ಆ್ಯಪ್ನಗರ

ಅಜಿತ್‌ ಜೋಗಿ ಆರೋಗ್ಯ ಸ್ಥಿತಿ ಗಂಭೀರ, ವೈದ್ಯರಿಂದ 'ಆಡಿಯೋ ಥೆರಪಿ'

‘‘ಅಜಿತ್‌ ಜೋಗಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಅವರಿನ್ನೂ ಕೋಮಾದಲ್ಲೇ ಇದ್ದಾರೆ. ಅವರ ಗಂಟಲಿನಲ್ಲಿ ಹುಣಸೆ ಬೀಜ ಸಿಲುಕಿಕೊಂಡಿದ್ದು, ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಉಸಿರಾಟಕ್ಕೆ ತೊಂದರೆಯಾಗುತ್ತಿದೆ," ಎಂದು ವೈದ್ಯರು ಹೇಳಿದ್ದಾರೆ.

Agencies 12 May 2020, 7:00 pm
Vijaya Karnataka Web Ajit Jogi
ರಾಯ್‌ಪುರ: ತೀವ್ರ ಹೃದಯಾಘಾತದ ಬಳಿಕ ಕೋಮಾ ಸ್ಥಿತಿಗೆ ತಲುಪಿರುವ ಛತ್ತೀಸ್‌ಗಢ ಮಾಜಿ ಸಿಎಂ ಅಜಿತ್‌ ಜೋಗಿ ಅವರ ಆರೋಗ್ಯ ಸ್ಥಿತಿ ಕಠಿಣವಾಗಿಯೇ ಇದ್ದು, ವೆಂಟಿಲೇಟರ್‌ ನೆರವು ಮುಂದುವರಿಸಲಾಗಿದೆ. ಈ ಮಧ್ಯೆ ಕೋಮಾದಲ್ಲಿರುವ ಅವರನ್ನು ಪ್ರಜ್ಞಾವಸ್ಥೆಗೆ ತರಲು ವೈದ್ಯರು ‘ಆಡಿಯೋ ಥೆರಪಿ’ ಆರಂಭಿಸಿದ್ದಾರೆ. ಇದರ ಭಾಗವಾಗಿ ಜೋಗಿ ಅವರ ನೆಚ್ಚಿನ ಹಾಡುಗಳನ್ನು ಇಯರ್‌ಫೋನ್‌ ಮೂಲಕ ಅವರಿಗೆ ಕೇಳಿಸಲಾಗುತ್ತಿದೆ.

ಇಲ್ಲಿನ ಶ್ರೀ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 74 ವರ್ಷದ ಜೋಗಿ ಅವರ ನರಗಳ ಚಟುವಟಿಕೆ ಬಹುತೇಕ ಸ್ತಬ್ಧವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

‘‘ಅಜಿತ್‌ ಜೋಗಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಅವರಿನ್ನೂ ಕೋಮಾದಲ್ಲೇ ಇದ್ದಾರೆ. ಅವರ ಗಂಟಲಿನಲ್ಲಿ ಹುಣಸೆ ಬೀಜ ಸಿಲುಕಿಕೊಂಡಿದ್ದು, ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಉಸಿರಾಟಕ್ಕೆ ತೊಂದರೆಯಾಗುತ್ತಿದೆ," ಎಂದು ವೈದ್ಯರು ಹೇಳಿದ್ದಾರೆ.

ಮೇ 9ರಂದು ಮಧ್ಯಾಹ್ನ ಗಂಟಲಿನಲ್ಲಿ ಹುಣಸೆ ಬೀಜ ಸಿಲುಕಿಕೊಂಡ ಹಿನ್ನೆಲೆಯಲ್ಲಿ, ಉಸಿರಾಟ ತೊಂದರೆಯಾಗಿ ಅವರು ಕುಸಿದು ಬಿದ್ದಿದ್ದರು. ಅವರಿಗೆ ಹೃದಯ ಸ್ತಂಭನ ಉಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ಬಳಿಕ ಅವರು ಕೋಮಾಕ್ಕೆ ಜಾರಿದ್ದರು.

ಛತ್ತೀಸ್‌ಗಢದ ಮೊದಲ ಮುಖ್ಯಮಂತ್ರಿಯಾಗಿದ್ದ ಅಜಿತ್‌ ಜೋಗಿಯವರನ್ನು ಕಾಂಗ್ರೆಸ್‌ ಪಕ್ಷ 2016ರಲ್ಲಿ ಪಕ್ಷದಿಂದ ಉಚ್ಛಾಟಿಸಿತ್ತು. ನಂತರ ಅವರು ತಮ್ಮದೇ ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ ಎಂಬ ಪಕ್ಷವನ್ನು ಸ್ಥಾಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ