ಆ್ಯಪ್ನಗರ

5 ಕೋಟಿಗೆ ಟಿಕೆಟ್‌ ಮಾರಾಟ!

ರಾಹುಲ್‌ ಗಾಂಧಿಯವರ ಆಪ್ತರಾಗಿದ್ದ ತನ್ವರ್‌ 2014ರಿಂದಲೂ ಪಿಸಿಸಿ ಅಧ್ಯಕ್ಷರಾಗಿದ್ದರು. ಸೋನಿಯಾ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿ­ದ್ದಂತೆಯೇ ತನ್ವರ್‌ ಅವರನ್ನು ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ, ಆ ಜಾಗಕ್ಕೆ ಕುಮಾರಿ ಸೆಲ್ಜಾ ಅವರನ್ನು ನೇಮಕ ಮಾಡಿ­ದರು.

PTI 3 Oct 2019, 5:00 am
ಹೊಸದಿಲ್ಲಿ: ವಿಧಾನಸಭೆ ಟಿಕೆಟ್‌ ಹಂಚಿಕೆಯಲ್ಲಿಭಾರಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ ಅಶೋಕ್‌ ತನ್ವರ್‌ ಅವರು ಸೋನಿಯಾ ಗಾಂಧಿ ನಿವಾಸದ ಎದುರು ಬುಧವಾರ ಧರಣಿ ನಡೆಸುವುದರೊಂದಿಗೆ ಹರಿಯಾಣ ಕಾಂಗ್ರೆಸ್‌ನ ಒಳಜಗಳ ಪಕ್ಷದ ಹೈಕಮಾಂಡ್‌ ಅಂಗಳವನ್ನೂ ತಲುಪಿದಂತಾಗಿದೆ. ನಂ.10, ಜನಪಥ್‌ನಲ್ಲಿರುವ ಸೋನಿಯಾ ನಿವಾಸದ ಎದುರು ತನ್ವರ್‌ ತಮ್ಮ ಬೆಂಬಲಿಗರೊಂದಿಗೆ ಧರಣಿ ನಡೆಸಿದರು. ಈ ಸಂದರ್ಭ­ದಲ್ಲಿಮಾತನಾಡಿದ ಅವರು, ''ರಾಜ್ಯದಲ್ಲಿಕಾಂಗ್ರೆಸ್‌ ಬೆಳೆಸಲು ನಾನು ಐದು ವರ್ಷ ರಕ್ತ ಬಸಿದಿದ್ದೇನೆ. ಈಗ ಚುನಾವಣಾ ಸಮಿತಿ ಅಧ್ಯಕ್ಷರಾಗಿ­ರುವ ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾ ಅವರು ಟಿಕೆಟ್‌ ಮಾರಾಟದಲ್ಲಿತೊಡಗಿಕೊಂಡಿ­ದ್ದಾರೆ. ಇಂತಹವರಿಂದ ಪಕ್ಷ ಸರ್ವನಾಶವಾಗು­ವುದು ಖಚಿತ,'' ಎಂದು ಕಿಡಿಕಾರಿದರು. ''ಪಕ್ಷ ನಿಷ್ಠರನ್ನು ಕಡೆಗಣಿಸಿ ಹಣ ನೀಡುವವರು ಮತ್ತು ತಮ್ಮ ಹಿಂಬಾಲಕರಿಗೆ ಟಿಕೆಟ್‌ ನೀಡಲಾಗುತ್ತಿದೆ. ಟಿಕೆಟ್‌ ಹಂಚಿಕೆಯಲ್ಲೇ ಅಕ್ರಮವಾದರೆ ಪಕ್ಷ ಗೆಲ್ಲುತ್ತದೆ ಎಂದು ನಿರೀಕ್ಷಿ­ಸುವುದಾದರೂ ಹೇಗೆ,'' ಎಂದು ಪ್ರಶ್ನಿಸಿದರು.
Vijaya Karnataka Web tanwar

ರಾಹುಲ್‌ ಗಾಂಧಿಯವರ ಆಪ್ತರಾಗಿದ್ದ ತನ್ವರ್‌ 2014ರಿಂದಲೂ ಪಿಸಿಸಿ ಅಧ್ಯಕ್ಷರಾಗಿದ್ದರು. ಸೋನಿಯಾ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿ­ದ್ದಂತೆಯೇ ತನ್ವರ್‌ ಅವರನ್ನು ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ, ಆ ಜಾಗಕ್ಕೆ ಕುಮಾರಿ ಸೆಲ್ಜಾ ಅವರನ್ನು ನೇಮಕ ಮಾಡಿ­ದರು. ಚುನಾವಣೆ ಸಮಯದಲ್ಲಿತಮ್ಮನ್ನು ಪದಚ್ಯುತಗೊಳಿಸಿದ್ದು ತನ್ವರ್‌ ಅವರಿಗೆ ತೀವ್ರ ಅಸಮಾಧಾನ ಉಂಟುಮಾಡಿತು. ಅದಕ್ಕಿಂತ ಹೆಚ್ಚಾಗಿ, 2004ರಿಂದ 2014ರವರೆಗೆ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್‌ ಸಿಂಗ್‌ ಹೂಡಾ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿದ್ದು ಮತ್ತಷ್ಟು ಕೆರಳಿಸಿತು. ಟಿಕೆಟ್‌ ಹಂಚಿಕೆಯಲ್ಲಿತಮ್ಮ ಮಾತು ನಡೆಯುವುದಿಲ್ಲಎನ್ನುವುದು ಮನವರಿಕೆ ಆಗುತ್ತಿದ್ದಂತೆ ತನ್ವರ್‌ ಅವರು ಸೋನಿಯಾ ಮನೆ ಅಂಗಳಕ್ಕೇ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ತಿಂಗಳ 21ರಂದು ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆದಿನವಾಗಿದೆ. ಇಂತಹ ಸಂದರ್ಭದಲ್ಲಿಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸುವುದು ಸೋನಿಯಾಗೆ ದೊಡ್ಡ ಸವಾಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ