ಆ್ಯಪ್ನಗರ

ಜಮ್ಮು & ಕಾಶ್ಮೀರ: ಹತ್ಯೆಯಾದ ಇಬ್ಬರು ಉಗ್ರರಲ್ಲಿ ಒಬ್ಬ ಮಾಜಿ ಪೊಲೀಸ್

ಮೃತರನ್ನು ಶೋಪಿಯಾನಾದ ಖಾಸಿಪೊರಾ ಪ್ರದೇಶದ ತಾರಿಖ್ ಅಹಮದ್ ಮತ್ತು ನಿಕ್ಲೂರಾ ಪ್ರದೇಶದ ಬಶ್ರಾತ್ ಅಹಮದ್ ಶಾ ಎಂದು ಗುರುತಿಸಲಾಗಿದ್ದು. ಬದ್ಗಾಮ್‌ನ ಪಖೇರ್‌ಪೋರಾದಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತಾರಿಖ್ AK-47 ರೈಫಲ್‌ನೊಂದಿಗೆ ಏಪ್ರಿಲ್ 25, 2018ರಂದು ನಾಪತ್ತೆಯಾಗಿದ್ದ . ಬಳಿಕ ಆತ ಲಷ್ಕರೆ ಸೇರಿದ್ದ ಎಂದು ತಿಳಿದು ಬಂದಿದೆ.

TIMESOFINDIA.COM 13 May 2019, 8:16 am
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹೆಂಡ್ ಸಿತಾಪೋರ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಹತ್ಯೆಯಾದ ಇಬ್ಬರು ಉಗ್ರರಲ್ಲಿ ಒಬ್ಬ ಮಾಜಿ ಪೊಲೀಸ್ ಎಂದು ಸೇನಾ ಮೂಲಗಳು ತಿಳಿಸಿವೆ. ಇನ್ನೊಬ್ಬ ಇತ್ತೀಚಿಗಷ್ಟೇ ಉಗ್ರ ಪಾಳಯಕ್ಕೆ ಸೇರಿದ್ದ ಎಂದು ಹೇಳಲಾಗುತ್ತಿದೆ.
Vijaya Karnataka Web Teror


ಮೃತರನ್ನು ಶೋಪಿಯಾನಾದ ಖಾಸಿಪೊರಾ ಪ್ರದೇಶದ ತಾರಿಖ್ ಅಹಮದ್ ಮತ್ತು ನಿಕ್ಲೂರಾ ಪ್ರದೇಶದ ಬಶ್ರಾತ್ ಅಹಮದ್ ಶಾ ಎಂದು ಗುರುತಿಸಲಾಗಿದ್ದು. ಬದ್ಗಾಮ್‌ನ ಪಖೇರ್‌ಪೋರಾದಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತಾರಿಖ್ AK-47 ರೈಫಲ್‌ನೊಂದಿಗೆ ಏಪ್ರಿಲ್ 25, 2018ರಂದು ನಾಪತ್ತೆಯಾಗಿದ್ದ . ಬಳಿಕ ಆತ ಲಷ್ಕರೆ ಸೇರಿದ್ದ ಎಂದು ತಿಳಿದು ಬಂದಿದೆ.

ಇಬ್ಬರು ಸೇರಿ ಕಾಶ್ಮೀರ ಕಣಿವೆಯಲ್ಲಿ ಹಲವು ದಾಳಿಗಳನ್ನು ನಡೆಸುವ ಹುನ್ನಾರ ನಡೆಸಿದ್ದರು. ಮೃತರ ಬಳಿ ಇದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಇಬ್ಬರ ತವರಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು, ಹಲವರು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು.

ಭದ್ರತಾ ದೃಷ್ಟಿಯಿಂದ ಶೋಪಿಯಾನ ಮತ್ತು ಖುಲ್ಗಾಮ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಒಳ ನುಸುಳುವಿಕೆ ಹೆಚ್ಚಾಗಿದ್ದು. ಕ್ಷಿಪ್ರ ಕಾರ್ಯಾಚರಣೆ ಮೂಲಕ ಸೇನೆ ಭಾನುವಾರ ಬೆಳಗ್ಗೆ ಉಗ್ರರ ಸಂಚನ್ನು ವಿಫಲಗೊಳಿಸಿತ್ತು.
ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದರು. ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಆಧಾರಿಸಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು. ಸೇನಾ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಸೇನಾ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದರು.

ಈ ಕಾರ್ಯಾಚರಣೆ ವೇಳೆ ಇಬ್ಬರು ಹತರಾಗಿದ್ದು, ಮತ್ತಿಬ್ಬರು ಉಗ್ರರಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ, ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ