ಆ್ಯಪ್ನಗರ

ಗುಂಡಿಕ್ಕಿ ಗುಜರಾತ್ ಬಿಜೆಪಿ ನಾಯಕನ ಹತ್ಯೆ

ಕಟಾರಿಯಾ - ಸುರ್ಬಾರಿ ನಡುವೆ ಸಂಚರಿಸುವ ಸಾಯ್ಜಿ ನಗ್ರಿ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಭಾನುಶಾಲಿ ಅವರ ಮೇಲೆ ಸೋಮವಾರ ಮತ್ತು ಮಂಗಳವಾರದ ನಡುವಿನ ರಾತ್ರಿ 12ರಿಂದ 2 ಗಂಟೆ ಅವಧಿಯೊಳಗೆ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Times Now 8 Jan 2019, 11:14 am
ಕಚ್: ಗುಜರಾತ್ ಬಿಜೆಪಿ ನಾಯಕ, ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಸೋಮವಾರ ರಾತ್ರಿ ರೈಲಿನಲ್ಲಿ ಈ ಘಟನೆ ನಡೆದಿದೆ.
Vijaya Karnataka Web Jayantilal


ಕಟಾರಿಯಾ - ಸುರ್ಬಾರಿ ನಡುವೆ ಸಂಚರಿಸುವ ಸಾಯ್ಜಿ ನಗ್ರಿ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಭಾನುಶಾಲಿ ಅವರ ಮೇಲೆ ಸೋಮವಾರ ಮತ್ತು ಮಂಗಳವಾರದ ನಡುವಿನ ರಾತ್ರಿ 12ರಿಂದ 2 ಗಂಟೆ ಅವಧಿಯೊಳಗೆ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲ ಮೂಲಗಳ ಪ್ರಕಾರ ಅವರ ಮುಖ ಮತ್ತು ಎದೆಯ ಮೇಲೆ ಬಲವಾಗಿ ಹೊಡೆಯಲಾಗಿದೆ. ರೈಲ್ವೆ ಪೊಲೀಸರ ನೆರವಿನೊಂದಿಗೆ ತನಿಖೆ ಮುಂದುವರಿದಿದೆ.

ಕಳೆದ ವರ್ಷ ಭಾನುಶಾಲಿ ಅವರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿತ್ತು. ಕೆಲಸ ಕೊಡಿಸುವ ಆಮಿಷ ಒಡ್ಡಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಅವರ ಮೇಲಿತ್ತು. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ