಿದ್ದರೋ, ಮೋದಿ ಸಹ ಹೆಚ್ಚೂಕಡಿಮೆ ಅಷ್ಟೇ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪ್ರತಿ ಪ್ರವಾಸದಲ್ಲಿಯೂ ಮಾಧ್ಯಮಗಳಲ್ಲಿ ಮಿಂಚುವುದರಿಂದ ಮೋದಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಲಾಗುತ್ತಿದೆ.

THE ECONOMIC TIMES 29 Jul 2018, 10:45 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಇರುವುದಕ್ಕಿಂತ ಹೆಚ್ಚು ವಿದೇಶ ಪ್ರವಾಸಗಳಲ್ಲೇ ಇರುತ್ತಾರೆ ಎನ್ನುವುದು ಪ್ರತಿಪಕ್ಷಗಳ ಆರೋಪ. ವಾಸ್ತವ ಏನೆಂದರೆ ಯುಪಿಎ-2 ಅವಧಿಯಲ್ಲಿ ಡಾ.ಮನಮೋಹನ ಸಿಂಗ್‌ ಎಷ್ಟು ವಿದೇಶ ಪ್ರವಾಸ ಕೈಗೊಂಡಿದ್ದರೋ, ಮೋದಿ ಸಹ ಹೆಚ್ಚೂಕಡಿಮೆ ಅಷ್ಟೇ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪ್ರತಿ ಪ್ರವಾಸದಲ್ಲಿಯೂ ಮಾಧ್ಯಮಗಳಲ್ಲಿ ಮಿಂಚುವುದರಿಂದ ಮೋದಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಲಾಗುತ್ತಿದೆ.
Vijaya Karnataka Web Modi-Singh


ಯುಪಿಎ-2ನೇ ಅವಧಿಯ ಮೊದಲ 4 ವರ್ಷದಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಕೈಗೊಂಡಿದ್ದ ವಿದೇಶ ಪ್ರವಾಸಕ್ಕೂ ಹಾಗೂ ಮೋದಿ ಅವರ ವಿದೇಶ ಪ್ರವಾಸಕ್ಕೂ ತಗುಲಿರುವ ಖರ್ಚು-ವೆಚ್ಚಗಳ ಕುರಿತು ಎಕನಾಮಿಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಮೊದಲ ನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಮನಮೋಹನ್‌ ಸಿಂಗ್‌ ಅವರಷ್ಟೇ ಮೋದಿ ಹೆಚ್ಚು ವಿದೇಶ ಪ್ರವಾಸ ಕೈಗೊಂಡಿದ್ದರೂ ಖರ್ಚಿನ ವಿಚಾರದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ.

ಫಾರಿನ್‌ ಟೂರ್‌ ಟ್ರಾವೆಲ್‌ ಡೈರಿ (ವಿಕ ಇನ್ಫೋಗ್ರಾಫಿಕ್ಸ್‌)


ಮನಮೋಹನ್‌ ಸಿಂಗ್‌ ಅವರು 2009-2013ರ ಅವಧಿಯಲ್ಲಿ 31 ವಿದೇಶ ಪ್ರವಾಸ ಕೈಗೊಂಡಿದ್ದು, ಅದಕ್ಕೆ 386.35 ಕೋಟಿ ರೂ. ಖರ್ಚಾಗಿದ್ದರೆ, ಮೋದಿ ಅವರು 36 ವಿದೇಶ ಪ್ರವಾಸ ಕೈಗೊಂಡಿದ್ದು, ಅದಕ್ಕೆ 387.26 ಕೋಟಿ ರೂ. ಖರ್ಚಾಗಿದೆ. ಅಂದರೆ ಇಲ್ಲಿ ಮೋದಿ ಅವರ ವಿದೇಶ ಪ್ರವಾಸಕ್ಕೆ ಹೆಚ್ಚುವರಿಯಾಗಿ 91 ಲಕ್ಷ ರೂ. ಖರ್ಚಾಗಿದೆ. ಮೋದಿ ತಮ್ಮ ಪ್ರವಾಸಕ್ಕೆ 31 ಬಾರಿ ಚಾರ್ಟೆಡ್‌ ಏರ್‌ಇಂಡಿಯಾ ವಿಮಾನ ಬಳಸಿದ್ದರೆ, 5 ಸಲ ಭಾರತೀಯ ವಾಯುಪಡೆಯ ಬಿಬಿಜೆ ಏರ್‌ಕ್ರಾಫ್ಟ್‌ ಬಳಸಿಕೊಂಡಿದ್ದು, ಇದಕ್ಕೆ ತಗುಲಿರುವ ವೆಚ್ಚವನ್ನು ಸರಕಾರ ಪ್ರತ್ಯೇಕವಾಗಿ ಭರಿಸಬೇಕಿಲ್ಲ ಎನ್ನುತ್ತವೆ ಮೂಲಗಳು.

ಹೆಚ್ಚಿದ ಜನಪ್ರಿಯತೆ: ಸದೃಢ ಭಾರತ ನಿರ್ಮಾಣದ ಕನಸು ಹೊತ್ತು ಮೋದಿ ಅವರು ಹಿಂದಿನ ಯಾವ ಪ್ರಧಾನಿಗಳೂ ಭೇಟಿ ನೀಡದ ಅಥವಾ ಮನಮೋಹನ್‌ ಸಿಂಗ್‌ ಭೇಟಿ ಕೊಡದ ರಾಷ್ಟ್ರಗಳನ್ನೂ ತಮ್ಮ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದು ವಿಶೇಷ. ಯುಪಿಎ-2ನೇ ಅವಧಿಯಲ್ಲಿ ಸಿಂಗ್‌ ಮೊದಲ ನಾಲ್ಕು ವರ್ಷದಲ್ಲಿ 131 ದಿನಗಳನ್ನು ವಿದೇಶದಲ್ಲಿ ಕಳೆದಿದ್ದರೆ, ಮೋದಿ ಅವರು ನಾಲ್ಕು ವರ್ಷದಲ್ಲಿ 155 ದಿನಗಳನ್ನು ವಿದೇಶದಲ್ಲಿ ಕಳೆದಿದ್ದಾರೆ. ಅಧಿಕೃತ ಅಂತಾರಾಷ್ಟ್ರೀಯ ವೇದಿಕೆಯ ಸಭೆಗಳಲ್ಲಷ್ಟೇ ಪಾಲ್ಗೊಳ್ಳದೇ ಅನಿವಾಸಿ ಭಾರತೀಯರು ಹಾಗೂ ಉದ್ಯಮಿಗಳ ಜತೆ ಸಂವಾದ ನಡೆಸಿ ನವ ಭಾರತದ ಕಾರ್ಯಯೋಜನೆಗಳಿಗೆ ಕೈಜೋಡಿಸುವಂತೆ ಕರೆ ಕೊಟ್ಟಿದ್ದು ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ